ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಔಷಧ ಸಂಶೋಧನೆ ನಿಟ್ಟಿನಲ್ಲಿ ಐದು ವರ್ಷಗಳ ಹಿಂದೆ ಸ್ಥಳ ಪರಿಶೀಲನೆ ನಡೆಸಿದ್ದ ವಿಜ್ಞಾನಿಗಳ ತಂಡ ಈವರೆಗೂ ಪರಿಣಾಮಕಾರಿ ಫಲಿತಾಂಶ ಪಡೆದಿಲ್ಲ. ರೋಗ ಬಾಧೆ ಈ ವರ್ಷ ವಿಪರೀತದ ಹಂತಕ್ಕೆ ತಲುಪಿದೆ.
ಕಡಿದಾಳ್ ಗೋಪಾಲ್. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ
ಆಗುಂಬೆ ಮತ್ತೂರು ತೀರ್ಥಹಳ್ಳಿ ಕಸಬಾ ಹೋಬಳಿ ಪ್ರದೇಶದ ಬಹುತೇಕ ಗ್ರಾಮಗಳಲ್ಲಿ ಎಲೆಚುಕ್ಕಿ ರೋಗ ವ್ಯಾಪಕವಾಗಿದೆ. ನೂರಾರು ಎಕರೆ ತೋಟ ಎಲೆಚುಕ್ಕಿ ರೋಗಕ್ಕೆ ಬಲಿಯಾಗಿದೆ
ಆರ್.ಎಂ.ಮಂಜುನಾಥಗೌಡ ಎಂಎಡಿಬಿ ಅಧ್ಯಕ್ಷ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೋಗ ಅಧ್ಯಯನ ನಿಯಂತ್ರಣ ಹೆಸರಲ್ಲಿ ಒಂದಿಷ್ಟು ಅನುದಾನ ಬಿಡುಗಡೆ ಮಾಡಿ ಮೌನಕ್ಕೆ ಜಾರುತ್ತಿವೆ. ಆದರೆ ಸಂಬಂಧಿಸಿದ ಸಂಸ್ಥೆಗಳು ಶಾಶ್ವತ ಪರಿಹಾರ ಹುಡುಕುವಲ್ಲಿ ವಿಫಲವಾಗಿವೆ.
ಸುಧೀರ್ ಅಡಿಕೆ ಬೆಳೆಗಾರ
ಸಮಸ್ಯೆಗೆ ಪರಿಹಾರಕ್ಕೆ ಅಡಿಕೆ ಅಭಿವೃದ್ಧಿ ಮಂಡಳಿ ಅವಶ್ಯವಿದೆ. ಐಸಿಎಆರ್ ಅಡಿಯಲ್ಲಿ ನಿರ್ದಿಷ್ಟ ಬೆಳೆಗಳು ಸಂಶೋಧನಾ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುವ ವಿಶೇಷ ಸಂಸ್ಥೆ ಕರ್ನಾಟಕದಲ್ಲಿ ಸ್ಥಾಪನೆಯಾಗಬೇಕು