ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ರಾಮನಗರ: ಶಾಲಾ ಸ್ವಚ್ಛತೆ ಯಾರ ಜವಾಬ್ದಾರಿ?

Published : 17 ಜೂನ್ 2025, 4:32 IST
Last Updated : 17 ಜೂನ್ 2025, 4:32 IST
ಫಾಲೋ ಮಾಡಿ
Comments
ಸರ್ಕಾರಿ ಶಾಲೆಗಳ ಸ್ವಚ್ಛತೆಗೆ ‘ಡಿ’ ಗ್ರೂಪ್‌ ಸಿಬ್ಬಂದಿಯೇ ಇಲ್ಲದಿರುವಾಗ ಏನು ಮಾಡಬೇಕು? ತರಗತಿ ಹಾಗೂ ಶಾಲಾ ವರಾಂಡದ ಸ್ವಚ್ಛತೆಯನ್ನು ವಿದ್ಯಾರ್ಥಿಗಳಿಂದ ಮಾಡಿಸುವುದು ತಪ್ಪಲ್ಲ. ಸ್ವಚ್ಛತೆ ಸಹ ಶಿಕ್ಷಣದ ಒಂದು ಭಾಗ
– ರಮೇಶ್ ಜಿಲ್ಲಾಧ್ಯಕ್ಷ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ದಕ್ಷಿಣ ಜಿಲ್ಲೆ
ಆದರೆ ಮಕ್ಕಳು ತರಗತಿ ಸ್ವಚ್ಛಗೊಳಿಸಿದ್ದನ್ನೇ ತಪ್ಪೆಂದು ಶಿಕ್ಷಕಿಯನ್ನು ಅಮಾನತು ಮಾಡುವುದಾದರೆ ‘ಡಿ’ ಗ್ರೂಪ್ ಇಲ್ಲದ ಎಲ್ಲಾ ಶಾಲೆಗಳ ಶಿಕ್ಷಕರನ್ನು ಸಹ ಅಮಾನತು ಮಾಡಬೇಕಾಗುತ್ತದೆ
– ಸಿದ್ದರಾಜು ನಿವೃತ್ತ ಶಿಕ್ಷಕ ರಾಮನಗರ
ತಡೆಯಾಜ್ಞೆ ಬೆನ್ನಲ್ಲೇ ಅಮಾನತು ರದ್ದು ಅಮಾನತು
ಆದೇಶಕ್ಕೆ ಶಿಕ್ಷಕರ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಶಿಕ್ಷಕರ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಸಹ ಈ ಕುರಿತು ಆಕ್ರೋಶ ಹೊರಹಾಕಿದ್ದರು. ಅಮಾನತು ಪ್ರಶ್ನಿಸಿ ಶಿಕ್ಷಕಿ ಗಂಗಾಂಬಿಕ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಮಂಡಳಿ ಅಮಾನತಿಗೆ ತಡೆಯಾಜ್ಞೆ ನೀಡಿತ್ತು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಜೂನ್ 12ರಂದು ಅಮಾನತು ರದ್ದುಪಡಿಸಿ ಅದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಮರು ಆದೇಶ ಹೊರಡಿಸಿದರು. ಆದರೆ ಶಿಕ್ಷಕಿ ಅಮಾನತು ಘಟನೆಯು ಅಲ್ಲಿಗೆ ನಿಲ್ಲದೆ ಬೇರೆ ಆಯಾಮ ಪಡೆದಿದೆ. ಶಾಲಾ ಸ್ವಚ್ಛತೆ ಕುರಿತ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
‘ಡಿ ಗ್ರೂಪ್ ಸಿಬ್ಬಂದಿ ನೇಮಕವೇ ಪರಿಹಾರ’
