ಶಿವಮೊಗ್ಗ:ಬಾಲಕಿಮೇಲೆ ಅತ್ಯಾಚಾರಎಸಗಿದ್ದ ಅರ್ಚಕನಿಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ14 ವರ್ಷಗಳ ಕಾರಾಗೃಹಶಿಕ್ಷೆವಿಧಿಸಿದೆ.
ಅಚ್ಯುತರಾವ್ ಲೇಔಟ್ನದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕ ಶಿವಕುಮಾರ್ ಶಿಕ್ಷೆಗೆ ಗುರಿಯಾದ ಅಪರಾಧಿ
ಶಿವಕುಮಾರ್2016ರಲ್ಲಿ ಬಾಲಕಿಗೆಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಬರುವಂತೆ ಮಾಡುವ ಆಮಿಷ ತೋರಿಸಿ ದೇವಸ್ಥಾನಕ್ಕೆ ಕರೆಸಿಕೊಂಡು ಅತ್ಯಾಚಾರವೆಸಗಿದ್ದನು ಎಂದು ಮಹಿಳಾ ಠಾಣೆಗೆ ದೂರು ನೀಡಲಾಗಿತ್ತು.ಪೋಕ್ಸೊ ಕಾಯ್ದೆ ಅಡಿಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನುಬಂಧಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಬಿ. ಶಿವಪ್ರಸಾದ್ ಅವರು ಆರೋಪಿಗೆ ಶಿಕ್ಷೆ ಹಾಗೂ₹ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ದಂಡದ ಹಣ ಸಂತ್ರಸ್ತೆಗೆ ನೀಡುವಂತೆಸೂಚಿಸಿದ್ದಾರೆ.
ಸರ್ಕಾರದ ಪರವಾಗಿಅಭಿಯೋಜಕ ಕೆ.ಎಸ್. ಸತೀಶ್ ವಾದ ಮಂಡಿಸಿದ್ದರು.