ಮಾಗಡಿ: ತಾಲ್ಲೂಕಿನ ತಿಪ್ಪಸಂದ್ರ ಹೋಬಳಿಯ ಮುರುಡೇಗೌಡನಪಾಳ್ಯದಲ್ಲಿ ಬಾಲಕನಿಗೆ ಹಾವು ಕಚ್ಚಿದೆ.
ತೋಟದಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಂದೆ ರಮೇಶ್ ಅವರನ್ನು ನೋಡಲು ಹೋದ ಹೇಮಂತ್ (8) ಎಂಬ ಬಾಲಕನಿಗೆ ನಾಗರ ಹಾವು ಕಚ್ಚಿದೆ. ಅಸ್ವಸ್ಥಗೊಂಡ ಬಾಲಕನಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಯಿತು.