<p><strong>ಕುದೂರು</strong>: ಪಟ್ಟಣದಲ್ಲಿ ಗಿಡಗಂಟೆ, ತ್ಯಾಜ್ಯದಿಂದ ಆವೃತವಾಗಿದ್ದ ರಾಜಕಾಲುವೆ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಭಾನುವಾರ ಚಾಲನೆ ನೀಡಿದೆ.</p>.<p>ರಾಜಕಾಲುವೆ ಹಾಗೂ ಚರಂಡಿ ಅಧ್ವಾನ ಕುರಿತು ಪ್ರಜಾವಾಣಿಯ ನಮ್ಮ ಜನ ನಮ್ಮ ಧ್ವನಿ ಅಂಕಣದಲ್ಲಿ 'ರಾಜಕಾಲುವೆ ಚರಂಡಿ ಆವರಿಸಿದ ಕಸ-ಗಿಡಗಂಟಿ' ಶೀರ್ಷಿಕೆಯಡಿ ಜೂನ್ 17ರಂದು ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಪಂಚಾಯಿತಿ ಅಧಿಕಾರಿಗಳು ರಾಜಕಾಲುವೆ ಹಾಗೂ ಚರಂಡಿಗಳ ಸ್ವಚ್ಛತೆಗೆ ಕ್ರಮವಹಿಸಿದ್ದಾರೆ.</p>.<p>ಪೊಲೀಸ್ ಠಾಣೆ ಎದುರಿನ ಸಂತೆ ಬೀದಿ ರಸ್ತೆಯ ಚರಂಡಿಗೆ ವಾಟದ ಸಮಸ್ಯೆ ಇದ್ದು ಹೊಸದಾಗಿ ಚರಂಡಿ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದೆ. ಇನ್ನು ಕೆಲವು ದಿನಗಳಲ್ಲಿ ಶಿವಗಂಗೆ ಮುಖ್ಯರಸ್ತೆಯ ರಾಜಕಾಲುವೆಯನ್ನು ಸ್ವಚ್ಛಗೊಳಿಸಲಾಗುವುದು.</p>.<p>ಮಳೆಗಾಲ ಎದುರಿಸುವ ನಿಟ್ಟಿನಲ್ಲಿ ನೀರು ನಿಲ್ಲುವ ಸ್ಥಳ ಗುರುತಿಸಿ ಸ್ವಚ್ಛಗೊಳಿಸಲಾಗುತ್ತಿದೆ ಎಂದು ಪಿಡಿಒ ಪುರುಷೋತ್ತಮ್ ತಿಳಿಸಿದರು.</p>.<p><strong>ಬಾಕ್ಸ್</strong>: ನಾಗರಿಕರು ಸಹ ತ್ಯಾಜ್ಯ ವಿಲೇವಾರಿಯಲ್ಲಿ ಪ್ರಜ್ಞಾವಂತಿಕೆ ಮೆರೆಯಬೇಕು. ಹಸಿ ಕಸ, ಒಣ ಕಸ ವಿಂಗಡಿಸದೆ ಕಸದ ವಾಹನಕ್ಕೆ ನೀಡಿದರೆ ಅದನ್ನು ಇನ್ನುಮುಂದೆ ತೆಗೆದುಕೊಳ್ಳದಂತೆ ವಾಹನ ಚಾಲಕರಿಗೆ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುದೂರು</strong>: ಪಟ್ಟಣದಲ್ಲಿ ಗಿಡಗಂಟೆ, ತ್ಯಾಜ್ಯದಿಂದ ಆವೃತವಾಗಿದ್ದ ರಾಜಕಾಲುವೆ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಭಾನುವಾರ ಚಾಲನೆ ನೀಡಿದೆ.</p>.<p>ರಾಜಕಾಲುವೆ ಹಾಗೂ ಚರಂಡಿ ಅಧ್ವಾನ ಕುರಿತು ಪ್ರಜಾವಾಣಿಯ ನಮ್ಮ ಜನ ನಮ್ಮ ಧ್ವನಿ ಅಂಕಣದಲ್ಲಿ 'ರಾಜಕಾಲುವೆ ಚರಂಡಿ ಆವರಿಸಿದ ಕಸ-ಗಿಡಗಂಟಿ' ಶೀರ್ಷಿಕೆಯಡಿ ಜೂನ್ 17ರಂದು ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಪಂಚಾಯಿತಿ ಅಧಿಕಾರಿಗಳು ರಾಜಕಾಲುವೆ ಹಾಗೂ ಚರಂಡಿಗಳ ಸ್ವಚ್ಛತೆಗೆ ಕ್ರಮವಹಿಸಿದ್ದಾರೆ.</p>.<p>ಪೊಲೀಸ್ ಠಾಣೆ ಎದುರಿನ ಸಂತೆ ಬೀದಿ ರಸ್ತೆಯ ಚರಂಡಿಗೆ ವಾಟದ ಸಮಸ್ಯೆ ಇದ್ದು ಹೊಸದಾಗಿ ಚರಂಡಿ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದೆ. ಇನ್ನು ಕೆಲವು ದಿನಗಳಲ್ಲಿ ಶಿವಗಂಗೆ ಮುಖ್ಯರಸ್ತೆಯ ರಾಜಕಾಲುವೆಯನ್ನು ಸ್ವಚ್ಛಗೊಳಿಸಲಾಗುವುದು.</p>.<p>ಮಳೆಗಾಲ ಎದುರಿಸುವ ನಿಟ್ಟಿನಲ್ಲಿ ನೀರು ನಿಲ್ಲುವ ಸ್ಥಳ ಗುರುತಿಸಿ ಸ್ವಚ್ಛಗೊಳಿಸಲಾಗುತ್ತಿದೆ ಎಂದು ಪಿಡಿಒ ಪುರುಷೋತ್ತಮ್ ತಿಳಿಸಿದರು.</p>.<p><strong>ಬಾಕ್ಸ್</strong>: ನಾಗರಿಕರು ಸಹ ತ್ಯಾಜ್ಯ ವಿಲೇವಾರಿಯಲ್ಲಿ ಪ್ರಜ್ಞಾವಂತಿಕೆ ಮೆರೆಯಬೇಕು. ಹಸಿ ಕಸ, ಒಣ ಕಸ ವಿಂಗಡಿಸದೆ ಕಸದ ವಾಹನಕ್ಕೆ ನೀಡಿದರೆ ಅದನ್ನು ಇನ್ನುಮುಂದೆ ತೆಗೆದುಕೊಳ್ಳದಂತೆ ವಾಹನ ಚಾಲಕರಿಗೆ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>