<p><strong>ಕನಕಪುರ</strong>: ಎರಡನೇ ದಿನದ ಕನಕೋತ್ಸವ ಯೋಗ, ಮ್ಯಾರಥಾನ್, ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ, ಸಮೂಹ ನೃತ್ಯ, ಕುಸ್ತಿ ಪಂದ್ಯಾವಳಿಯೊಂದಿಗೆ ಗುರುವಾರ ಯಶಸ್ವಿಯಾಗಿ ನಡೆಯಿತು.</p>.<p>ಬೆಳಿಗ್ಗೆ 5.30ಕ್ಕೆ ಯೋಗಾಸನದೊಂದಿಗೆ ತಾಲ್ಲೂಕಿನ ಜನರಿಗಾಗಿ ನಡೆಯುತ್ತಿರುವ ಕನಕೋತ್ಸವ ಪ್ರಾರಂಭಗೊಂಡಿತು.</p>.<p>‘ರನ್ ಫಾರ್ ಮನರೇಗಾ’ ಎಂಬ ಅಡಿ ಬರಹದೊಂದಿಗೆ ‘ಮನರೇಗಾ ಉಳಿಸಿ, ಗ್ರಾಮೀಣ ಬದುಕು ರಕ್ಷಿಸಿ’ ಘೋಷವಾಕ್ಯದೊಂದಿಗೆ 1,500 ಮಂದಿ ಮ್ಯಾರಥಾನ್ ಓಟವನ್ನು ವೇದಿಕೆ ಕಾರ್ಯಕ್ರಮ ನಡೆಯುತ್ತಿರುವ ತಾಲ್ಲೂಕು ಕ್ರೀಡಾಂಗಣದಿಂದ ಪ್ರಾರಂಭಿಸಿದರು.</p>.<p>ಹೌಸಿಂಗ್ ಬೋರ್ಡ್ ಮಾರ್ಗವಾಗಿ ಶಿವನಹಳ್ಳಿ, ಶಿವನಹಳ್ಳಿ ಮೆಗಾ ಡೇರಿ ಬಳಸಿಕೊಂಡು ಶಿವನಳ್ಳಿ ಮಾರ್ಗವಾಗಿ ಮತ್ತೆ ಹೌಸಿಂಗ್ ಬೋರ್ಡ್ ಮಾರ್ಗವಾಗಿ ತಾಲ್ಲೂಕು ಕ್ರೀಡಾಂಗಣದಲ್ಲಿ ಮುಕ್ತಾಯಗೊಳಿಸಿದರು.</p>.<p>ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಮ್ಯಾರಥಾನ್ ಓಟಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಮೂಹ ನೃತ್ಯ ಸ್ಪರ್ಧೆಯಲ್ಲಿ ನೂರಾರು ತಂಡಗಳು ಪ್ರದರ್ಶನ ನೀಡಿದವು.</p>.<p>ಪುಟಾಣಿಗಳು ಮತ್ತು ಯುವ ಕುಸ್ತಿ ಪಟುಗಳು, ರಾಜ್ಯಮಟ್ಟದ ಪೈಲ್ವಾನರು ಕುಸ್ತಿ ಪಂದ್ಯಾವಳಿಯಲ್ಲಿ ಸೆಣೆಸಾಡಿ ಉತ್ತಮ ಪ್ರದರ್ಶನ ನೀಡಿದರು. ಗರಡಿ ಕುಸ್ತಿಗಳನ್ನು ನೋಡಲು ಹಿರಿಯ ಪೈಲ್ವಾನರು, ಸಾರ್ವಜನಿಕರು ಪ್ರೋತ್ಸಾಹಿಸಿದರು.</p>.<p>ಊಟದ ವ್ಯವಸ್ಥೆ: ಡಿಕೆಎಸ್ ಚಾರಿಟಬಲ್ ಟ್ರಸ್ಟ್ನಿಂದ ಉರ್ದು ಶಾಲೆ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.</p>.<p>ಜನಸಾಗರ: ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕ್ರಮ ವೀಕ್ಷಿಸಿದರು. ನಗರದಲ್ಲಿ ಎಲ್ಲಿ ನೋಡಿದರು ಜನರೇ ಕಾಣುತ್ತಿದ್ದರು. ವೇದಿಕೆ ಮುಂಭಾಗದಲ್ಲಿ ಜನಸಾಗರವೇ ಸೇರಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ</strong>: ಎರಡನೇ ದಿನದ ಕನಕೋತ್ಸವ ಯೋಗ, ಮ್ಯಾರಥಾನ್, ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ, ಸಮೂಹ ನೃತ್ಯ, ಕುಸ್ತಿ ಪಂದ್ಯಾವಳಿಯೊಂದಿಗೆ ಗುರುವಾರ ಯಶಸ್ವಿಯಾಗಿ ನಡೆಯಿತು.