<p><strong>ಹೊಸನಗರ:</strong> ತಾಲ್ಲೂಕಿನ ಬಿಳ್ಳೊಡಿ ಗ್ರಾಮದಲ್ಲಿ ಕ್ರಿ.ಶ. 1087ರಲ್ಲಿ ಸಾಂತರ ದೊರೆ ವಿಕ್ರಮ ಸಾಂತರನು ತನ್ನ ಅಣ್ಣ ಹಾಗೂ ಶಾಂತರ ದೊರೆಗಳಲ್ಲೇ ಪ್ರಖ್ಯಾತನಾದ ನನ್ನಿಯ ಸಾಂತರನ ಪರೋಕ್ಷ ವಿನಯಕ್ಕಾಗಿ ಅಜಿತ ಸೇನಾ ಪಂಡಿತರಿಗೆ ಕಟ್ಟಿಸಿದ ಶಾಲೆಯ ಕಟ್ಟಡ ಪತ್ತೆಯಾಗಿದೆ.</p>.<p>ಇತಿಹಾಸ ಸಂಶೋಧಕರಾದ ರಮೇಶ್ ಬಿ.ಹಿರೇಜಂಬೂರು ಅವರು ತಮ್ಮ ಕ್ಷೇತ್ರ ಕಾರ್ಯದಲ್ಲಿ ಸಾಂತರರ ಈ ನೆಲೆಯನ್ನು ಪತ್ತೆ ಮಾಡಿದ್ದಾರೆ.</p>.<p>ನನ್ನಿಯ ಸಾಂತರನು ಮರಣಿಸಿದಾಗ ಆತನ ಸ್ಮರಣಾರ್ಥ ಜೈನ ಮುನಿಗಳಾದ ಅಜಿತ ಸೇನಾ ಪಂಡಿತರ ಧರ್ಮ ಕಾರ್ಯಗಳಿಗೆ ಪೂರಕವಾಗಿ ಈ ಕಟ್ಟಡವನ್ನು ಕಟ್ಟಲಾಗಿದೆ. ಈ ಕಟ್ಟಡದ ಮುಂಭಾಗದ ಎರಡೂ ಬದಿಗಳಲ್ಲಿ ನನ್ನಿಯ ಸಾಂತರನ ಜೀವನದ ವಿಶೇಷತೆಗಳನ್ನು ಚಿತ್ರಗಳ ರೂಪದಲ್ಲಿ ಕೆತ್ತಲಾಗಿದೆ. ಈ ಕಟ್ಟಡದ ಬಾಗಿಲುವಾಡಿಯ ಮೇಲ್ಭಾಗದಲ್ಲಿ ಮತ್ತು ಬಾಗಿಲಿನ ತೋಳುಗಳ ಕೆಳಭಾಗದ ತೊಲೆಗಳಲ್ಲಿ ವಿಕ್ರಮ ಸಾಂತರನ ಅವಧಿಯ ಶಾಸನ ಪಾಠಗಳನ್ನು ಕೆತ್ತಲಾಗಿದೆ.</p>.<p>ಎಡಭಾಗದ ಪಟ್ಟಿಕೆಯಲ್ಲಿ ನನ್ನಿಯ ಸಾಂತರನ ಆಡಳಿತ, ಮಲ್ಲಯುದ್ಧ, ಜಯದ ಮೆರವಣಿಗೆಗಳು, ಗಜ ಪಡೆಯೊಂದಿಗಿನ ಹೋರಾಟಗಳ ಚಿತ್ರಗಳನ್ನು ಕೆತ್ತಲಾಗಿದೆ. ಬಲಭಾಗದ ಪಟ್ಟಿಕೆಯಲ್ಲಿ ಆತನ ಸಹೋದರ ಬರ್ಮ ಸಾಂತರನು ಸನ್ಯಾಸ ವ್ರತವನ್ನು ಸ್ವೀಕರಿಸುತ್ತಿರುವ ವಿವಿಧ ಹಂತಗಳ ಚಿತ್ರಗಳನ್ನು ಕೆತ್ತಲಾಗಿದೆ.</p>.<p>‘ಶಾಸನವು ಕಟ್ಟಡದ ಮುಂಭಾಗದ ವಿವಿಧ ಹಂತಗಳಲ್ಲಿ ಖಂಡರಿಸಿದ್ದು, ಕಟ್ಟಡದ ಭಾಗಗಳು ಕಳಚಿ ಬಿದ್ದಿವೆ. ಅವುಗಳು ಚದುರಿ ಹೋಗಿವೆ. ಬಿಡಿಯಾಗಿ ಶಾಸನ ಪಾಠ ಪಡೆದು ಅಧ್ಯಯನಕ್ಕೊಳಪಡಿಸಲಾಗಿದೆ. ಶಾಸನಗಳಿರುವ ಒಟ್ಟು ಏಳು ಶಿಲಾ ಭಾಗಗಳು ದೊರೆತಿವೆ’ ಎಂದು ರಮೇಶ್ ಬಿ.