ಮಾಗಡಿ: ಜಮ್ಮುವಿನ ಉದಯಪುರ್ನಲ್ಲಿ ಮೃತಪಟ್ಟ ಯೋಧ ವೆಂಕಟನರಸಿಂಹಮೂರ್ತಿ ಅಂತ್ಯಕ್ರಿಯೆ ಬಂಧುಗಳ ಶೋಕಸಾಗರದ ನಡುವೆ ಶುಕ್ರವಾರ ಮಧ್ಯಾಹ್ನ ಅವರ ತೋಟದಲ್ಲಿ ನಡೆಯಿತು. ಅಲಂಕೃತ ವಾಹನದಲ್ಲಿ ಯೋಧನ ಪಾರ್ಥಿವಶರೀರ ಇಟ್ಟು ಮೆರವಣಿಗೆ ನಡೆಸಲಾಯಿತು.
ಅಂತಿಮ ದರ್ಶನ: ಶುಕ್ರವಾರ ಶಾಸಕ ಎ.ಮಂಜುನಾಥ, ಬಿಜೆಪಿ ಮುಖಂಡ ಎ.ಎಚ್.ಬಸವರಾಜು, ಗುರುವಾರ ರಾತ್ರಿ ಕಾಂಗ್ರೆಸ್ ಮುಖಂಡ ಎಚ್.ಸಿ.ಬಾಲಕೃಷ್ಣ ಅಂತಿಮ ನಮನ ಸಲ್ಲಿಸಿದರು. ಮೃತರ ತಾಯಿ ವಿಜಯಮ್ಮ, ತಂದೆ ಪೈಲ್ವಾನ್ ಪಾಪಣ್ಣ, ಸೋದರಿ ಗಿರಿಜಾ ಪರಮೇಶ್ವರ ಇದ್ದರು. ತಿಗಳ ಸಮುದಾಯದಂತೆ ಅಂತಿಮ ಸಂಸ್ಕಾರ ನಡೆಯಿತು.