</p>.<p>ಬೆಳಿಗ್ಗೆ 5.30ಕ್ಕೆ ಯೋಗಾಸನದೊಂದಿಗೆ ತಾಲ್ಲೂಕಿನ ಜನರಿಗಾಗಿ ನಡೆಯುತ್ತಿರುವ ಕನಕೋತ್ಸವ ಪ್ರಾರಂಭಗೊಂಡಿತು.</p>.<p>‘ರನ್ ಫಾರ್ ಮನರೇಗಾ’ ಎಂಬ ಅಡಿ ಬರಹದೊಂದಿಗೆ ‘ಮನರೇಗಾ ಉಳಿಸಿ, ಗ್ರಾಮೀಣ ಬದುಕು ರಕ್ಷಿಸಿ’ ಘೋಷವಾಕ್ಯದೊಂದಿಗೆ 1,500 ಮಂದಿ ಮ್ಯಾರಥಾನ್ ಓಟವನ್ನು ವೇದಿಕೆ ಕಾರ್ಯಕ್ರಮ ನಡೆಯುತ್ತಿರುವ ತಾಲ್ಲೂಕು ಕ್ರೀಡಾಂಗಣದಿಂದ ಪ್ರಾರಂಭಿಸಿದರು.</p>.<p>ಹೌಸಿಂಗ್ ಬೋರ್ಡ್ ಮಾರ್ಗವಾಗಿ ಶಿವನಹಳ್ಳಿ, ಶಿವನಹಳ್ಳಿ ಮೆಗಾ ಡೇರಿ ಬಳಸಿಕೊಂಡು ಶಿವನಳ್ಳಿ ಮಾರ್ಗವಾಗಿ ಮತ್ತೆ ಹೌಸಿಂಗ್ ಬೋರ್ಡ್ ಮಾರ್ಗವಾಗಿ ತಾಲ್ಲೂಕು ಕ್ರೀಡಾಂಗಣದಲ್ಲಿ ಮುಕ್ತಾಯಗೊಳಿಸಿದರು.</p>.<p>ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಮ್ಯಾರಥಾನ್ ಓಟಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಮೂಹ ನೃತ್ಯ ಸ್ಪರ್ಧೆಯಲ್ಲಿ ನೂರಾರು ತಂಡಗಳು ಪ್ರದರ್ಶನ ನೀಡಿದವು.</p>.<p>ಪುಟಾಣಿಗಳು ಮತ್ತು ಯುವ ಕುಸ್ತಿ ಪಟುಗಳು, ರಾಜ್ಯಮಟ್ಟದ ಪೈಲ್ವಾನರು ಕುಸ್ತಿ ಪಂದ್ಯಾವಳಿಯಲ್ಲಿ ಸೆಣೆಸಾಡಿ ಉತ್ತಮ ಪ್ರದರ್ಶನ ನೀಡಿದರು. ಗರಡಿ ಕುಸ್ತಿಗಳನ್ನು ನೋಡಲು ಹಿರಿಯ ಪೈಲ್ವಾನರು, ಸಾರ್ವಜನಿಕರು ಪ್ರೋತ್ಸಾಹಿಸಿದರು.</p>.<p>ಊಟದ ವ್ಯವಸ್ಥೆ: ಡಿಕೆಎಸ್ ಚಾರಿಟಬಲ್ ಟ್ರಸ್ಟ್ನಿಂದ ಉರ್ದು ಶಾಲೆ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.</p>.<p>ಜನಸಾಗರ: ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕ್ರಮ ವೀಕ್ಷಿಸಿದರು. ನಗರದಲ್ಲಿ ಎಲ್ಲಿ ನೋಡಿದರು ಜನರೇ ಕಾಣುತ್ತಿದ್ದರು. ವೇದಿಕೆ ಮುಂಭಾಗದಲ್ಲಿ ಜನಸಾಗರವೇ ಸೇರಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>