ರಾಮನಗರ: ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ರೀಲರ್ ಗಳು ಶನಿವಾರ ರೇಷ್ಮೆಗೂಡು ಖರೀದಿ ಪ್ರಕ್ರಿಯೆಯಿಂದ ಹಿಂದೆ ಉಳಿದಿದ್ದಾರೆ. ಇದರಿಂದಾಗಿ ಇಲ್ಲಿನ ರೇಷ್ಮೆಗೂಡು ಹರಾಜು ಮಾರುಕಟ್ಟೆಯಲ್ಲಿ ವಹಿವಾಟು ಸ್ಥಗಿತಗೊಂಡಿದೆ.
ರೈತರು ರಾತ್ರಿಯಿಂದಲೇ ಗೂಡು ತಂದಿದ್ದು, ಮಾರುಕಟ್ಟೆಯಲ್ಲಿ ಹರಡಿದ್ದಾರೆ. 10.30ಕ್ಕೆ ಇ-ಹರಾಜು ಪ್ರಕ್ರಿಯೆ ನಡೆಯಬೇಕಿದೆ. ಆದರೆ ರೀಲರ್ ಗಳೆಲ್ಲರೂ ಹೊರ ನಡೆದಿದ್ದಾರೆ.
ಹೊರ ರಾಜ್ಯಗಳಿಗೆ ನೂಲು ಸಾಗಿಸಲು ಪಾಸ್ ನೀಡಬೇಕು. ಕೆ ಎಸ್ ಎಂಬಿಯಿಂದ ಪ್ರತಿ ರೀಲರ್ ಗೆ ಐದು ಲಕ್ಷ ರೂಪಾಯಿ ಅಡಮಾನ ಸಾಲ ನೀಡಬೇಕು ಎನ್ನುವುದು ರೀಲರ್ ಗಳ ಬೇಡಿಕೆಯಾಗಿದೆ.