<p><strong>ಶಿವಮೊಗ್ಗ</strong>: ಮಳಿಗೆ ಹಂಚಿಕೆ ಮಾಡಲು ತರಕಾರಿ ವ್ಯಾಪಾರಿಯಿಂದ ₹ 50,000 ಲಂಚ ಪಡೆಯುತ್ತಿದ್ದ ವೇಳೆ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾರ್ಯದರ್ಶಿ ಕೆ.ಕೋಡಿಗೌಡ ಹಾಗೂ ಲೈಸೆನ್ ವರ್ಕರ್ ಕೆ.ಎ. ಯೋಗೀಶ್ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.</p>.<p>ಎಪಿಎಂಸಿ ವ್ಯಾಪ್ತಿಯ ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ 16 ಮಳಿಗೆಗಳನ್ನು ವ್ಯಾಪಾರಿಗಳಿಗೆ ಹಂಚಿಕೆ ಮಾಡಲಾಗಿದೆ. ಅದರಲ್ಲಿ 16ನೇ ಸಂಖ್ಯೆಯ ಮಳಿಗೆಯಲ್ಲಿ ಶಿವಮೊಗ್ಗದ ಗೋಪಾಳದ ಕೆಎಚ್ಬಿ ಕಾಲೊನಿ ನಿವಾಸಿ ರವೀಂದ್ರ ವಿ.ನೇರಳೆ ಸಗಟು ದರದಲ್ಲಿ ತರಕಾರಿ ವ್ಯಾಪಾರ ಮಾಡುತ್ತಾರೆ.</p>.<p>ಪ್ರಾಂಗಣದಲ್ಲಿನ 16 ಮಳಿಗೆಗಳ ಪೈಕಿ ಮೊದಲ 14 ಮಳಿಗೆಗಳ ಪುನರ್ ಹಂಚಿಕೆ ಮಾಡಲು ಹೈಕೋರ್ಟ್ ಇತ್ತೀಚೆಗೆ ಆದೇಶ ನೀಡಿದೆ. ಆ ಮಳಿಗೆಗಳ ಪುನರ್ ಹಂಚಿಕೆ ವೇಳೆ ತಮ್ಮನ್ನೂ ಪರಿಗಣಿಸುವಂತೆ ರವೀಂದ್ರ ಅವರು ಎಪಿಎಂಸಿ ಕಾರ್ಯದರ್ಶಿ ಕೆ.ಕೋಡಿಗೌಡ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು.</p>.<p>‘ಪುನರ್ ಹಂಚಿಕೆ ವೇಳೆ ಮಳಿಗೆ ಮಂಜೂರು ಮಾಡಲು ಖರ್ಚು ಬರುತ್ತದೆ’ ಎಂದು ಹೇಳಿದ್ದ ಕೋಡಿಗೌಡ, ಅದಕ್ಕೆ ಎಪಿಎಂಸಿಯ ಲೈಸೆನ್ಸ್ ವರ್ಕರ್ ಯೋಗೀಶ್ನನ್ನು ಭೇಟಿಯಾಗುವಂತೆ ಸೂಚಿಸಿದ್ದರು ಎನ್ನಲಾಗಿದೆ.</p>.<p>‘ಕಾರ್ಯದರ್ಶಿ ಸೂಚನೆಯಂತೆ ಯೋಗೀಶ್ ಭೇಟಿ ಆದಾಗ ಅವರು ₹ 2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ ಕೋರಿಕೆ ಮೇರೆಗೆ ₹ 1 ಲಕ್ಷಕ್ಕೆ ಒಪ್ಪಿಕೊಂಡಿದ್ದರು’ ಎಂದು ರವೀಂದ್ರ ಅವರು ಶಿವಮೊಗ್ಗ ಲೋಕಾಯುಕ್ತ ಡಿವೈಎಸ್ಪಿ ಕಚೇರಿಗೆ ದೂರು ನೀಡಿದ್ದರು.</p>.