<p><strong>ರಾಮನಗರ: </strong>ಮುಖ್ಯಮಂತ್ರಿ ಯಡಿಯೂರಪ್ಪ ಹುಚ್ಚಾಸ್ಪತ್ರೆಯ ವಾರ್ಡಿನಲ್ಲಿ ಇರಬೇಕಿತ್ತು. ಅದರ ಬದಲಾಗಿ ವಿಧಾನಸೌಧದಲ್ಲಿ ಇದ್ದಾರೆ. ವಿಧಾನಸೌಧ ಹುಚ್ಚಾಸ್ಪತ್ರೆ ಆಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜು ಟೀಕಿಸಿದರು.</p>.<p>ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ನಗರದ ಐಜೂರು ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು. ಬಿಜೆಪಿ ನಾಯಕರು ದಿಕ್ಕುತಪ್ಪಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲ. ಬಿಎಸ್ವೈ ಅತ್ಯಂತ ಹೀನಾಯವಾದ ಹಾಗೂ ಕೆಳ ದರ್ಜೆಯ ಸರ್ಕಾರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.</p>.<p>ಇದೇ 6ರಂದು ಬಸವಕಲ್ಯಾಣದಲ್ಲಿ ಯಡಿಯೂರಪ್ಪ ಅನುಭವ ಮಂಟಪ ನಿರ್ಮಾಣಕ್ಕೆ ಅಡಿಗಲ್ಲು ಹಾಕುತ್ತಿದ್ದಾರೆ. ಆದರೆ ಇದು ಅಲ್ಲಮಪ್ರಭುಗಳ ಅನುಭವ ಮಂಟಪವಲ್ಲ, ಬದಲಾಗಿ ಯಡಿಯೂರಪ್ಪ ಅವರ ಅನುಭವ ಮಂಟಪ ಆಗುತ್ತದೆ. ಈ ತನಕ ಬಸವಣ್ಣ ಮತ್ತು ಬಸವ ಕಲ್ಯಾಣವನ್ನು ಮುಖ್ಯಮಂತ್ರಿ ಮರೆತಿದ್ದರು. ಇದು ಬಸವಣ್ಣ ಮತ್ತು ಬಸವ ಕಲ್ಯಾಣಕ್ಕೆ ಮಾಡುತ್ತಿರುವ ಅಪಚಾರ. ಇದನ್ನು ವಿರೋಧಿಸಿ ಇದೇ 6ರಂದು ಬೆಂಗಳೂರಿನಲ್ಲಿ ಬಸವಣ್ಣನ ಪ್ರತಿಮೆಯಲ್ಲಿ ಮಲಗಿ ಪ್ರತಿಭಟನೆ ನಡೆಸಲಾಗುವುದು ಎಂದರು.</p>.<p><strong>ರೈಲು ಸತ್ಯಾಗ್ರಹ:</strong> ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಸಾಕಷ್ಟು ಹೋರಾಟ ಮಾಡಿವೆ. ಇದರ ಮುಂದುವರಿದ ಭಾಗವಾಗಿ ಇದೇ 9ರಂದು ರಾಜ್ಯದಲ್ಲಿ ರೈಲು ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.</p>.<p><strong>ಕನಿಷ್ಠ ವೇತನ ನೀಡಿ:</strong> ಗ್ರಾಮ ಪಂಚಾಯಿತಿ ಸದಸ್ಯರನ್ನು ರಾಜ್ಯ ಸರ್ಕಾರ ಗುಲಾಮ ರೀತಿಯಲ್ಲಿ ಕಾಣಲಾಗುತ್ತಿದೆ. ಪೌರ ಕಾರ್ಮಿಕರಿಗಿಂತ ಕಡಿಮೆ ವೇತನ ನೀಡಲಾಗುತ್ತಿದೆ. ದಿನಕ್ಕೆ ಕೇವಲ 33 ಗೌರವ ಧನ ನೀಡಲಾಗುತ್ತಿದೆ. ಒಬ್ಬ ಸದಸ್ಯರಿಗೆ ಕನಿಷ್ಠ 10 ಸಾವಿರ ವೇತನ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.</p>.