<p><strong>ಕನಕಪುರ:</strong> ತಾಲ್ಲೂಕಿನಲ್ಲಿ ಗುರುವಾರದ ವೇಳೆಗೆ 6 ಮಂದಿಗೆ ಹೊಸದಾಗಿ ಕೋವಿಡ್ –19 ದೃಢಪಟ್ಟಿದ್ದು ಒಟ್ಟು 9 ಪ್ರಕರಣಗಳು ದಾಖಲಾಗಿವೆ.</p>.<p>ಕೊರೊನಾ ಬಂದಿರುವ ವ್ಯಕ್ತಿಗಳು ಖಾಸಗಿ ಆಸ್ಪತ್ರೆ ವೈದ್ಯರಾಗಿದ್ದು ಇಬ್ಬರನ್ನು ಕ್ವಾರಂಟೈನ್ ಮಾಡಲಾಗಿದೆ.</p>.<p>ವಿವೇಕಾನಂದ ನಗರದಲ್ಲಿ 3 ಮಂದಿ ಮತ್ತು ಮರಳವಾಡಿಯಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಇವರನ್ನು ಕ್ವಾರಂಟೈನ್ ಚಿಕಿತ್ಸಾ ಸೆಂಟರ್ಗೆ ಸೇರಿಸಲಾಗಿದೆ.</p>.<p>ಕೊರೊನಾ ಬಾಧಿತರು ವಾಸವಿದ್ದ ಎಂಎಚ್ಎಸ್ ಗ್ರೌಂಡ್ ಮತ್ತು ವಿವೇಕಾನಂದ ನಗರದ ಪ್ರದೇಶ ಸೀಲ್ಡೌನ್ ಮಾಡಲಾಗಿದೆ.</p>.<p>ಸೋಂಕು ಪತ್ತೆಯಾಗಿರುವವರ ಜತೆ ನೇರ ಸಂಪರ್ಕದಲ್ಲಿದ್ದವರ ಮಾಹಿತಿ ಸಂಗ್ರಹಿಸಿ ಅವರನ್ನು ಕ್ವಾರಂಟೈನ್ ಮಾಡಲಾಗಿದೆ.</p>.<p><strong>ಮನವಿ:</strong> ನಗರಸಭಾ ವ್ಯಾಪ್ತಿಯ ಕೆಎನ್ಎಸ್ ಸರ್ಕಲ್ ಬಳಿಯ ನವೋದಯ ಆರೋಗ್ಯ ಕೇಂದ್ರದಲ್ಲಿ ವೈದ್ಯ ದಂಪತಿಗೆ ಕೋವಿಡ್ –19 ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜೂನ್ 6 ರಿಂದ ಈವರೆಗೂ ಚಿಕಿತ್ಸೆ ಪಡೆದಿರುವ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಪರೀಕ್ಷೆಗೆ ಒಳಗಾಗಬೇಕೆಂದು ನಗರಸಭೆ ಆಯುಕ್ತ ಕೆ.ಮಾಯಣ್ಣಗೌಡ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ:</strong> ತಾಲ್ಲೂಕಿನಲ್ಲಿ ಗುರುವಾರದ ವೇಳೆಗೆ 6 ಮಂದಿಗೆ ಹೊಸದಾಗಿ ಕೋವಿಡ್ –19 ದೃಢಪಟ್ಟಿದ್ದು ಒಟ್ಟು 9 ಪ್ರಕರಣಗಳು ದಾಖಲಾಗಿವೆ.</p>.<p>ಕೊರೊನಾ ಬಂದಿರುವ ವ್ಯಕ್ತಿಗಳು ಖಾಸಗಿ ಆಸ್ಪತ್ರೆ ವೈದ್ಯರಾಗಿದ್ದು ಇಬ್ಬರನ್ನು ಕ್ವಾರಂಟೈನ್ ಮಾಡಲಾಗಿದೆ.</p>.<p>ವಿವೇಕಾನಂದ ನಗರದಲ್ಲಿ 3 ಮಂದಿ ಮತ್ತು ಮರಳವಾಡಿಯಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಇವರನ್ನು ಕ್ವಾರಂಟೈನ್ ಚಿಕಿತ್ಸಾ ಸೆಂಟರ್ಗೆ ಸೇರಿಸಲಾಗಿದೆ.</p>.<p>ಕೊರೊನಾ ಬಾಧಿತರು ವಾಸವಿದ್ದ ಎಂಎಚ್ಎಸ್ ಗ್ರೌಂಡ್ ಮತ್ತು ವಿವೇಕಾನಂದ ನಗರದ ಪ್ರದೇಶ ಸೀಲ್ಡೌನ್ ಮಾಡಲಾಗಿದೆ.</p>.<p>ಸೋಂಕು ಪತ್ತೆಯಾಗಿರುವವರ ಜತೆ ನೇರ ಸಂಪರ್ಕದಲ್ಲಿದ್ದವರ ಮಾಹಿತಿ ಸಂಗ್ರಹಿಸಿ ಅವರನ್ನು ಕ್ವಾರಂಟೈನ್ ಮಾಡಲಾಗಿದೆ.</p>.<p><strong>ಮನವಿ:</strong> ನಗರಸಭಾ ವ್ಯಾಪ್ತಿಯ ಕೆಎನ್ಎಸ್ ಸರ್ಕಲ್ ಬಳಿಯ ನವೋದಯ ಆರೋಗ್ಯ ಕೇಂದ್ರದಲ್ಲಿ ವೈದ್ಯ ದಂಪತಿಗೆ ಕೋವಿಡ್ –19 ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜೂನ್ 6 ರಿಂದ ಈವರೆಗೂ ಚಿಕಿತ್ಸೆ ಪಡೆದಿರುವ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಪರೀಕ್ಷೆಗೆ ಒಳಗಾಗಬೇಕೆಂದು ನಗರಸಭೆ ಆಯುಕ್ತ ಕೆ.ಮಾಯಣ್ಣಗೌಡ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>