ಆಂದೋಲನದ ಸಲುವಾಗಿ ಮುದ್ರಿಸಿರುವ ಸರ್ಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯಗಳ ಕುರಿತ ಕರಪತ್ರ
ಬೇಸಿಗೆ ರಜೆ ಶುರುವಾಗುವುದಕ್ಕೆ ಎರಡು ದಿನ ಮುಂಚಿನಿಂದಲೇ ವಿಶೇಷ ಶಾಲಾ ದಾಖಲಾತಿ ಆಂದೋಲನ ಪ್ರಾರಂಭಿಸಿದೆವು. ಮನೆ ಮನೆ ಭೇಟಿ ಸಂದರ್ಭದಲ್ಲೇ ದಾಖಲಾತಿ ಫಾರಂ ಕೊಟ್ಟು ಶಾಲೆಗೆ ಸೇರಿಸಿಕೊಳ್ಳಲಾಗುತ್ತಿದೆ
ಪಿ. ಸೋಮಲಿಂಗಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಾಮನಗರ
ಸರ್ಕಾರಿ ಶಾಲೆ ಶಿಕ್ಷಣವು ಕಲಿಕೆ ಕಾಳಜಿ ಬೆಂಬಲ ಎಂಬ ಮೂಲತತ್ವಗಳನ್ನು ಆಧರಿಸಿದೆ. ತಾಲ್ಲೂಕಿನಲ್ಲಿ ಆರಂಭಿಸಿರುವ ವಿಶೇಷ ದಾಖಲಾತಿ ಆಂದೋಲನದಿಂದ ಸರ್ಕಾರಿ ಶಾಲೆಗಳು ಮತ್ತಷ್ಟು ಸಬಲೀಕರಣ ಆಗಲಿವೆ