<p><strong>ರಾಮನಗರ:</strong> ಗ್ರಾಮೀಣ ಪ್ರದೇಶದ ಮಹಿಳೆಯರು ತಮ್ಮ ಕಸುಬುಗಳನ್ನು ಸುಧಾರಿಸಿಕೊಂಡು ತಾವು ತಯಾರಿಸುವ ಉತ್ಪನ್ನಗಳ ಮೌಲ್ಯವರ್ಧನ ಮಾಡಿಕೊಂಡು ಉದ್ಯಮಿಗಳಾಗಬೇಕು ಎಂದು ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕಿ ಅನುರಾಧ ಸಲಹೆ ನೀಡಿದರು.</p>.<p>ನಗರದ ಗುರುಭವನದಲ್ಲಿ ಧಾನ್ ಫೌಂಡೇಷನ್ ಶನಿವಾರ ಹಮ್ಮಿಕೊಂಡಿದ್ದ ಸುಸ್ಥಿರ ಆರ್ಥಿಕ ಸೇರ್ಪಡೆಗಾಗಿ ಜಾಗೃತಿ ಜಾಥಾ ವಾಕಥಾನ್ -2026 ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಮಹಿಳೆಯರು ಕೇವಲ ಕೆಲಸಗಾರರಾಗಿ ಉಳಿಯದೆ, ಬ್ಯಾಂಕ್ ಸೌಲಭ್ಯ ಬಳಸಿಕೊಂಡು ಉದ್ಯಮಿಗಳಾಗಿ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದರು.</p>.<p>ಧಾನ್ ಫೌಂಡೇಷನ್ ರಾಮನಗರ ವಲಯ ಸಂಯೋಜಕ ಕೆ.ಟಿ. ರಾಘವೇಂದ್ರ ಮಾತನಾಡಿ, ಫೌಂಡೇಷನ್ ವತಿಯಿಂದ ದೇಶದ್ಯಾಂತ 60 ಜಿಲ್ಲೆಗಳಲ್ಲಿ ಜಾಗೃತಿ ಜಾಥಾ ನಡೆಯುತ್ತಿದೆ. ಎಲ್ಲರೂ ಆರ್ಥಿಕವಾಗಿ ಸಬಲರಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.</p>.<p>ಜಿಲ್ಲೆಯಲ್ಲಿ 2000ರಲ್ಲಿ ಹಾರೋಹಳ್ಳಿಯಲ್ಲಿ ಫೌಂಡೇಷನ್ನ ಮೊದಲ ಮಹಿಳಾ ಒಕ್ಕೂಟ ಪ್ರಾರಂಭಿಸಲಾಯಿತು. ಇದೀಗ ನಮ್ಮರ ವಲಯದಲ್ಲಿ 1,750 ಸಂಘಗಳಿದ್ದು, 37 ಸಾವಿರ ಮಹಿಳಾ ಸದಸ್ಯರೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.</p>.<p>ರಾಮನಗರ ಲೀಡ್ ಬ್ಯಾಂಕ್ ಮ್ಯಾನೇಜರ್ ಮೋಹನ್ ಕುಮಾರ್, ‘ಮಹಿಳೆಯರಿಂದ ಬ್ಯಾಂಕಿಂಗ್ ಕ್ಷೇತ್ರ ಅಭಿವೃದ್ಧಿಯಾಗುತ್ತಿದೆ. ಸ್ವಸಹಾಯ ಸಂಘದ ಮೂಲಕ ಸಿಗುವ ಸಾಲ ಸದ್ಭಳಕೆ ಮಾಡಿಕೊಂಡು ತಮ್ಮ ಕುಟುಂಬವನ್ನು ಆರ್ಥಿಕವಾಗಿ ಸಧೃಡ ಮಾಡುತ್ತಿದ್ದಾರೆ ಎಂದರು.</p>.<p>ರಾಮನಗರದ ಜೂನಿಯರ್ ಕಾಲೇಜು ಆವರಣದಿಂದ ಶುರುವಾದ ಜಾಥಾ ಬಿ.ಎಂ. ರಸ್ತೆ, ಆಂಜನೇಯ ಗೋಪುರ ಹಾದು ಎಸ್ಪಿ ಕಚೇರಿ ವೃತ್ತ, ಜೂನಿಯರ್ ಕಾಲೇಜು ರಸ್ತೆ ಹಾದು ಗುರುಭವನದಲ್ಲಿ ಅಂತ್ಯಗೊಂಡಿತು. ನಂತರ ವೇದಿಕೆ ಕಾರ್ಯಕ್ರಮ ಶುರುವಾಯಿತು.</p>.<p>ಕೆನರ್ ಬ್ಯಾಂಕ್ ವೃತ್ತ ಅಧಿಕಾರಿ ಅಖಿಲ್ ದೇವ್, ರಂಗನಾಯಕ್, ವೀರಾಂಜನೇಯ, ಫೌಂಡೇಷನ್ ಸಿಬ್ಬಂದಿ ಗಿರೀಶ್, ಶೋಭಾರಾಣಿ, ತನುಜಾ, ಮಂಜುನಾಥ ಶೆಟ್ಟಿ, ಅಭಿಷೇಕ್, ವಲಯದ ಅಧ್ಯಕ್ಷೆ ಅನುಸೂಯ ಇದ್ದರು. ಜಿಲ್ಲೆಯ ವಿವಿಧ ಭಾಗದಿಂದ ಮಹಿಳೆಯರು ಬಂದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ:</strong> ಗ್ರಾಮೀಣ ಪ್ರದೇಶದ ಮಹಿಳೆಯರು ತಮ್ಮ ಕಸುಬುಗಳನ್ನು ಸುಧಾರಿಸಿಕೊಂಡು ತಾವು ತಯಾರಿಸುವ ಉತ್ಪನ್ನಗಳ ಮೌಲ್ಯವರ್ಧನ ಮಾಡಿಕೊಂಡು ಉದ್ಯಮಿಗಳಾಗಬೇಕು ಎಂದು ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕಿ ಅನುರಾಧ ಸಲಹೆ ನೀಡಿದರು.