ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಕಳವು: ಮೂವರ ಬಂಧನ

Published 1 ನವೆಂಬರ್ 2023, 8:57 IST
Last Updated 1 ನವೆಂಬರ್ 2023, 8:57 IST
ಅಕ್ಷರ ಗಾತ್ರ

ಹೊಸನಗರ: ಪಟ್ಟಣದ ಸಮೇದಾ ಅಡಿಕೆ ಮಂಡಿಯಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆ ಕಳವು ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪಟ್ವಣದ ಮಾವಿನಕೊಪ್ಪ ನಿವಾಸಿಗಳಾದ ಎನ್. ರವಿರಾಜ್, ಪಿ. ನಾಗರಾಜ್, ರಾಜೇಶ್ ಬಂಧಿತರು. ಪಟ್ಟಣದ ಸಮೇದಾ ಅಡಿಕೆ ಮಂಡಿಯಲ್ಲಿ ಸಂಗ್ರಹಿಸಿದ್ದ 20 ಕ್ವಿಂಟಲ್ ಅಡಿಕೆಯನ್ನು ಕಳೆದ ತಿಂಗಳು ಇವರು ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಪಿಐ ಗುರಣ್ಣ ಹೆಬ್ಬಾಳ್ ಮಾರ್ಗದರ್ಶನದಲ್ಲಿ ಪಿಎಸ್ಐ ಶಿವಾನಂದ ಕೋಳಿ ನೇತೃತ್ವದಲ್ಲಿ ಎಎಸ್ಐ ಸುರೇಶ್ ರಾಜ್, ಸಿಬ್ಬಂದಿ ಸುನೀಲ್, ರಂಜಿತ್, ಗಂಗಪ್ಪ ಬಟೋಲಿ, ಸಂದೀಪ್, ನಾಗೇಶ್ ಅವರ ತಂಡ ಕಾರ್ಯಾಚರಣೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT