<p><strong>ಚನ್ನಪಟ್ಟಣ:</strong> ಮಂಗಳವಾರ ಸಂಜೆ ತಾಲ್ಲೂಕಿನಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಗೆ ತಾಲ್ಲೂಕಿನ ಕಳ್ಳಿ ಹೊಸೂರು ಗ್ರಾಮದ ರೈತರೊಬ್ಬರ ಎರಡುವರೆ ಎಕರೆಯಲ್ಲಿ ಬೆಳೆದಿದ್ದ ಗೊನೆಭರಿತ ಬಾಳೆ ಬೆಳೆ ನೆಲಕಚ್ಚಿದೆ.</p>.<p>ಗ್ರಾಮದ ರೈತ ವಿಜಯಕುಮಾರ್ ಅವರಿಗೆ ಸೇರಿದ ಬಾಳೆ ಬೆಳೆ ಬಹುತೇಕ ನೆಲಕಚ್ಚಿದ್ದು, ಘಟನೆಯಲ್ಲಿ ರೂ. 2 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಗೊನೆ ಬಂದಿದ್ದ ಹಾಗೂ ಗೊನೆ ಬರಬೇಕಿದ್ದ ಬಾಳೆಗಿಡಗಳು ಅರ್ಧಕ್ಕೆ ಮುರಿದು ಬಿದ್ದಿವೆ.</p>.<p>ಕಷ್ಟಪಟ್ಟು ಬೆಳೆದ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಪರಿಹಾರ ಕೊಡಿಸಬೇಕು ಎಂದು ರೈತ ವಿಜಯಕುಮಾರ್ ಮನವಿ ಮಾಡಿದ್ದಾರೆ.</p>.<p>ತಾಲ್ಲೂಕಿನ ಹಲವೆಡೆ ತೆಂಗಿನ ಮರಗಳು, ಇತರೆ ಮರಗಳು ಧರೆಗುರುಳಿರುವ ಸುದ್ದಿಗಳು ಬಂದಿವೆ. ಮಾವಿನಕಾಯಿಗಳು ನೆಲಕಚ್ಚಿರುವ ವರದಿಯಾಗಿದೆ.</p>.<p>ಉತ್ತಮ ಮಳೆ: ಮಂಗಳವಾರ ಸಂಜೆ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ಹಲವು ದಿನಗಳಿಂದ ಬಿಸಿಲಲಿನ ಝಳಕ್ಕೆ ಸಿಲುಕಿ ಹೈರಾಣಾಗಿದ್ದ ಜನಕ್ಕೆ ಉತ್ತಮ ಮಳೆ ತಂಪನ್ನೆರೆದಿದೆ. ಉತ್ತಮ ಮಳೆಯ ಲಕ್ಷಣ ಗೋಚರವಾಗಿದ್ದು, ರೈತರು ಹರ್ಷಚಿತ್ತರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ:</strong> ಮಂಗಳವಾರ ಸಂಜೆ ತಾಲ್ಲೂಕಿನಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಗೆ ತಾಲ್ಲೂಕಿನ ಕಳ್ಳಿ ಹೊಸೂರು ಗ್ರಾಮದ ರೈತರೊಬ್ಬರ ಎರಡುವರೆ ಎಕರೆಯಲ್ಲಿ ಬೆಳೆದಿದ್ದ ಗೊನೆಭರಿತ ಬಾಳೆ ಬೆಳೆ ನೆಲಕಚ್ಚಿದೆ.</p>.<p>ಗ್ರಾಮದ ರೈತ ವಿಜಯಕುಮಾರ್ ಅವರಿಗೆ ಸೇರಿದ ಬಾಳೆ ಬೆಳೆ ಬಹುತೇಕ ನೆಲಕಚ್ಚಿದ್ದು, ಘಟನೆಯಲ್ಲಿ ರೂ. 2 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಗೊನೆ ಬಂದಿದ್ದ ಹಾಗೂ ಗೊನೆ ಬರಬೇಕಿದ್ದ ಬಾಳೆಗಿಡಗಳು ಅರ್ಧಕ್ಕೆ ಮುರಿದು ಬಿದ್ದಿವೆ.</p>.<p>ಕಷ್ಟಪಟ್ಟು ಬೆಳೆದ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಪರಿಹಾರ ಕೊಡಿಸಬೇಕು ಎಂದು ರೈತ ವಿಜಯಕುಮಾರ್ ಮನವಿ ಮಾಡಿದ್ದಾರೆ.</p>.<p>ತಾಲ್ಲೂಕಿನ ಹಲವೆಡೆ ತೆಂಗಿನ ಮರಗಳು, ಇತರೆ ಮರಗಳು ಧರೆಗುರುಳಿರುವ ಸುದ್ದಿಗಳು ಬಂದಿವೆ. ಮಾವಿನಕಾಯಿಗಳು ನೆಲಕಚ್ಚಿರುವ ವರದಿಯಾಗಿದೆ.</p>.<p>ಉತ್ತಮ ಮಳೆ: ಮಂಗಳವಾರ ಸಂಜೆ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ಹಲವು ದಿನಗಳಿಂದ ಬಿಸಿಲಲಿನ ಝಳಕ್ಕೆ ಸಿಲುಕಿ ಹೈರಾಣಾಗಿದ್ದ ಜನಕ್ಕೆ ಉತ್ತಮ ಮಳೆ ತಂಪನ್ನೆರೆದಿದೆ. ಉತ್ತಮ ಮಳೆಯ ಲಕ್ಷಣ ಗೋಚರವಾಗಿದ್ದು, ರೈತರು ಹರ್ಷಚಿತ್ತರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>