‘ಮಕ್ಕಳಿಂದ ಶಾಲೆಗಳ ಸ್ವಚ್ಛತೆ ಕೆಲಸ ಮಾಡಿಸಬೇಡಿ ಎಂದು ಶಿಕ್ಷಣ ಇಲಾಖೆ ಹೇಳುತ್ತದೆ. ನಮ್ಮನ್ನು ಕೆಲಸಕ್ಕೆ ನೇಮಕ ಮಾಡಿಕೊಂಡಿರುವುದು ಬೋಧನೆ ಮಾಡುವುದಕ್ಕಾಗಿಯೇ ಹೊರತು ಸ್ವಚ್ಛತೆ ಕೆಲಸಕ್ಕಲ್ಲ ಎಂದು ಮಾತು ಶಿಕ್ಷಕರಿಂದಲೂ ಕೇಳಿ ಬರುತ್ತದೆ. ಎಸ್‌ಡಿಎಂಸಿ ಪದಾಧಿಕಾರಿಗಳಿಗೆ ಅವರ ಪಾತ್ರದ ಬಗ್ಗೆಯೇ ಸರಿಯಾದ ಅರಿವಿಲ್ಲ. ಇದಕ್ಕಿರುವುದು ಎರಡೇ ಪರಿಹಾರ. ಶಿಕ್ಷಣ ಇಲಾಖೆ ಪ್ರತಿ ಸರ್ಕಾರಿ ಶಾಲೆಗೆ ಒಬ್ಬರು ‘ಡಿ’ ಗ್ರೂಪ್ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಇಲ್ಲವಾದರೆ ಸ್ಥಳೀಯ ಆಡಳಿತ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ನಗರಸಭೆ ಮಹಾನಗರಗಳಲ್ಲಿ ಮಹಾನಗರ ಪಾಲಿಕೆಗಳು ಶಾಲೆಗಳ ಸ್ವಚ್ಛತೆಯನ್ನು ನಿರ್ವಹಣೆ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಅಧ್ಯಕ್ಷ ಉಮೇಶ್ ದೊಡ್ಡಗಂಗವಾಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಜಿ.ಪಂ. ಎದುರು ಪರಿಷತ್ ಸದಸ್ಯ ಪುಟ್ಟಣ್ಣ ಧರಣಿ
ಇಂದು ಶಿಕ್ಷಕಿ ಅಮಾನತು ಮಾಡಿದ್ದನ್ನು ಖಂಡಿಸಿ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ ಅವರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಲಿದ್ದಾರೆ. ಶಿಕ್ಷಕರ ಸಂಘಟನೆಗಳು ಸಹ ಧರಣಿಗೆ ಬೆಂಬಲ ವ್ಯಕ್ತಪಡಿಸಿವೆ. ಅಮಾನತು ಖಂಡಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಜಿ.ಪಂ. ಸಿಇಒ ಅವರಿಗೆ ಜೂನ್ 11ರಂದು ಪುಟ್ಟಣ್ಣ ಪತ್ರ ಬರೆದಿದ್ದರು. ‘ಸ್ವಚ್ಛತಾ ಪರಿಕರಗಳಾದ ಪೊರಕೆ ಬುಟ್ಟಿ ಕೈಗವಸು ಸೋಪು ಶೌಚಾಲಯ ಮೂತ್ರಾಲಯ ಸ್ವಚ್ಛಗೊಳಿಸುವ ಬ್ರಷ್‌ ಪರಿಕರಗಳೊಂದಿಗೆ ಜಿಲ್ಲಾ ಪಂಚಾಯಿತಿ ಕಚೇರಿಗೆ ಬರುವೆ. ತಾವು ಮತ್ತು ತಮ್ಮ ಕಚೇರಿಯ ಅಧಿಕಾರಿಗಳು ಜಿಲ್ಲೆಯಲ್ಲಿರುವ ಎಲ್ಲಾ ಶಾಲೆಗಳನ್ನು ಶುಚಿಗೊಳಿಸಬೇಕು ಎಂಬ ಅಭಿಯಾನ ಆರಂಭಿಸುವಂತೆ ಆಗ್ರಹಿಸಿ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಕರೊಡನೆ ಧರಣಿ ಮಾಡುವೆ’ ಎಂದು ಪತ್ರದಲ್ಲಿ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT