ಅತ್ತ ಅರಳೀಮರ ವೃತ್ತದಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ಈ ಹಿಂದೆ ಇಲ್ಲಿನ ಜನರು ದೇವೇಗೌಡರಿಗೆ , ಕುಮಾರಸ್ವಾಮಿಗೆ ಅವಕಾಶ ನೀಡಿದ್ದೀರಿ. ಈಗ ನನಗೂ ಅವಕಾಶ ಕೊಡಿ. ನನಗೆ ಹೂವಿನ ಹಾರ ಬೇಡ. ನಾನು ಇಲ್ಲಿ ಅಭ್ಯರ್ಥಿ ನಿಲ್ಲಿಸುತ್ತೇನೆ. ಅವರನ್ನು ವಿಧಾನಸೌಧಕ್ಕೆ ಕಳುಹಿಸಿಕೊಡಿ. ಅದೇ ನನಗೆ ಹೂವಿನ ಹಾರ’ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಆಗುವ ಹಂಬಲ ವ್ಯಕ್ತಪಡಿಸಿದರು.