ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಬಿಎಸ್‌ಪಿ ವಿರೋಧ

Last Updated 19 ಜೂನ್ 2020, 11:24 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜ್ಯಸರ್ಕಾರಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದು ರಾಜ್ಯದ ರೈತಸಮುದಾಯಕ್ಕೆ ಮಾರಕ ಎಂದು ಬಹುಜನ ಸಮಾಜಪಕ್ಷದ(ಬಿಎಸ್ಪಿ) ಜಿಲ್ಲಾಘಟಕದ ಅಧ್ಯಕ್ಷ ಸಿ.ಡಿ.ಶಿವಪ್ಪ ಆರೋಪಿಸಿದರು.

ರೈತರಲ್ಲದವರು ಭೂಮಿ ಖರೀದಿಸುವ ಕಾನೂನು ಮಾಡಿದರೆರೈತಸಂಕುಲನಾಶವಾಗುತ್ತದೆ.ಆಹಾರ ಭದ್ರತೆಗೆ ಅಪಾಯವಾಗುತ್ತದೆ. ಈ ತಿದ್ದುಪಡಿಗೆ ರಾಜ್ಯಪಾಲರು ಸಹಿ ಹಾಕಸೆವಾಪಸ್ ಕಳುಹಿಸಬೇಕು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿಆಗ್ರಹಿಸಿದರು.

ರೈತರಲ್ಲದವರು ಕೃಷಿ ಭೂಮಿಖರೀದಿಸಲುಈ ಹಿಂದೆ ಇದ್ದ ₨ 25 ಲಕ್ಷ ಆದಾಯ ಮಿತಿ ತೆಗೆದು ಹಾಕಿರುವುದು ಉಳುವವನೇ ಭೂ ಒಡೆಯ ಕಾಯ್ದೆಗೆವಿರುದ್ಧವಾಗಿದೆ.ಸಾಮಾಜಿಕ ಕಲ್ಪನೆಯಲ್ಲಿ ಉಳುವವನಿಗೆ ಭೂಮಿ ಕೊಡುವುದು, ಒಬ್ಬ ರೈತ ಜಮೀನು ಹೊಂದಲು ಮಿತಿ ಹಾಕುವು ನ್ಯಾಯ ಸಮಂಜಸ. ಹಣ ಉಳ್ಳವರು, ಬಹುತೇಕ ಕಪ್ಪು ಹಣವಿರುವ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು, ವ್ಯಾಪಾರಸ್ಥರು, ದೊಡ್ಡ ದೊಡ್ಡ ಉದ್ದಿಮೆದಾರರಿಗೆ ಈಕಾಯ್ದೆ ಅನುಕೂಲ ಮಾಡಿಕೊಟ್ಟಿದೆ. ಕೂಡಲೇ ತಿದ್ದುಪಡಿ ಕೈಬಿಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಚ್.ಎನ್.ಶ್ರೀನಿವಾಸ್, ಡಿ.ರವಿ, ಸಿ.ಕೃಷ್ಣಪ್ಪ, ಸಿದ್ದೇಶ್, ಮಾರುತಿ, ಲಕ್ಷ್ಮೀಪತಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT