ಸಾಗರ ತಾಲ್ಲೂಕಿನ ಬೊಮ್ಮತ್ತಿ, ಮಂಚಾಲೆ, ತ್ಯಾಗರ್ತಿ, ಹೊಸಂತೆ, ನೀಚಡಿ ಮುಂತಾದ ಗ್ರಾಮಗಳಲ್ಲಿ ತಲಾ 2 ದಿನಗಳ ಕಾಲ ಉಳಿಯುವವಿನೋದ್ ಅವರು ಕತ್ತಿ, ಪಿಕಾಸಿ, ಕೊಡಲಿ ಕೃಷಿ ಉಪಕರಣಗಳನ್ನು ಬೆಂಕಿಯಲ್ಲಿ ಕಾಯಿಸಿ, ಬಡಿದು, ಹದಗೊಳಿಸಿ, ಹರಿತಗೊಳಿಸಿಕೊಡುತ್ತಾರೆ. ವಿನೋದ್ ಅವರ ಮಡದಿ ಅರ್ಚನಾ ಸಹಾ ಅವರೊಂದಿಗೆ ಕೆಲಸ ನಿರ್ವಹಿಸುತ್ತಾರೆ. ಪುಟಾಣಿ ಮಗುವಿನ ಪಾಲನೆ ಜತೆಗೆ ಕೃಷಿ ಸಲಕರಣೆಗಳನ್ನು ಹದಗೊಳಿಸಿಕೊಡುತ್ತಿರುವ ಇವರ ಕೆಲಸಕ್ಕೆ ಈ ಭಾಗದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.