<p><strong>ಮರಳವಾಡಿ (ಕನಕಪುರ): </strong>ಪರಿಸರದಲ್ಲಿ ಹೆಚ್ಚು ಹೆಚ್ಚು ಮರಗಿಡಗಳನ್ನು ಬೆಳೆಸುವುದರಿಂದ ಪ್ರಕೃತಿ ಸಮತೋಲನವಾಗಿ ಉತ್ತಮ ಮಳೆಯಾಗುತ್ತದೆ. ಪರಿಶುದ್ಧ ಗಾಳಿ ದೊರೆಯುತ್ತದೆ ಎಂದು ಬೆಂಗಳೂರು ರೋಟರಿ ಪಿಎಚ್ಎಫ್ ಸಂಯೋಜಕ ಎಡುಮಡು ಕಾಂತರಾಜು ತಿಳಿಸಿದರು.</p>.<p>ಇಲ್ಲಿನ ಮರಳವಾಡಿ ಹೋಬಳಿ ಜಕ್ಕಸಂದ್ರ ಬಳಿಯ ರಮಣ ಮಹರ್ಷಿ ಅಂದರ ಶಾಲೆಯಲ್ಲಿ ಹಾರೋಹಳ್ಳಿ ರೊಟರಿ ವತಿಯಿಂದ ಆಚರಣೆ ಮಾಡಿದ ವಿಶ್ವ ಅಂಗಲ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಿಹಿ ವಿತರಿಸಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>ಹಾರೋಹಳ್ಳಿ ರೋಟರಿಯು ವಿಶೇಷವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ನಡೆಸುತ್ತಿದ್ದು ಮಕ್ಕಳ ದಿನಾಚರಣೆ ಪ್ರಯುಕ್ತ ಆಶ್ರಮದ ಆವರಣದಲ್ಲಿ 1 ಸಾವಿರ ಸಸಿಗಳನ್ನು ನೆಡಲು ಕಾರ್ಯಕ್ರಮ ರೂಪಿಸಲಾಗಿದೆ.</p>.<p>ಒಂದು ಸಾವಿರ ಸಸಿಗಳನ್ನು ನೆಡಲು ಗುಂಡಿಯನ್ನು ತೋಡಿದ್ದು ಅರಣ್ಯ ಇಲಾಖೆಯು ಸಸಿಗಳನ್ನು ಕೊಟ್ಟ ತಕ್ಷಣ ಗಿಡಗಳನ್ನು ನೆಡುವುದಾಗಿ ಹೇಳಿದರು.</p>.<p>ರೋಟರಿ ಅಧ್ಯಕ್ಷ ಭರತ್ ಮತ್ತು ಮಾಜಿ ಅಧ್ಯಕ್ಷ ಮಹಮ್ಮದ್ ಏಜಾಸ್ ಮಾತನಾಡಿ, ‘ಆಶ್ರಮದಲ್ಲಿರುವ ಎಲ್ಲರೂ ವಿಶೇಷ ಮಕ್ಕಳಾಗಿದ್ದಾರೆ. ಯಾವ ಯೋಚನೆಯಿಲ್ಲದೆ ಮುಗ್ಧತೆಯಿಂದ ಇರುವ ಮಕ್ಕಳು ದೇವರ ಸಮಾನರಾಗಿದ್ದು, ಇವರ ಬಾಳಲ್ಲೂ ಸಂಭ್ರಮ ಸುಖ ಶಾಂತಿ ನೆಮ್ಮದಿಯನ್ನು ಭಗವಂತ ಕರುಣಿಸಲಿ’ ಎಂದು ಪ್ರಾರ್ಥಿಸಿದರು.</p>.