ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ,ಚಿತ್ರದುರ್ಗ ಹಾಲು ಉತ್ಪಾದಕರ ಒಕ್ಕೂಟ (ಶಿದಾಚಿಮುಲ್) ಹಾಲು ಉತ್ಪಾದಕರಿಗೆ ನೀಡುವ ಖರೀದಿ ದರವನ್ನು ಡಿ.11ರಿಂದ ಅನ್ವಯವಾಗುವಂತೆ ಮತ್ತೆ ₹ 1.70 ಹೆಚ್ಚಳ ಮಾಡಿದೆ.
ಒಕ್ಕೂಟಆರು ತಿಂಗಳ ಅವಧಿಯಲ್ಲಿಹಾಲುಉತ್ಪಾದಕರಿಗೆ ನೀಡುವ ದರವನ್ನುಮೂರು ಬಾರಿ ಹೆಚ್ಚಳ ಮಾಡಿದೆ.ಲಾಭಾಂಶದ ಪ್ರಮಾಣ ಸತತ ಹೆಚ್ಚಳ ಕಾಣುತ್ತಿದ್ದು, ಹೆಚ್ಚುವರಿ ಲಾಭವನ್ನು ರೈತರಿಗೆ ವರ್ಗಾಯಿಸಲಾಗುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ಆನಂದ್ ಮಾಹಿತಿ ನೀಡಿದರು.
ಪ್ರಸ್ತುತ ಪ್ರತಿ ಲೀಟರ್ ಹಾಲಿಗೆ ₹ 27 ನೀಡಲಾಗುತ್ತಿದೆ. ದರ ಹೆಚ್ಚಳದ ನಂತರ 28.70 ಸಿಗಲಿದೆ. ಸರ್ಕಾರ ಪ್ರತಿ ಲೀಟರ್ಗೆ ₹6 ಸಹಾಯಧನ ನೀಡುತ್ತಿದೆ. ಆ ಪ್ರೋತ್ಸಾಹಧನವೂಹಾಲು ಉತ್ಪಾದಕರಿಗೆ ಪ್ರತಿ ಲೀಟರ್ಗೆ ಕನಿಷ್ಠ ₹ 34.70 ದೊರೆಯಲಿದೆ.
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ 1,120 ಸಹಕಾರ ಹಾಲು ಒಕ್ಕೂಟಗಳಿವೆ. ಪ್ರತಿದಿನ 5 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತದೆ. ಗ್ರಾಹಕರು ಖರೀದಿಸುವ ಹಾಲಿನ ದರದಲ್ಲಿ ಯಾವುದೇ ಏರಿಕೆಇರುವುದಿಲ್ಲ ಎಂದು ಒಕ್ಕೂಟ ಹೇಳಿದೆ.