ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ, ‘ಕ್ಷೇತ್ರವನ್ನು ಹಿಂದಿನಿಂದ ಪ್ರತಿನಿಧಿಸುತ್ತಾ ಬಂದಿರುವವರು ಪದವೀಧರರ ಪರವಾಗಿ ಯಾವುದೇ ಕೆಲಸ ಮಾಡಿಲ್ಲ. ಅವರ ಸಮಸ್ಯೆಗಳ ಕುರಿತು ದನಿ ಎತ್ತಿಲ್ಲ. ಈ ಸಲ ಅವರನ್ನು ಮನೆಗೆ ಕಳಿಸಿ, ಪದವೀಧರರ ಹಿತ ಕಾಯುವವರನ್ನು ವಿಧಾನಸೌಧಕ್ಕೆ ಕಳಿಸಬೇಕು. ಅದಕ್ಕಾಗಿ, ಶಿಕ್ಷಕರು ಕೈ ಜೋಡಿಸಬೇಕು’ ಎಂದು ಹೇಳಿದರು.