<p>ರೋಟರಿ ಮಹಮದ್ ನಖಿ, ಗುರುಶಂಕರ್, ಆಶ್ರದ ಮೇಲ್ವಿಚಾರಕ ತಿಮ್ಮರಾಜು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮರಳವಾಡಿ (ಕನಕಪುರ): </strong>ಪರಿಸರದಲ್ಲಿ ಹೆಚ್ಚು ಹೆಚ್ಚು ಮರಗಿಡಗಳನ್ನು ಬೆಳೆಸುವುದರಿಂದ ಪ್ರಕೃತಿ ಸಮತೋಲನವಾಗಿ ಉತ್ತಮ ಮಳೆಯಾಗುತ್ತದೆ. ಪರಿಶುದ್ಧ ಗಾಳಿ ದೊರೆಯುತ್ತದೆ ಎಂದು ಬೆಂಗಳೂರು ರೋಟರಿ ಪಿಎಚ್ಎಫ್ ಸಂಯೋಜಕ ಎಡುಮಡು ಕಾಂತರಾಜು ತಿಳಿಸಿದರು.</p>.<p>ಇಲ್ಲಿನ ಮರಳವಾಡಿ ಹೋಬಳಿ ಜಕ್ಕಸಂದ್ರ ಬಳಿಯ ರಮಣ ಮಹರ್ಷಿ ಅಂದರ ಶಾಲೆಯಲ್ಲಿ ಹಾರೋಹಳ್ಳಿ ರೊಟರಿ ವತಿಯಿಂದ ಆಚರಣೆ ಮಾಡಿದ ವಿಶ್ವ ಅಂಗಲ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಿಹಿ ವಿತರಿಸಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>ಹಾರೋಹಳ್ಳಿ ರೋಟರಿಯು ವಿಶೇಷವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ನಡೆಸುತ್ತಿದ್ದು ಮಕ್ಕಳ ದಿನಾಚರಣೆ ಪ್ರಯುಕ್ತ ಆಶ್ರಮದ ಆವರಣದಲ್ಲಿ 1 ಸಾವಿರ ಸಸಿಗಳನ್ನು ನೆಡಲು ಕಾರ್ಯಕ್ರಮ ರೂಪಿಸಲಾಗಿದೆ.</p>.<p>ಒಂದು ಸಾವಿರ ಸಸಿಗಳನ್ನು ನೆಡಲು ಗುಂಡಿಯನ್ನು ತೋಡಿದ್ದು ಅರಣ್ಯ ಇಲಾಖೆಯು ಸಸಿಗಳನ್ನು ಕೊಟ್ಟ ತಕ್ಷಣ ಗಿಡಗಳನ್ನು ನೆಡುವುದಾಗಿ ಹೇಳಿದರು.</p>.<p>ರೋಟರಿ ಅಧ್ಯಕ್ಷ ಭರತ್ ಮತ್ತು ಮಾಜಿ ಅಧ್ಯಕ್ಷ ಮಹಮ್ಮದ್ ಏಜಾಸ್ ಮಾತನಾಡಿ, ‘ಆಶ್ರಮದಲ್ಲಿರುವ ಎಲ್ಲರೂ ವಿಶೇಷ ಮಕ್ಕಳಾಗಿದ್ದಾರೆ. ಯಾವ ಯೋಚನೆಯಿಲ್ಲದೆ ಮುಗ್ಧತೆಯಿಂದ ಇರುವ ಮಕ್ಕಳು ದೇವರ ಸಮಾನರಾಗಿದ್ದು, ಇವರ ಬಾಳಲ್ಲೂ ಸಂಭ್ರಮ ಸುಖ ಶಾಂತಿ ನೆಮ್ಮದಿಯನ್ನು ಭಗವಂತ ಕರುಣಿಸಲಿ’ ಎಂದು ಪ್ರಾರ್ಥಿಸಿದರು.</p>.<p>ರೋಟರಿ ಮಹಮದ್ ನಖಿ, ಗುರುಶಂಕರ್, ಆಶ್ರದ ಮೇಲ್ವಿಚಾರಕ ತಿಮ್ಮರಾಜು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>