ಹಿರೇಜಂಬೂರು ತಿಳಿಸಿದರು.</p>.<p>ಈ ಕಟ್ಟಡದ ಗರ್ಭ ಭಾಗದಲ್ಲಿ ಪೀಠ ಇದ್ದು ಯಾವುದೇ ಶಿಲ್ಪಗಳು ಕಂಡುಬಂದಿಲ್ಲ. ಮರಗಳು ಬೆಳೆದು ಕಟ್ಟಡವು ಶಿಥಿಲಾವಸ್ಥೆ ತಲುಪಿದೆ. ಸ್ಥಳೀಯರು ಆಸಕ್ತಿ ವಹಿಸಿ ಅಧ್ಯಯನಕ್ಕೆಂದು ಸಂಶೋಧಕರನ್ನು ಕರೆದು ಸ್ವಚ್ಛಗೊಳಿಸಿ ನೋಡಿದಾಗ ಇದರ ಇತಿಹಾಸ ದೊರೆತಿದೆ.</p>.<p>ಇವುಗಳ ಸನಿಹದಲ್ಲೇ ಎರಡು ವೀರಗಲ್ಲು ದೊರಕಿದ್ದು, ಇದು ಕ್ರಿ.ಶ. 1124ರ ಅವಧಿಯದ್ದಾಗಿದೆ. </p>.<p>ಸಂಶೋಧನೆಯಲ್ಲಿ ಬಿಳ್ಳೊಡಿ ಗ್ರಾಮದ ಆದಿತ್ಯ ಗೌಡ, ರತ್ನಾಕರ ಗೌಡ, ಪ್ರಕಾಶ ರಾಜಪ್ಪಗೌಡ, ವಿನಾಯಕ ಭಟ್ ಮತ್ತು ಭಾಸ್ಕರ್ ಗೌಡ ಇದ್ದರು.</p>.<p>ಶಾಸನಗಳ ಅಧ್ಯಯನಕ್ಕೆ ಜಗದೀಶ್ ಅಗಸಿಬಾಗಿಲು, ಎಂ.ಜಿ.ಮಂಜುನಾಥ, ಶೇಜೇಶ್ವರ್ ನಾಯ್ಕ ಮತ್ತು ಮಂಜಪ್ಪ ಚುರ್ಚಿಗುಂಡಿ ಮಾರ್ಗದರ್ಶನ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸನಗರ:</strong> ತಾಲ್ಲೂಕಿನ ಬಿಳ್ಳೊಡಿ ಗ್ರಾಮದಲ್ಲಿ ಕ್ರಿ.ಶ. 1087ರಲ್ಲಿ ಸಾಂತರ ದೊರೆ ವಿಕ್ರಮ ಸಾಂತರನು ತನ್ನ ಅಣ್ಣ ಹಾಗೂ ಶಾಂತರ ದೊರೆಗಳಲ್ಲೇ ಪ್ರಖ್ಯಾತನಾದ ನನ್ನಿಯ ಸಾಂತರನ ಪರೋಕ್ಷ ವಿನಯಕ್ಕಾಗಿ ಅಜಿತ ಸೇನಾ ಪಂಡಿತರಿಗೆ ಕಟ್ಟಿಸಿದ ಶಾಲೆಯ ಕಟ್ಟಡ ಪತ್ತೆಯಾಗಿದೆ.</p>.<p>ಇತಿಹಾಸ ಸಂಶೋಧಕರಾದ ರಮೇಶ್ ಬಿ.ಹಿರೇಜಂಬೂರು ಅವರು ತಮ್ಮ ಕ್ಷೇತ್ರ ಕಾರ್ಯದಲ್ಲಿ ಸಾಂತರರ ಈ ನೆಲೆಯನ್ನು ಪತ್ತೆ ಮಾಡಿದ್ದಾರೆ.</p>.<p>ನನ್ನಿಯ ಸಾಂತರನು ಮರಣಿಸಿದಾಗ ಆತನ ಸ್ಮರಣಾರ್ಥ ಜೈನ ಮುನಿಗಳಾದ ಅಜಿತ ಸೇನಾ ಪಂಡಿತರ ಧರ್ಮ ಕಾರ್ಯಗಳಿಗೆ ಪೂರಕವಾಗಿ ಈ ಕಟ್ಟಡವನ್ನು ಕಟ್ಟಲಾಗಿದೆ. ಈ ಕಟ್ಟಡದ ಮುಂಭಾಗದ ಎರಡೂ ಬದಿಗಳಲ್ಲಿ ನನ್ನಿಯ ಸಾಂತರನ ಜೀವನದ ವಿಶೇಷತೆಗಳನ್ನು ಚಿತ್ರಗಳ ರೂಪದಲ್ಲಿ ಕೆತ್ತಲಾಗಿದೆ. ಈ ಕಟ್ಟಡದ ಬಾಗಿಲುವಾಡಿಯ ಮೇಲ್ಭಾಗದಲ್ಲಿ ಮತ್ತು ಬಾಗಿಲಿನ ತೋಳುಗಳ ಕೆಳಭಾಗದ ತೊಲೆಗಳಲ್ಲಿ ವಿಕ್ರಮ ಸಾಂತರನ ಅವಧಿಯ ಶಾಸನ ಪಾಠಗಳನ್ನು ಕೆತ್ತಲಾಗಿದೆ.