ಖುರೇಷಿಯ ತಂದೆ ಆಟೊ ಚಾಲಕ ಇದ್ದು, ಎಂ.ಕೆ.ಕೆ ರಸ್ತೆಯಲ್ಲಿ ಎರಡನೇ ಪತ್ನಿಯೊಂದಿಗೆ ವಾಸವಿದ್ದಾರೆ. ಅದೇ ಮನೆಯಲ್ಲಿ ಆರೋಪಿ ಇದ್ದಾನೆ ಎಂಬ ಮಾಹಿತಿ ತಿಳಿದು ಆತನನ್ನು ಬಂಧಿಸಲು ಬೆಳಿಗ್ಗೆ ಪೊಲೀಸರು ತೆರಳಿದ್ದರು. ಈ ವೇಳೆ ಶಾಹಿದ್ ಖುರೇಷಿ ದೊಡ್ಡಪೇಟೆ ಠಾಣೆ ಕಾನ್ಸ್ಟೆಬಲ್ ಗುರುನಾಯ್ಕ ಅವರ ಎದೆಗೆ ಚಾಕುವಿನಿಂದ ಇರಿದು ತಪ್ಪಿಸಿಕೊಂಡು ಪರಾರಿಯಾಗಿದ್ದನು. ಮತ್ತೊಬ್ಬ ಕಾನ್ಸ್ಟೆಬಲ್ ರಮೇಶ್ ಕೂಡ ಆಗ ಗಾಯಗೊಂಡಿದ್ದರು.