<p>ಸಂಘಟನೆಗಳ ಮುಖಂಡರಾದ ಜಗದೀಶ್, ಜಯಕುಮಾರ್ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ: </strong>ಮುಖ್ಯಮಂತ್ರಿ ಯಡಿಯೂರಪ್ಪ ಹುಚ್ಚಾಸ್ಪತ್ರೆಯ ವಾರ್ಡಿನಲ್ಲಿ ಇರಬೇಕಿತ್ತು. ಅದರ ಬದಲಾಗಿ ವಿಧಾನಸೌಧದಲ್ಲಿ ಇದ್ದಾರೆ. ವಿಧಾನಸೌಧ ಹುಚ್ಚಾಸ್ಪತ್ರೆ ಆಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜು ಟೀಕಿಸಿದರು.</p>.<p>ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ನಗರದ ಐಜೂರು ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು. ಬಿಜೆಪಿ ನಾಯಕರು ದಿಕ್ಕುತಪ್ಪಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲ. ಬಿಎಸ್ವೈ ಅತ್ಯಂತ ಹೀನಾಯವಾದ ಹಾಗೂ ಕೆಳ ದರ್ಜೆಯ ಸರ್ಕಾರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.</p>.<p>ಇದೇ 6ರಂದು ಬಸವಕಲ್ಯಾಣದಲ್ಲಿ ಯಡಿಯೂರಪ್ಪ ಅನುಭವ ಮಂಟಪ ನಿರ್ಮಾಣಕ್ಕೆ ಅಡಿಗಲ್ಲು ಹಾಕುತ್ತಿದ್ದಾರೆ. ಆದರೆ ಇದು ಅಲ್ಲಮಪ್ರಭುಗಳ ಅನುಭವ ಮಂಟಪವಲ್ಲ, ಬದಲಾಗಿ ಯಡಿಯೂರಪ್ಪ ಅವರ ಅನುಭವ ಮಂಟಪ ಆಗುತ್ತದೆ. ಈ ತನಕ ಬಸವಣ್ಣ ಮತ್ತು ಬಸವ ಕಲ್ಯಾಣವನ್ನು ಮುಖ್ಯಮಂತ್ರಿ ಮರೆತಿದ್ದರು. ಇದು ಬಸವಣ್ಣ ಮತ್ತು ಬಸವ ಕಲ್ಯಾಣಕ್ಕೆ ಮಾಡುತ್ತಿರುವ ಅಪಚಾರ. ಇದನ್ನು ವಿರೋಧಿಸಿ ಇದೇ 6ರಂದು ಬೆಂಗಳೂರಿನಲ್ಲಿ ಬಸವಣ್ಣನ ಪ್ರತಿಮೆಯಲ್ಲಿ ಮಲಗಿ ಪ್ರತಿಭಟನೆ ನಡೆಸಲಾಗುವುದು ಎಂದರು.</p>.<p><strong>ರೈಲು ಸತ್ಯಾಗ್ರಹ:</strong> ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಸಾಕಷ್ಟು ಹೋರಾಟ ಮಾಡಿವೆ. ಇದರ ಮುಂದುವರಿದ ಭಾಗವಾಗಿ ಇದೇ 9ರಂದು ರಾಜ್ಯದಲ್ಲಿ ರೈಲು ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.</p>.<p><strong>ಕನಿಷ್ಠ ವೇತನ ನೀಡಿ:</strong> ಗ್ರಾಮ ಪಂಚಾಯಿತಿ ಸದಸ್ಯರನ್ನು ರಾಜ್ಯ ಸರ್ಕಾರ ಗುಲಾಮ ರೀತಿಯಲ್ಲಿ ಕಾಣಲಾಗುತ್ತಿದೆ. ಪೌರ ಕಾರ್ಮಿಕರಿಗಿಂತ ಕಡಿಮೆ ವೇತನ ನೀಡಲಾಗುತ್ತಿದೆ. ದಿನಕ್ಕೆ ಕೇವಲ 33 ಗೌರವ ಧನ ನೀಡಲಾಗುತ್ತಿದೆ. ಒಬ್ಬ ಸದಸ್ಯರಿಗೆ ಕನಿಷ್ಠ 10 ಸಾವಿರ ವೇತನ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.</p>.<p>ಸಂಘಟನೆಗಳ ಮುಖಂಡರಾದ ಜಗದೀಶ್, ಜಯಕುಮಾರ್ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>