</p>.<p>ಎಡಭಾಗದ ಪಟ್ಟಿಕೆಯಲ್ಲಿ ನನ್ನಿಯ ಸಾಂತರನ ಆಡಳಿತ, ಮಲ್ಲಯುದ್ಧ, ಜಯದ ಮೆರವಣಿಗೆಗಳು, ಗಜ ಪಡೆಯೊಂದಿಗಿನ ಹೋರಾಟಗಳ ಚಿತ್ರಗಳನ್ನು ಕೆತ್ತಲಾಗಿದೆ. ಬಲಭಾಗದ ಪಟ್ಟಿಕೆಯಲ್ಲಿ ಆತನ ಸಹೋದರ ಬರ್ಮ ಸಾಂತರನು ಸನ್ಯಾಸ ವ್ರತವನ್ನು ಸ್ವೀಕರಿಸುತ್ತಿರುವ ವಿವಿಧ ಹಂತಗಳ ಚಿತ್ರಗಳನ್ನು ಕೆತ್ತಲಾಗಿದೆ.</p>.<p>‘ಶಾಸನವು ಕಟ್ಟಡದ ಮುಂಭಾಗದ ವಿವಿಧ ಹಂತಗಳಲ್ಲಿ ಖಂಡರಿಸಿದ್ದು, ಕಟ್ಟಡದ ಭಾಗಗಳು ಕಳಚಿ ಬಿದ್ದಿವೆ. ಅವುಗಳು ಚದುರಿ ಹೋಗಿವೆ. ಬಿಡಿಯಾಗಿ ಶಾಸನ ಪಾಠ ಪಡೆದು ಅಧ್ಯಯನಕ್ಕೊಳಪಡಿಸಲಾಗಿದೆ. ಶಾಸನಗಳಿರುವ ಒಟ್ಟು ಏಳು ಶಿಲಾ ಭಾಗಗಳು ದೊರೆತಿವೆ’ ಎಂದು ರಮೇಶ್ ಬಿ.ಹಿರೇಜಂಬೂರು ತಿಳಿಸಿದರು.</p>.<p>ಈ ಕಟ್ಟಡದ ಗರ್ಭ ಭಾಗದಲ್ಲಿ ಪೀಠ ಇದ್ದು ಯಾವುದೇ ಶಿಲ್ಪಗಳು ಕಂಡುಬಂದಿಲ್ಲ. ಮರಗಳು ಬೆಳೆದು ಕಟ್ಟಡವು ಶಿಥಿಲಾವಸ್ಥೆ ತಲುಪಿದೆ. ಸ್ಥಳೀಯರು ಆಸಕ್ತಿ ವಹಿಸಿ ಅಧ್ಯಯನಕ್ಕೆಂದು ಸಂಶೋಧಕರನ್ನು ಕರೆದು ಸ್ವಚ್ಛಗೊಳಿಸಿ ನೋಡಿದಾಗ ಇದರ ಇತಿಹಾಸ ದೊರೆತಿದೆ.</p>.<p>ಇವುಗಳ ಸನಿಹದಲ್ಲೇ ಎರಡು ವೀರಗಲ್ಲು ದೊರಕಿದ್ದು, ಇದು ಕ್ರಿ.ಶ. 1124ರ ಅವಧಿಯದ್ದಾಗಿದೆ. </p>.<p>ಸಂಶೋಧನೆಯಲ್ಲಿ ಬಿಳ್ಳೊಡಿ ಗ್ರಾಮದ ಆದಿತ್ಯ ಗೌಡ, ರತ್ನಾಕರ ಗೌಡ, ಪ್ರಕಾಶ ರಾಜಪ್ಪಗೌಡ, ವಿನಾಯಕ ಭಟ್ ಮತ್ತು ಭಾಸ್ಕರ್ ಗೌಡ ಇದ್ದರು.</p>.<p>ಶಾಸನಗಳ ಅಧ್ಯಯನಕ್ಕೆ ಜಗದೀಶ್ ಅಗಸಿಬಾಗಿಲು, ಎಂ.ಜಿ.ಮಂಜುನಾಥ, ಶೇಜೇಶ್ವರ್ ನಾಯ್ಕ ಮತ್ತು ಮಂಜಪ್ಪ ಚುರ್ಚಿಗುಂಡಿ ಮಾರ್ಗದರ್ಶನ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>