ಇದೇ 6ರಂದು ಬಸವಕಲ್ಯಾಣದಲ್ಲಿ ಯಡಿಯೂರಪ್ಪ ಅನುಭವ ಮಂಟಪ ನಿರ್ಮಾಣಕ್ಕೆ ಅಡಿಗಲ್ಲು ಹಾಕುತ್ತಿದ್ದಾರೆ. ಆದರೆ ಇದು ಅಲ್ಲಮಪ್ರಭುಗಳ ಅನುಭವ ಮಂಟಪವಲ್ಲ, ಬದಲಾಗಿ ಯಡಿಯೂರಪ್ಪ ಅವರ ಅನುಭವ ಮಂಟಪ ಆಗುತ್ತದೆ. ಈ ತನಕ ಬಸವಣ್ಣ ಮತ್ತು ಬಸವ ಕಲ್ಯಾಣವನ್ನು ಮುಖ್ಯಮಂತ್ರಿ ಮರೆತಿದ್ದರು. ಇದು ಬಸವಣ್ಣ ಮತ್ತು ಬಸವ ಕಲ್ಯಾಣಕ್ಕೆ ಮಾಡುತ್ತಿರುವ ಅಪಚಾರ. ಇದನ್ನು ವಿರೋಧಿಸಿ ಇದೇ 6ರಂದು ಬೆಂಗಳೂರಿನಲ್ಲಿ ಬಸವಣ್ಣನ ಪ್ರತಿಮೆಯಲ್ಲಿ ಮಲಗಿ ಪ್ರತಿಭಟನೆ ನಡೆಸಲಾಗುವುದು ಎಂದರು.