<p>ಆರೋಪಿಗಳು ರವೀಂದ್ರ ಅವರಿಂದ ₹ 50,000 ಮುಂಗಡವಾಗಿ ಪಡೆಯುವಾಗ ಲೋಕಾಯುಕ್ತ ಇನ್ಸ್ಪೆಕ್ಟರ್ ಸುರೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ಮಳಿಗೆ ಹಂಚಿಕೆ ಮಾಡಲು ತರಕಾರಿ ವ್ಯಾಪಾರಿಯಿಂದ ₹ 50,000 ಲಂಚ ಪಡೆಯುತ್ತಿದ್ದ ವೇಳೆ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾರ್ಯದರ್ಶಿ ಕೆ.ಕೋಡಿಗೌಡ ಹಾಗೂ ಲೈಸೆನ್ ವರ್ಕರ್ ಕೆ.ಎ. ಯೋಗೀಶ್ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.</p>.<p>ಎಪಿಎಂಸಿ ವ್ಯಾಪ್ತಿಯ ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ 16 ಮಳಿಗೆಗಳನ್ನು ವ್ಯಾಪಾರಿಗಳಿಗೆ ಹಂಚಿಕೆ ಮಾಡಲಾಗಿದೆ. ಅದರಲ್ಲಿ 16ನೇ ಸಂಖ್ಯೆಯ ಮಳಿಗೆಯಲ್ಲಿ ಶಿವಮೊಗ್ಗದ ಗೋಪಾಳದ ಕೆಎಚ್ಬಿ ಕಾಲೊನಿ ನಿವಾಸಿ ರವೀಂದ್ರ ವಿ.ನೇರಳೆ ಸಗಟು ದರದಲ್ಲಿ ತರಕಾರಿ ವ್ಯಾಪಾರ ಮಾಡುತ್ತಾರೆ.</p>.<p>ಪ್ರಾಂಗಣದಲ್ಲಿನ 16 ಮಳಿಗೆಗಳ ಪೈಕಿ ಮೊದಲ 14 ಮಳಿಗೆಗಳ ಪುನರ್ ಹಂಚಿಕೆ ಮಾಡಲು ಹೈಕೋರ್ಟ್ ಇತ್ತೀಚೆಗೆ ಆದೇಶ ನೀಡಿದೆ. ಆ ಮಳಿಗೆಗಳ ಪುನರ್ ಹಂಚಿಕೆ ವೇಳೆ ತಮ್ಮನ್ನೂ ಪರಿಗಣಿಸುವಂತೆ ರವೀಂದ್ರ ಅವರು ಎಪಿಎಂಸಿ ಕಾರ್ಯದರ್ಶಿ ಕೆ.ಕೋಡಿಗೌಡ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು.</p>.<p>‘ಪುನರ್ ಹಂಚಿಕೆ ವೇಳೆ ಮಳಿಗೆ ಮಂಜೂರು ಮಾಡಲು ಖರ್ಚು ಬರುತ್ತದೆ’ ಎಂದು ಹೇಳಿದ್ದ ಕೋಡಿಗೌಡ, ಅದಕ್ಕೆ ಎಪಿಎಂಸಿಯ ಲೈಸೆನ್ಸ್ ವರ್ಕರ್ ಯೋಗೀಶ್ನನ್ನು ಭೇಟಿಯಾಗುವಂತೆ ಸೂಚಿಸಿದ್ದರು ಎನ್ನಲಾಗಿದೆ.</p>.<p>‘ಕಾರ್ಯದರ್ಶಿ ಸೂಚನೆಯಂತೆ ಯೋಗೀಶ್ ಭೇಟಿ ಆದಾಗ ಅವರು ₹ 2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ ಕೋರಿಕೆ ಮೇರೆಗೆ ₹ 1 ಲಕ್ಷಕ್ಕೆ ಒಪ್ಪಿಕೊಂಡಿದ್ದರು’ ಎಂದು ರವೀಂದ್ರ ಅವರು ಶಿವಮೊಗ್ಗ ಲೋಕಾಯುಕ್ತ ಡಿವೈಎಸ್ಪಿ ಕಚೇರಿಗೆ ದೂರು ನೀಡಿದ್ದರು.</p>.<p>ಆರೋಪಿಗಳು ರವೀಂದ್ರ ಅವರಿಂದ ₹ 50,000 ಮುಂಗಡವಾಗಿ ಪಡೆಯುವಾಗ ಲೋಕಾಯುಕ್ತ ಇನ್ಸ್ಪೆಕ್ಟರ್ ಸುರೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>