ಜೆಒಸಿ ವಿಲೀನ ವಂಚಿತ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣ ಮಾತನಾಡಿ, ‘ಬಿಜೆಪಿ ಸರ್ಕಾರವಿದ್ದಾಗ ಜೆಒಸಿ ಎಂಬುದನ್ನೇ ಬಂದ್ ಮಾಡಲಾಯಿತು. ಆಗ ಅಲ್ಲಿ ಸುಮಾರು 3,746 ಸಿಬ್ಬಂದಿ ಇದ್ದರು. ಅದರಲ್ಲಿ 3,216 ಜನರನ್ನು ಕಾಯಂ ಮಾಡಲಾಯಿತು. ಕೆಲವು ಕಾರಣವೊಡ್ಡಿ 530 ಸಿಬ್ಬಂದಿಯನ್ನು ಕೈಬಿಡಲಾಯಿತು. ಇವರ ಪರವಾಗಿ ಆಯನೂರು ಮಂಜುನಾಥ್ ಬೆಳಗಾವಿ ಅಧಿವೇಶನದಲ್ಲಿ ದನಿ ಎತ್ತಿದ್ದಾರೆ. ಅವರು ನಮ್ಮ ಪರವಾಗಿ ನಿಲ್ಲುತ್ತಾರೆ ಎಂಬ ನಂಬಿಕೆಯಿಂದ ನಾವು ಕೂಡ ಅವರನ್ನು ಬೆಂಬಲಿಸುತ್ತೇವೆ’ ಎಂದು ತಿಳಿಸಿದರು.