<p><strong>ರಾಮನಗರ: </strong>ಜಿಲ್ಲಾ ಕೇಂದ್ರದಲ್ಲಿ ಈಗ ಅವರೆಕಾಯಿ ಮಾರಾಟ ಆರಂಭಗೊಂಡಿದೆ. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲ. ಹಾಗಾಗಿ, ಬೆಲೆ ಏರಿಕೆಯಾಗಿದೆ.</p>.<p>ಇಲ್ಲಿನ ಬೆಂಗಳೂರು-ಮೈಸೂರು ರಸ್ತೆ ಪಕ್ಕದಲ್ಲಿ, ಎಪಿಎಂಸಿ ಮಾರುಕಟೆಯ ಆಸುಪಾಸು, ಹಳೆ ಬಸ್ ನಿಲ್ದಾಣದಲ್ಲಿ ಮತ್ತು ಬಡಾವಣೆಗಳಲ್ಲಿ ತಳ್ಳುವ ಗಾಡಿಗಳ ಮೂಲಕ ಅವರೆಕಾಯಿ ಮಾರಾಟ ನಡೆಯುತ್ತಿದೆ. ಸುಮಾರು 10 ಕ್ಕೂ ಹೆಚ್ಚು ವ್ಯಾಪಾರಿಗಳು ತಳ್ಳುವ ಗಾಡಿಗಳಲ್ಲಿ ಅವರೆಕಾಯಿ ವ್ಯಾಪಾರ ಮಾಡುತ್ತಾರೆ.</p>.<p>ಪ್ರಸ್ತುತ ಪ್ರತಿದಿನ ಜಿಲ್ಲಾ ಕೇಂದ್ರಕ್ಕೆ 500 ರಿಂದ 600 ಕೆಜಿಯಷ್ಟು ಅವರೆ ಪೂರೈಕೆಯಾಗುತ್ತಿದೆ. ಆದರೆ, 1 ಸಾವಿರ ಕೆಜಿಗೂ ಹೆಚ್ಚು ಬೇಡಿಕೆಯಿದೆ. ಸ್ಥಳೀಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಇಂದಿಗೂ ಇಲ್ಲಿಗೆ ಕೊಳ್ಳೇಗಾಲ, ಮೈಸೂರು ಜಿಲ್ಲೆಯ ನಂಜನಗೂಡು, ಎಚ್.ಡಿ. ಕೋಟೆ, ಗುಂಡ್ಲುಪೇಟೆ, ಹುಣಸೂರು ಭಾಗದಿಂದಲೇ ಹೆಚ್ಚಾಗಿ ಅವರೆಕಾಯಿ ಸ್ವಲ್ಪ ಪ್ರಮಾಣದಲ್ಲಿ ಪೂರೈಕೆಯಾಗುತ್ತಿರುವುದರಿಂದ ಹಾಗಾಗಿ, 1 ಕೆಜಿಗೆ ₹50ಕ್ಕೆ ಮುಟ್ಟಿದೆ.</p>.<p>ಡಿಸೆಂಬರ್ ತಿಂಗಳಿನಲ್ಲಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಅವರೆ ಪೂರೈಕೆ ಆಗಬೇಕಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಪೂರೈಕೆ ಆಗುತ್ತಿಲ್ಲ. ಪ್ರಸ್ತುತ ಮಾರುಕಟ್ಟೆಗೆ ಬರುವ ಅವರೆ ಕಾಯಿ ಸಂಜೆ ವೇಳೆಗೆ ಮಾರಾಟವಾಗುತ್ತಿದೆ. ಉಳಿಯುತ್ತಿರುವುದು ಕಡಿಮೆ. ಹಾಗಾಗಿ, ವ್ಯಾಪಾರಿಗಳ ನಡುವೆಯೇ ಪೈಪೋಟಿ ಏರ್ಪಟ್ಟಿದೆ. . ಬಡಾವಣೆಗಳ್ಲಲಿ ತಳ್ಳುವ ಗಾಡಿಗಳಲ್ಲಿ ಮಾರಾಟ ಮಾಡುವ ವ್ಯಾಪಾರಿಗಳು 1 ಕೆಜಿಗೆ ₹45 ರಿಂದ 50 ದರ ನಿಗದಿ ಪಡಿಸುತ್ತಾರೆ. ಈ ಅವಧಿಯಲ್ಲಿಯೇ ಅವರೆಯಿಂದ ಮಾಡಿದ ಖಾದ್ಯ ಸೇವಿಸುವುದರಿಂದ ಗ್ರಾಹಕರು ವಿಧಿ ಇಲ್ಲದೆ ಖರೀದಿಸುವಂತಾಗಿದೆ.</p>.<p>ಈಗ ಅವರೆಕಾಯಿ ಸೀಸನ್ ಆರಂಭವಾಗಿದೆ. ಚಳಿಗಾಲದಲ್ಲಿ ರುಚಿರುಚಿಯಾದ ಅವರೆಕಾಯಿ ಖಾದ್ಯ ಸವಿಯಬೇಕೆಂದುಕೊಂಡವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಳೆದ ವರ್ಷ ₹20 ರಿಂದ 25ಕ್ಕೆ ಒಂದು ಕೆ.ಜಿ. ಅವರೆಕಾಯಿ ಲಭಿಸುತ್ತಿತ್ತು. ಈ ಬಾರಿ ಇದರ ಬೆಲೆ 45 ರಿಂದ 50 ರೂಪಾಯಿಗಳವರೆಗೆ ಇದೆ. ರಾಗಿ, ಮೆಕ್ಕೆಜೋಳ, ಜೋಳ, ತೊಗರಿ ಹೊಲಗಳಲ್ಲಿ ಉಪ ಬೆಳೆಯಾಗಿ ಅವರೆಕಾಯಿಯನ್ನು ಬೆಳೆಯುತ್ತಿದ್ದು, ಆದರೆ ಈ ಬಾರಿ ಸುರಿದ ಅಕಾಲಿಕ ಮಳೆಯಿಂದಾಗಿ ತೇವಾಂಶ ಹೆಚ್ಚಾದ ಪರಿಣಾಮ ರೋಗದ ಕಾರಣ ಅವರೆಕಾಯಿ ಇಳುವರಿ ಕಡಿಮೆಯಾಗಿದೆ ಎಂದು ಹಿರಿಯರಾದ ಡಿ.ವಿ. ಶಿವಾನಂದಸ್ವಾಮಿ ತಿಳಿಸಿದರು.</p>.<p>ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಅವರೆಕಾಯಿ ಬರುತ್ತಿಲ್ಲವಾದ ಕಾರಣ ಬೆಲೆ ಏರಿಕೆಗೆ ಕಾರಣವಾಗಿದೆ. ಅದರಲ್ಲೂ ಸೊಗಡಿನ ಅವರೆಕಾಯಿ ದುಬಾರಿ ಬೆಲೆ ನೀಡುತ್ತೇನೆಂದರೂ ಲಭ್ಯವಾಗುತ್ತಿಲ್ಲ. ಈ ಮೊದಲು ಹೆಚ್ಚಿನ ಪ್ರಮಾಣದಲ್ಲಿ ಅವರೆಕಾಯಿ ಖರೀದಿಸಿ ಅವುಗಳನ್ನು ಒಣಗಿಸಿ ಸೀಸನ್ ಮುಗಿದ ಬಳಿಕವೂ ಬಳಸುತ್ತಿದ್ದವರು ಬೆಲೆ ಏರಿಕೆಯ ಕಾರಣಕ್ಕೆ ಅತ್ಯಲ್ಪ ಪ್ರಮಾಣದಲ್ಲಿ ಖರೀದಿಗೆ ಮುಂದಾಗಿದ್ದಾರೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ: </strong>ಜಿಲ್ಲಾ ಕೇಂದ್ರದಲ್ಲಿ ಈಗ ಅವರೆಕಾಯಿ ಮಾರಾಟ ಆರಂಭಗೊಂಡಿದೆ. