ಮನವಿ: ನಗರಸಭಾ ವ್ಯಾಪ್ತಿಯ ಕೆಎನ್ಎಸ್ ಸರ್ಕಲ್ ಬಳಿಯ ನವೋದಯ ಆರೋಗ್ಯ ಕೇಂದ್ರದಲ್ಲಿ ವೈದ್ಯ ದಂಪತಿಗೆ ಕೋವಿಡ್ –19 ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜೂನ್ 6 ರಿಂದ ಈವರೆಗೂ ಚಿಕಿತ್ಸೆ ಪಡೆದಿರುವ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಪರೀಕ್ಷೆಗೆ ಒಳಗಾಗಬೇಕೆಂದು ನಗರಸಭೆ ಆಯುಕ್ತ ಕೆ.ಮಾಯಣ್ಣಗೌಡ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.