ಪಟ್ಟಣದ ಬಿ.ಕೆ. ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ಮೂರು ಬಂಕ್ಗಳಲ್ಲಿ ಪೆಟ್ರೋಲ್ ಇರಲಿಲ್ಲ. ಆಯುಧಪೂಜೆ, ವಿಜಯದಶಮಿ ಅಂಗವಾಗಿ ಪೆಟ್ರೋಲ್ ಟ್ಯಾಂಕರ್ಗಳು ಸಂಚರಿಸಿರಲಿಲ್ಲ. ಇದರಿಂದ ಪೂರೈಕೆ ಸ್ಥಗಿತಗೊಂಡಿದೆ ಎಂದು ಬಂಕ್ ವ್ಯವಸ್ಥಾಪಕರು ತಿಳಿಸಿದರು. ವಾಹನ ಚಾಲಕರು, ಮಾಲೀಕರು ಬಂಕ್ ಮಾಲೀಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.