<p><strong>ಮಾಗಡಿ:</strong> ಪಟ್ಟಣದ ಸರ್ಕಾರಿ ಆಸ್ಪತ್ರೆ ವತಿಯಿಂದ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ವಿಶ್ವ ಮಲೇರಿಯಾ ದಿನವನ್ನು ಆಚರಿಸಲಾಯಿತು.</p> <p>ಪ್ರಸ್ತುತ ಮಲೇರಿಯಾ ಒಂದನೇ ಹಂತದಲ್ಲಿದ್ದೇವೆ. ಇದನ್ನು ಶೂನ್ಯಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆ ಡಿಎಂಒ ಡಾ.ಪದ್ಮಾವತಿ ತಿಳಿಸಿದರು.</p> <p>ಪ್ರತಿ ವರ್ಷ ಏಪ್ರಿಲ್ 25 ರಂದು ವಿಶ್ವ ಮಲೇರಿಯಾ ದಿನವನ್ನಾಗಿ ಆಚರಿಸಲಾಗುತ್ತದೆ. ಜಿಲ್ಲೆಯಲ್ಲಿ ಮಲೇರಿಯಾ ನಿರ್ಮೂಲನೆಗಾಗಿ ಗಣನೀಯ ಪ್ರಗತಿ ಸಾಧಿಸಿದೆ. 2027ರ ವೇಳೆಗೆ ಶೂನ್ಯಕ್ಕೆ ತರಲು ಮತ್ತು 2030ಕ್ಕೆ ಸಂಪೂರ್ಣ ನಿರ್ಮೂಲನೆ ಗುರಿ ಹೊಂದಿದ್ದೇವೆ ಎಂದರು.</p> <p>ಜಿಲ್ಲೆಯಲ್ಲಿ ಮಲೇರಿಯಾ ರೋಗದಿಂದ ಯಾವುದೇ ಸಾವು-ನೋವು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.</p> <p>ಪ್ರಭಾರ ಟಿಎಚ್ಒ ತನುಜಾ ಮಾತನಾಡಿ, ಸಾರ್ವಜನಿಕರಲ್ಲಿ ಮಲೇರಿಯಾ ಬಗ್ಗೆ ಜಾಥಾದ ಮೂಲಕ ಅರಿವು ಮೂಡಿಸಲಾಗುತ್ತಿದೆ. 2030ರ ವೇಳೆಗೆ ಭಾರತ ಮಲೇರಿಯಾ ಮುಕ್ತವಾಗಬೇಕು. ಹಾಗಾಗಿ ಸೊಳ್ಳೆಗಳು ಉತ್ಪಾದನೆಯಾಗದಂತೆ ಕ್ರಮವಹಿಸಬೇಕು ಎಂದರು.</p> <p>ಈ ವೇಳೆ ಮಲೇರಿಯಾ ನಿರ್ಮೂಲನಾ ಘೋಷಣೆಯ ಕರಪತ್ರ ಬಿಡುಗಡೆಗೊಳಿಸಿದರು. ಎಚ್.ಎಸ್.ವಿನಯ್, ಡಾ.ನಾಗರಾಜು ಉಪಾಧ್ಯಾಯ, ಡಾ.ಸುರೇಶ್, ಡಾ.ಬಸವರಾಜು, ಡಾ.ಮುರಳಿಮೋಹನ್, ಡಾ.ರಶ್ಮಿ, ಮಂಜುನಾಥ್, ಗುಣಶೇಖರ್, ಜಿ.ಮೋಹನ್, ಶಿವಸ್ವಾಮಿ, ಶಿವಕುಮಾರ್, ರಾಘವೇಂದ್ರ, ರಾಜಣ್ಣ, ಕುಮಾರ್, ಟಿಎಚ್ಒ ಕಚೇರಿ ಸಿಬ್ಬಂದಿ, ಪ್ರಯೋಗಶಾಲಾ ತಂತ್ರಜ್ಞರು ಹಾಗೂ ನರ್ಸ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ:</strong> ಪಟ್ಟಣದ ಸರ್ಕಾರಿ ಆಸ್ಪತ್ರೆ ವತಿಯಿಂದ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ವಿಶ್ವ ಮಲೇರಿಯಾ ದಿನವನ್ನು ಆಚರಿಸಲಾಯಿತು.</p> <p>ಪ್ರಸ್ತುತ ಮಲೇರಿಯಾ ಒಂದನೇ ಹಂತದಲ್ಲಿದ್ದೇವೆ. ಇದನ್ನು ಶೂನ್ಯಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆ ಡಿಎಂಒ ಡಾ.ಪದ್ಮಾವತಿ ತಿಳಿಸಿದರು.</p> <p>ಪ್ರತಿ ವರ್ಷ ಏಪ್ರಿಲ್ 25 ರಂದು ವಿಶ್ವ ಮಲೇರಿಯಾ ದಿನವನ್ನಾಗಿ ಆಚರಿಸಲಾಗುತ್ತದೆ. ಜಿಲ್ಲೆಯಲ್ಲಿ ಮಲೇರಿಯಾ ನಿರ್ಮೂಲನೆಗಾಗಿ ಗಣನೀಯ ಪ್ರಗತಿ ಸಾಧಿಸಿದೆ. 2027ರ ವೇಳೆಗೆ ಶೂನ್ಯಕ್ಕೆ ತರಲು ಮತ್ತು 2030ಕ್ಕೆ ಸಂಪೂರ್ಣ ನಿರ್ಮೂಲನೆ ಗುರಿ ಹೊಂದಿದ್ದೇವೆ ಎಂದರು.</p> <p>ಜಿಲ್ಲೆಯಲ್ಲಿ ಮಲೇರಿಯಾ ರೋಗದಿಂದ ಯಾವುದೇ ಸಾವು-ನೋವು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.</p> <p>ಪ್ರಭಾರ ಟಿಎಚ್ಒ ತನುಜಾ ಮಾತನಾಡಿ, ಸಾರ್ವಜನಿಕರಲ್ಲಿ ಮಲೇರಿಯಾ ಬಗ್ಗೆ ಜಾಥಾದ ಮೂಲಕ ಅರಿವು ಮೂಡಿಸಲಾಗುತ್ತಿದೆ. 2030ರ ವೇಳೆಗೆ ಭಾರತ ಮಲೇರಿಯಾ ಮುಕ್ತವಾಗಬೇಕು. ಹಾಗಾಗಿ ಸೊಳ್ಳೆಗಳು ಉತ್ಪಾದನೆಯಾಗದಂತೆ ಕ್ರಮವಹಿಸಬೇಕು ಎಂದರು.</p> <p>ಈ ವೇಳೆ ಮಲೇರಿಯಾ ನಿರ್ಮೂಲನಾ ಘೋಷಣೆಯ ಕರಪತ್ರ ಬಿಡುಗಡೆಗೊಳಿಸಿದರು. ಎಚ್.ಎಸ್.ವಿನಯ್, ಡಾ.ನಾಗರಾಜು ಉಪಾಧ್ಯಾಯ, ಡಾ.ಸುರೇಶ್, ಡಾ.ಬಸವರಾಜು, ಡಾ.ಮುರಳಿಮೋಹನ್, ಡಾ.ರಶ್ಮಿ, ಮಂಜುನಾಥ್, ಗುಣಶೇಖರ್, ಜಿ.ಮೋಹನ್, ಶಿವಸ್ವಾಮಿ, ಶಿವಕುಮಾರ್, ರಾಘವೇಂದ್ರ, ರಾಜಣ್ಣ, ಕುಮಾರ್, ಟಿಎಚ್ಒ ಕಚೇರಿ ಸಿಬ್ಬಂದಿ, ಪ್ರಯೋಗಶಾಲಾ ತಂತ್ರಜ್ಞರು ಹಾಗೂ ನರ್ಸ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>