</p>.<p>ನಗರದ ಗುರುಭವನದಲ್ಲಿ ಧಾನ್ ಫೌಂಡೇಷನ್ ಶನಿವಾರ ಹಮ್ಮಿಕೊಂಡಿದ್ದ ಸುಸ್ಥಿರ ಆರ್ಥಿಕ ಸೇರ್ಪಡೆಗಾಗಿ ಜಾಗೃತಿ ಜಾಥಾ ವಾಕಥಾನ್ -2026 ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಮಹಿಳೆಯರು ಕೇವಲ ಕೆಲಸಗಾರರಾಗಿ ಉಳಿಯದೆ, ಬ್ಯಾಂಕ್ ಸೌಲಭ್ಯ ಬಳಸಿಕೊಂಡು ಉದ್ಯಮಿಗಳಾಗಿ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದರು.</p>.<p>ಧಾನ್ ಫೌಂಡೇಷನ್ ರಾಮನಗರ ವಲಯ ಸಂಯೋಜಕ ಕೆ.ಟಿ. ರಾಘವೇಂದ್ರ ಮಾತನಾಡಿ, ಫೌಂಡೇಷನ್ ವತಿಯಿಂದ ದೇಶದ್ಯಾಂತ 60 ಜಿಲ್ಲೆಗಳಲ್ಲಿ ಜಾಗೃತಿ ಜಾಥಾ ನಡೆಯುತ್ತಿದೆ. ಎಲ್ಲರೂ ಆರ್ಥಿಕವಾಗಿ ಸಬಲರಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.</p>.<p>ಜಿಲ್ಲೆಯಲ್ಲಿ 2000ರಲ್ಲಿ ಹಾರೋಹಳ್ಳಿಯಲ್ಲಿ ಫೌಂಡೇಷನ್ನ ಮೊದಲ ಮಹಿಳಾ ಒಕ್ಕೂಟ ಪ್ರಾರಂಭಿಸಲಾಯಿತು. ಇದೀಗ ನಮ್ಮರ ವಲಯದಲ್ಲಿ 1,750 ಸಂಘಗಳಿದ್ದು, 37 ಸಾವಿರ ಮಹಿಳಾ ಸದಸ್ಯರೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.</p>.<p>ರಾಮನಗರ ಲೀಡ್ ಬ್ಯಾಂಕ್ ಮ್ಯಾನೇಜರ್ ಮೋಹನ್ ಕುಮಾರ್, ‘ಮಹಿಳೆಯರಿಂದ ಬ್ಯಾಂಕಿಂಗ್ ಕ್ಷೇತ್ರ ಅಭಿವೃದ್ಧಿಯಾಗುತ್ತಿದೆ. ಸ್ವಸಹಾಯ ಸಂಘದ ಮೂಲಕ ಸಿಗುವ ಸಾಲ ಸದ್ಭಳಕೆ ಮಾಡಿಕೊಂಡು ತಮ್ಮ ಕುಟುಂಬವನ್ನು ಆರ್ಥಿಕವಾಗಿ ಸಧೃಡ ಮಾಡುತ್ತಿದ್ದಾರೆ ಎಂದರು.</p>.<p>ರಾಮನಗರದ ಜೂನಿಯರ್ ಕಾಲೇಜು ಆವರಣದಿಂದ ಶುರುವಾದ ಜಾಥಾ ಬಿ.ಎಂ. ರಸ್ತೆ, ಆಂಜನೇಯ ಗೋಪುರ ಹಾದು ಎಸ್ಪಿ ಕಚೇರಿ ವೃತ್ತ, ಜೂನಿಯರ್ ಕಾಲೇಜು ರಸ್ತೆ ಹಾದು ಗುರುಭವನದಲ್ಲಿ ಅಂತ್ಯಗೊಂಡಿತು. ನಂತರ ವೇದಿಕೆ ಕಾರ್ಯಕ್ರಮ ಶುರುವಾಯಿತು.</p>.<p>ಕೆನರ್ ಬ್ಯಾಂಕ್ ವೃತ್ತ ಅಧಿಕಾರಿ ಅಖಿಲ್ ದೇವ್, ರಂಗನಾಯಕ್, ವೀರಾಂಜನೇಯ, ಫೌಂಡೇಷನ್ ಸಿಬ್ಬಂದಿ ಗಿರೀಶ್, ಶೋಭಾರಾಣಿ, ತನುಜಾ, ಮಂಜುನಾಥ ಶೆಟ್ಟಿ, ಅಭಿಷೇಕ್, ವಲಯದ ಅಧ್ಯಕ್ಷೆ ಅನುಸೂಯ ಇದ್ದರು. ಜಿಲ್ಲೆಯ ವಿವಿಧ ಭಾಗದಿಂದ ಮಹಿಳೆಯರು ಬಂದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>