ಈ ಎರಡೂ ನಗರಗಳಿಗೆ ತೊರೆಕಾಡನಹಳ್ಳಿಯಿಂದ ಕಾವೇರಿ ನೀರು ಸರಬರಾಜು ಮಾಡಲಾಗುತ್ತಿದೆ. ಚನ್ನಪಟ್ಟಣ ತಾಲ್ಲೂಕಿನ ಕೋಡಂಬಳ್ಳಿ ಪಂಚಾಯಿತಿ ಎದುರು ಮತ್ತು ರಾಮನಗರ ನಗರಕ್ಕೆ ಸರಬರಾಜು ಮಾಡುವ ಕೆಂಗಲ್ ದೇವಸ್ಥಾನದ ಸೇತುವೆ ಹತ್ತಿರ 600 ಎಂ.ಎಂ. ವ್ಯಾಸ ಮತ್ತು 450 ಎಂ.ಎಂ. ವ್ಯಾಸದ ಏರು ಕೊಳವೆ ಮಾರ್ಗಗಳ ಎರಡು ಕಡೆಗಳಲ್ಲಿ ಅಧಿಕವಾಗಿ ನೀರಿನ ಸೋರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಶುಕ್ರವಾರ ಮುಂಜಾನೆಯಿಂದಲೇ ಈ ಕಾಮಗಾರಿಯು ಆರಂಭಗೊಳ್ಳಲಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಚನ್ನಪಟ್ಟಣ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.