<p><strong>ಕನಕಪುರ</strong>: ಹಾಡು ಹಗಲೇ ಅಂಚೆ ಕಚೇರಿಯಲ್ಲಿ ಕ್ಯಾಸಿಯರ್ ಮತ್ತು ಪೋಸ್ಟ್ ಮಾಸ್ಟರ್ ಗಮನ ಬೇರೆ ಕಡೆ ಸೆಳೆದು ₹5 ಲಕ್ಷ ಕಳ್ಳತನ ಮಾಡಿರುವ ಘಟನೆ ಬುಧವಾರ ನಡೆದಿದೆ.</p>.<p>ನಗರದ ಎಂ.ಎಚ್.ಎಸ್ ರಸ್ತೆಯಲ್ಲಿರುವ ಅಂಚೆ ಕಚೇರಿಯಲ್ಲಿ ಬುದುವಾರ ಮಧ್ಯಾಹ್ನ 12 ಗಂಟೆಯಲ್ಲಿ ಈ ಘಟನೆ ನಡೆದಿದ್ದು, ನಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.</p>.<p>ಬುಧವಾರ ಬೆಳೆಗ್ಗೆ 11ಕ್ಕೆ ಅಂಚೆ ಕಚೇರಿ ನೌಕರರು ಎಸ್ಬಿಐ ಬ್ಯಾಂಕ್ನಿಂದ ₹ 45 ಲಕ್ಷ ಹಣ ತಂದು ಇಟ್ಟಿದ್ದರು. ಅದರಲ್ಲಿ ಸಾತನೂರು ಅಂಚೆ ಕಚೇರಿಗೆ ₹ 7.5 ಲಕ್ಷ, ಕೋಡಿಹಳ್ಳಿ ಅಂಚೆ ಕಚೇರಿಗೆ ₹ 8 ಲಕ್ಷ ಕೊಟ್ಟು, ಉಳಿದ ಹಣವನ್ನು ಖಜಾನೆ ಕೌಂಟರ್ ಬಳಿ ಇಟ್ಟಿದ್ದರು. ಮಧ್ಯಾಹ್ನ ಕ್ಯಾಸಿಯರ್ ಮಹಾಲಕ್ಷ್ಮಿ ಖಜಾನೆಯಲ್ಲಿ ಹಣವನ್ನು ಪರಿಶೀಲನೆ ಮಾಡಿದಾಗ 5 ಲಕ್ಷ ಕಡಿಮೆ ಇರುವುದು ಬೆಳಕಿಗೆ ಬಂದಿದೆ. ಸಿಸಿಟಿವಿ ಪರಿಶೀಲಿಸಿದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ.</p>.<p>ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ತನಿಖೆ ಕೈಗೊಂಡಿದ್ದು ಕಳ್ಳರ ಬಂಧನಕ್ಕೆ ಶೋಧ ಕಾರ್ಯ ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ</strong>: ಹಾಡು ಹಗಲೇ ಅಂಚೆ ಕಚೇರಿಯಲ್ಲಿ ಕ್ಯಾಸಿಯರ್ ಮತ್ತು ಪೋಸ್ಟ್ ಮಾಸ್ಟರ್ ಗಮನ ಬೇರೆ ಕಡೆ ಸೆಳೆದು ₹5 ಲಕ್ಷ ಕಳ್ಳತನ ಮಾಡಿರುವ ಘಟನೆ ಬುಧವಾರ ನಡೆದಿದೆ.</p>.<p>ನಗರದ ಎಂ.ಎಚ್.ಎಸ್ ರಸ್ತೆಯಲ್ಲಿರುವ ಅಂಚೆ ಕಚೇರಿಯಲ್ಲಿ ಬುದುವಾರ ಮಧ್ಯಾಹ್ನ 12 ಗಂಟೆಯಲ್ಲಿ ಈ ಘಟನೆ ನಡೆದಿದ್ದು, ನಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.</p>.<p>ಬುಧವಾರ ಬೆಳೆಗ್ಗೆ 11ಕ್ಕೆ ಅಂಚೆ ಕಚೇರಿ ನೌಕರರು ಎಸ್ಬಿಐ ಬ್ಯಾಂಕ್ನಿಂದ ₹ 45 ಲಕ್ಷ ಹಣ ತಂದು ಇಟ್ಟಿದ್ದರು. ಅದರಲ್ಲಿ ಸಾತನೂರು ಅಂಚೆ ಕಚೇರಿಗೆ ₹ 7.5 ಲಕ್ಷ, ಕೋಡಿಹಳ್ಳಿ ಅಂಚೆ ಕಚೇರಿಗೆ ₹ 8 ಲಕ್ಷ ಕೊಟ್ಟು, ಉಳಿದ ಹಣವನ್ನು ಖಜಾನೆ ಕೌಂಟರ್ ಬಳಿ ಇಟ್ಟಿದ್ದರು. ಮಧ್ಯಾಹ್ನ ಕ್ಯಾಸಿಯರ್ ಮಹಾಲಕ್ಷ್ಮಿ ಖಜಾನೆಯಲ್ಲಿ ಹಣವನ್ನು ಪರಿಶೀಲನೆ ಮಾಡಿದಾಗ 5 ಲಕ್ಷ ಕಡಿಮೆ ಇರುವುದು ಬೆಳಕಿಗೆ ಬಂದಿದೆ. ಸಿಸಿಟಿವಿ ಪರಿಶೀಲಿಸಿದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ.</p>.<p>ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ತನಿಖೆ ಕೈಗೊಂಡಿದ್ದು ಕಳ್ಳರ ಬಂಧನಕ್ಕೆ ಶೋಧ ಕಾರ್ಯ ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>