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲ. ಹಾಗಾಗಿ, ಬೆಲೆ ಏರಿಕೆಯಾಗಿದೆ.</p>.<p>ಇಲ್ಲಿನ ಬೆಂಗಳೂರು-ಮೈಸೂರು ರಸ್ತೆ ಪಕ್ಕದಲ್ಲಿ, ಎಪಿಎಂಸಿ ಮಾರುಕಟೆಯ ಆಸುಪಾಸು, ಹಳೆ ಬಸ್ ನಿಲ್ದಾಣದಲ್ಲಿ ಮತ್ತು ಬಡಾವಣೆಗಳಲ್ಲಿ ತಳ್ಳುವ ಗಾಡಿಗಳ ಮೂಲಕ ಅವರೆಕಾಯಿ ಮಾರಾಟ ನಡೆಯುತ್ತಿದೆ. ಸುಮಾರು 10 ಕ್ಕೂ ಹೆಚ್ಚು ವ್ಯಾಪಾರಿಗಳು ತಳ್ಳುವ ಗಾಡಿಗಳಲ್ಲಿ ಅವರೆಕಾಯಿ ವ್ಯಾಪಾರ ಮಾಡುತ್ತಾರೆ.</p>.<p>ಪ್ರಸ್ತುತ ಪ್ರತಿದಿನ ಜಿಲ್ಲಾ ಕೇಂದ್ರಕ್ಕೆ 500 ರಿಂದ 600 ಕೆಜಿಯಷ್ಟು ಅವರೆ ಪೂರೈಕೆಯಾಗುತ್ತಿದೆ. ಆದರೆ, 1 ಸಾವಿರ ಕೆಜಿಗೂ ಹೆಚ್ಚು ಬೇಡಿಕೆಯಿದೆ. ಸ್ಥಳೀಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಇಂದಿಗೂ ಇಲ್ಲಿಗೆ ಕೊಳ್ಳೇಗಾಲ, ಮೈಸೂರು ಜಿಲ್ಲೆಯ ನಂಜನಗೂಡು, ಎಚ್.ಡಿ. ಕೋಟೆ, ಗುಂಡ್ಲುಪೇಟೆ, ಹುಣಸೂರು ಭಾಗದಿಂದಲೇ ಹೆಚ್ಚಾಗಿ ಅವರೆಕಾಯಿ ಸ್ವಲ್ಪ ಪ್ರಮಾಣದಲ್ಲಿ ಪೂರೈಕೆಯಾಗುತ್ತಿರುವುದರಿಂದ ಹಾಗಾಗಿ, 1 ಕೆಜಿಗೆ ₹50ಕ್ಕೆ ಮುಟ್ಟಿದೆ.</p>.<p>ಡಿಸೆಂಬರ್ ತಿಂಗಳಿನಲ್ಲಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಅವರೆ ಪೂರೈಕೆ ಆಗಬೇಕಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಪೂರೈಕೆ ಆಗುತ್ತಿಲ್ಲ. ಪ್ರಸ್ತುತ ಮಾರುಕಟ್ಟೆಗೆ ಬರುವ ಅವರೆ ಕಾಯಿ ಸಂಜೆ ವೇಳೆಗೆ ಮಾರಾಟವಾಗುತ್ತಿದೆ. ಉಳಿಯುತ್ತಿರುವುದು ಕಡಿಮೆ. ಹಾಗಾಗಿ, ವ್ಯಾಪಾರಿಗಳ ನಡುವೆಯೇ ಪೈಪೋಟಿ ಏರ್ಪಟ್ಟಿದೆ. . ಬಡಾವಣೆಗಳ್ಲಲಿ ತಳ್ಳುವ ಗಾಡಿಗಳಲ್ಲಿ ಮಾರಾಟ ಮಾಡುವ ವ್ಯಾಪಾರಿಗಳು 1 ಕೆಜಿಗೆ ₹45 ರಿಂದ 50 ದರ ನಿಗದಿ ಪಡಿಸುತ್ತಾರೆ. ಈ ಅವಧಿಯಲ್ಲಿಯೇ ಅವರೆಯಿಂದ ಮಾಡಿದ ಖಾದ್ಯ ಸೇವಿಸುವುದರಿಂದ ಗ್ರಾಹಕರು ವಿಧಿ ಇಲ್ಲದೆ ಖರೀದಿಸುವಂತಾಗಿದೆ.</p>.<p>ಈಗ ಅವರೆಕಾಯಿ ಸೀಸನ್ ಆರಂಭವಾಗಿದೆ. ಚಳಿಗಾಲದಲ್ಲಿ ರುಚಿರುಚಿಯಾದ ಅವರೆಕಾಯಿ ಖಾದ್ಯ ಸವಿಯಬೇಕೆಂದುಕೊಂಡವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಳೆದ ವರ್ಷ ₹20 ರಿಂದ 25ಕ್ಕೆ ಒಂದು ಕೆ.ಜಿ. ಅವರೆಕಾಯಿ ಲಭಿಸುತ್ತಿತ್ತು. ಈ ಬಾರಿ ಇದರ ಬೆಲೆ 45 ರಿಂದ 50 ರೂಪಾಯಿಗಳವರೆಗೆ ಇದೆ. ರಾಗಿ, ಮೆಕ್ಕೆಜೋಳ, ಜೋಳ, ತೊಗರಿ ಹೊಲಗಳಲ್ಲಿ ಉಪ ಬೆಳೆಯಾಗಿ ಅವರೆಕಾಯಿಯನ್ನು ಬೆಳೆಯುತ್ತಿದ್ದು, ಆದರೆ ಈ ಬಾರಿ ಸುರಿದ ಅಕಾಲಿಕ ಮಳೆಯಿಂದಾಗಿ ತೇವಾಂಶ ಹೆಚ್ಚಾದ ಪರಿಣಾಮ ರೋಗದ ಕಾರಣ ಅವರೆಕಾಯಿ ಇಳುವರಿ ಕಡಿಮೆಯಾಗಿದೆ ಎಂದು ಹಿರಿಯರಾದ ಡಿ.ವಿ. ಶಿವಾನಂದಸ್ವಾಮಿ ತಿಳಿಸಿದರು.</p>.<p>ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಅವರೆಕಾಯಿ ಬರುತ್ತಿಲ್ಲವಾದ ಕಾರಣ ಬೆಲೆ ಏರಿಕೆಗೆ ಕಾರಣವಾಗಿದೆ. ಅದರಲ್ಲೂ ಸೊಗಡಿನ ಅವರೆಕಾಯಿ ದುಬಾರಿ ಬೆಲೆ ನೀಡುತ್ತೇನೆಂದರೂ ಲಭ್ಯವಾಗುತ್ತಿಲ್ಲ. ಈ ಮೊದಲು ಹೆಚ್ಚಿನ ಪ್ರಮಾಣದಲ್ಲಿ ಅವರೆಕಾಯಿ ಖರೀದಿಸಿ ಅವುಗಳನ್ನು ಒಣಗಿಸಿ ಸೀಸನ್ ಮುಗಿದ ಬಳಿಕವೂ ಬಳಸುತ್ತಿದ್ದವರು ಬೆಲೆ ಏರಿಕೆಯ ಕಾರಣಕ್ಕೆ ಅತ್ಯಲ್ಪ ಪ್ರಮಾಣದಲ್ಲಿ ಖರೀದಿಗೆ ಮುಂದಾಗಿದ್ದಾರೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>