ಸರ್ಕಾರ ತಕ್ಷಣವೇ ಸಂತೋಷ್ ಅವರ ಬಾಕಿ ಬಿಲ್ ಮೊತ್ತವಾದ ₹ 4.24 ಕೋಟಿ ಹಣವನ್ನು ಬಿಡುಗಡೆ ಮಾಡಬೇಕು. ಅವರು ತಮ್ಮ ಮನೆಯ ಒಡವೆ, ಇತರೆ ಆಸ್ತಿಯನ್ನು ಅಡವಿಟ್ಟು ದುಡ್ಡು ಖರ್ಚು ಮಾಡಿದ್ದಾರೆ. ಅವರ ಕುಟುಂಬಕ್ಕೆ ನೆರವು ನೀಡಬೇಕು. ವೀರಶೈವ ಮುಖಂಡರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೆರವು ನೀಡಲು ಮತ್ತು ದೇಣಿಗೆಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.