<p><strong>ಭದ್ರಾವತಿ:</strong> ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಆಚರಣೆಗೆ ಮುಸ್ಲಿಮರು ಸಕಲ ಸಿದ್ಧತೆಗಳಲ್ಲಿ ತೊಡಗಿದ್ದಾರೆ. ನಗರದ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಮೇಕೆ, ಕುರಿಗಳ ವ್ಯಾಪಾರ ಶುಕ್ರವಾರ ಭರದಿಂದ ನಡೆಯಿತು.</p>.<p>ಮಾರುಕಟ್ಟೆಯಲ್ಲಿ ₹ 16,000ದಿಂದ ₹ 2 ಲಕ್ಷವರೆಗೂ ಕುರಿಗಳು ಮಾರಾಟವಾಗಿದ್ದು, ಜವಾರಿ ಕುರಿಗಳಿಗೆ ಬೇಡಿಕೆ ಹೆಚ್ಚು ಇತ್ತು.</p>.<p>ಅಂಗಡಿಗಳಲ್ಲೂ ಮಟನ್ಗೆ ಬೇಡಿಕೆ: ನಿತ್ಯ ಮಟನ್ ವ್ಯಾಪಾರಕ್ಕೆ 4ರಿಂದ 7 ಆಡುಗಳನ್ನು ತರುತ್ತಿದ್ದೆವು. ಬಕ್ರೀದ್ ದಿನ 16ರಿಂದ 18 ಆಡುಗಳ ಮಟನ್ ಮಾರಾಟವಾಗುತ್ತದೆ. ಬಕ್ರೀದ್ ಆಸುಪಾಸು ವ್ಯಾಪಾರಕ್ಕೆ ಆಡುಗಳು ಸಿಗುವುದಿಲ್ಲ. ತಿಂಗಳು ಮುಂಚಿತವಾಗಿ ಆಡು–ಕುರಿಗಳನ್ನು ಖರೀದಿಸಿ ತಂದು ಸಾಕಿ, ಮಟನ್ ಮಾರಾಟ ಮಾಡುತ್ತೇವೆ ಎಂದು ವ್ಯಾಪಾರಿಗಳು ತಿಳಿಸಿದರು.</p>.<p>ಚನ್ನಗಿರಿ, ಹೊಸದುರ್ಗ, ಕೋಲಾರ, ಚಿತ್ರದುರ್ಗ, ತರೀಕೆರೆ, ಚಿಕ್ಕಮಗಳೂರು, ಮಂಡ್ಯ, ತುಮಕೂರು, ಬಳ್ಳಾರಿ, ಕಲಬುರಗಿ, ಬೀದರ್ ಅಲ್ಲದೇ ಪಕ್ಕದ ಆಂಧ್ರಪ್ರದೇಶದಿಂದಲೂ ಕುರಿ, ಆಡು, ಮೇಕೆ ಮರಿಗಳನ್ನು ತರಲಾಗುವುದು. ಮಾಂಸದ ಬೆಲೆ ಏರಿಕೆ ಮಾಡಿಲ್ಲ. ಎಂದಿನ ದರವನ್ನೇ ನಿಗದಿ ಮಾಡಲಾಗಿದೆ. ಶನಿವಾರ ನಸುಕಿನ 4 ಗಂಟೆಯಿಂದಲೇ ವ್ಯಾಪಾರ ಪ್ರಾರಂಭಿಸಲಾಗುವುದು ಎಂದು ಮಾಂಸದ ವ್ಯಾಪಾರಿ ರಮೇಶ್ ತಿಳಿಸಿದರು.</p>.<p>‘ತಾಲ್ಲೂಕಿನಾದ್ಯಂತ 57 ಮಸೀದಿಗಳಿವೆ. ಬಕ್ರೀದ್ ದಿನ ವಿಶೇಷ ಪ್ರಾರ್ಥನೆ ನಡೆಯುತ್ತದೆ. ಬಕ್ರೀದ್ ತ್ಯಾಗದ ದ್ಯೋತಕ. ಪವಿತ್ರ ಹಜ್ ಯಾತ್ರೆಯ ಅಂತ್ಯವನ್ನು ಸೂಚಿಸುತ್ತದೆ. ಹಂಚಿ ತಿನ್ನುವ ಸಂಪ್ರದಾಯ ಬಕ್ರೀದ್ನ ಆಚರಣೆಯಲ್ಲಿದೆ ಎಂದು ಚೌಕ್ ಮಸೀದಿಯ ಮೌಲಾನ ಜಾವೀದ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ:</strong> ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಆಚರಣೆಗೆ ಮುಸ್ಲಿಮರು ಸಕಲ ಸಿದ್ಧತೆಗಳಲ್ಲಿ ತೊಡಗಿದ್ದಾರೆ. ನಗರದ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಮೇಕೆ, ಕುರಿಗಳ ವ್ಯಾಪಾರ ಶುಕ್ರವಾರ ಭರದಿಂದ ನಡೆಯಿತು.</p>.<p>ಮಾರುಕಟ್ಟೆಯಲ್ಲಿ ₹ 16,000ದಿಂದ ₹ 2 ಲಕ್ಷವರೆಗೂ ಕುರಿಗಳು ಮಾರಾಟವಾಗಿದ್ದು, ಜವಾರಿ ಕುರಿಗಳಿಗೆ ಬೇಡಿಕೆ ಹೆಚ್ಚು ಇತ್ತು.</p>.<p>ಅಂಗಡಿಗಳಲ್ಲೂ ಮಟನ್ಗೆ ಬೇಡಿಕೆ: ನಿತ್ಯ ಮಟನ್ ವ್ಯಾಪಾರಕ್ಕೆ 4ರಿಂದ 7 ಆಡುಗಳನ್ನು ತರುತ್ತಿದ್ದೆವು. ಬಕ್ರೀದ್ ದಿನ 16ರಿಂದ 18 ಆಡುಗಳ ಮಟನ್ ಮಾರಾಟವಾಗುತ್ತದೆ. ಬಕ್ರೀದ್ ಆಸುಪಾಸು ವ್ಯಾಪಾರಕ್ಕೆ ಆಡುಗಳು ಸಿಗುವುದಿಲ್ಲ. ತಿಂಗಳು ಮುಂಚಿತವಾಗಿ ಆಡು–ಕುರಿಗಳನ್ನು ಖರೀದಿಸಿ ತಂದು ಸಾಕಿ, ಮಟನ್ ಮಾರಾಟ ಮಾಡುತ್ತೇವೆ ಎಂದು ವ್ಯಾಪಾರಿಗಳು ತಿಳಿಸಿದರು.</p>.<p>ಚನ್ನಗಿರಿ, ಹೊಸದುರ್ಗ, ಕೋಲಾರ, ಚಿತ್ರದುರ್ಗ, ತರೀಕೆರೆ, ಚಿಕ್ಕಮಗಳೂರು, ಮಂಡ್ಯ, ತುಮಕೂರು, ಬಳ್ಳಾರಿ, ಕಲಬುರಗಿ, ಬೀದರ್ ಅಲ್ಲದೇ ಪಕ್ಕದ ಆಂಧ್ರಪ್ರದೇಶದಿಂದಲೂ ಕುರಿ, ಆಡು, ಮೇಕೆ ಮರಿಗಳನ್ನು ತರಲಾಗುವುದು. ಮಾಂಸದ ಬೆಲೆ ಏರಿಕೆ ಮಾಡಿಲ್ಲ. ಎಂದಿನ ದರವನ್ನೇ ನಿಗದಿ ಮಾಡಲಾಗಿದೆ. ಶನಿವಾರ ನಸುಕಿನ 4 ಗಂಟೆಯಿಂದಲೇ ವ್ಯಾಪಾರ ಪ್ರಾರಂಭಿಸಲಾಗುವುದು ಎಂದು ಮಾಂಸದ ವ್ಯಾಪಾರಿ ರಮೇಶ್ ತಿಳಿಸಿದರು.</p>.<p>‘ತಾಲ್ಲೂಕಿನಾದ್ಯಂತ 57 ಮಸೀದಿಗಳಿವೆ. ಬಕ್ರೀದ್ ದಿನ ವಿಶೇಷ ಪ್ರಾರ್ಥನೆ ನಡೆಯುತ್ತದೆ. ಬಕ್ರೀದ್ ತ್ಯಾಗದ ದ್ಯೋತಕ. ಪವಿತ್ರ ಹಜ್ ಯಾತ್ರೆಯ ಅಂತ್ಯವನ್ನು ಸೂಚಿಸುತ್ತದೆ. ಹಂಚಿ ತಿನ್ನುವ ಸಂಪ್ರದಾಯ ಬಕ್ರೀದ್ನ ಆಚರಣೆಯಲ್ಲಿದೆ ಎಂದು ಚೌಕ್ ಮಸೀದಿಯ ಮೌಲಾನ ಜಾವೀದ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>