ಎರಡು ಆಳವಾದ ಬಾವಿಗಳಿಗೆ ವಿದ್ಯುತ್ ಮೋಟಾರ್ ಬಳಸಿ, ನೀರು ಮೇಲೆತ್ತಿ ಶುದ್ದೀಕರಿಸಿ ಕುಡಿಯುವ ನೀರು ಒದಗಿಸುವ ಯೋಜನೆ ಪ್ರಾರಂಭಗೊಂಡಿತು. ಅಂದು ಕಟ್ಟಿಸಿದ್ದ ಕಲ್ಲಿನ ಕಟ್ಟಡ ಇಂದಿಗೂ ಸುಭದ್ರವಾಗಿದೆ. ಆದರೆ, ಮಾಳಿಗೆಯ ಮೇಲೆ ಗಿಡಗಂಟಿ ಬೆಳೆದಿದೆ. ಪಂಪ್ ಹೌಸ್ ದುರಸ್ತಿ ಪಡಿಸಿದ್ದರೆ ಇನ್ನು ಕೆಲ ವರ್ಷ ನೀರು ಸರಬರಾಜಿಗೆ ಬಳಸಬಹುದಿತ್ತು. ಆದರೆ, ಬಹುಕೋಟಿ ವೆಚ್ಚದಲ್ಲಿ ಮಂಚನಬೆಲೆ ಜಲಾಶಯದ ನೀರು ಪಟ್ಟಣಕ್ಕೆ ಹರಿದು ಬಂದ ಮೇಲೆ ಕೆಂಪೇಗೌಡ ನೀರು ಸರಬರಾಜು ಯೋಜನೆ ಪಂಪ್ ಹೌಸ್ ವ್ಯವಸ್ಥೆ ಬಗ್ಗೆ ಗಮನಿಸದೆ ಕೈಬಿಡಲಾಗಿದೆ ಎಂದರು.