ಸದ್ಯ ಕನಕಪುರದಲ್ಲಿ ವಾಸ ಇರುವ, ತಮಿಳುನಾಡು ಮೂಲದ ಬಟ್ಟೆ ವ್ಯಾಪಾರಿಯೊಬ್ಬರ 16 ವರ್ಷದ ಬಾಲಕ ಕಳೆದ ಶುಕ್ರವಾರ ಸೈಬರ್ ಕೇಂದ್ರಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದು, ಬಳಿಕ ನಾಪತ್ತೆಯಾಗಿದ್ದ. ಅದಾದ ಕೆಲ ಸಮಯದಲ್ಲಿ ಬಾಲಕನ ನೆರೆ ಮನೆಯವರಿಗೆ ವಾಟ್ಸಪ್ ನಲ್ಲಿ ಒಂದಿಷ್ಟು ಚಿತ್ರಗಳು ಬಂದಿದ್ದವು. ಆತನನ್ನು ಶೌಚಾಲಯವೊಂದರಲ್ಲಿ ಕಟ್ಟಿ ಹಾಕಲಾಗಿತ್ತು. 5 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆಯನ್ನೂ ಸಂದೇಶದ ಮೂಲಕ ಇಡಲಾಗಿತ್ತು. ಇದರಿಂದ ಆತಂಕಕ್ಕೆ ಒಳಗಾದ ಪೋಷಕರು ಕನಕಪುರ ಟೌನ್ ಠಾಣೆಯಲ್ಲಿ ದೂರು ನೀಡಿದ್ದರು.