<p>ಶಿವಮೊಗ್ಗ: ಅನ್ವಿತಾ ಆರ್ಟ್ಸ್ ಅರ್ಪಿಸುವ ‘ನಾ ನಿನ್ನ ಬಿಡಲಾರೆ’ ಚಿತ್ರ ತಂಡದಿಂದ ಸಿನಿ ಸಂಭ್ರಮ ಕಾರ್ಯಕ್ರಮ ಆ. 17ರಂದು ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ ಎಂದು ‘ನಾ ನಿನ್ನ ಬಿಡಲಾರೆ’ ಚಿತ್ರದ ನಿರ್ದೇಶಕ ಹೇಮಂತ್ ಹೆಗಡೆ ಹೇಳಿದರು. </p>.<p>ಸಿನಿ ಸಂಭ್ರಮ ಕಾರ್ಯಕ್ರಮದಲ್ಲಿ ನಟಿಯರಾದ ಭಾವನಾ, ಅಪೂರ್ವಾ, ನಟರಾದ ಕಿಶೋರ್, ಶರತ್ ಲೋಹಿತಾಶ್ವ ಭಾಗವಹಿಸಲಿದ್ದಾರೆ. ಅಂದಾಜು ₹ 30 ಕೋಟಿ ಬೆಲೆ ಬಾಳುವ ಶ್ವಾನ ಪ್ರದರ್ಶನ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು. </p>.<p>‘ಶ್ರೀಮತಿ ಶಿವಮೊಗ್ಗ’ ಸೌಂದರ್ಯ ಸ್ಪರ್ಧೆ, ಅಂತರ ಕಾಲೇಜು ಫ್ಯಾಶನ್ ಶೋ, ಡ್ರಾಮಾ ಜೂನಿಯರ್ಸ್ ಮತ್ತು ಸೀನಿಯರ್ಸ್ ಕಲಾವಿದರು ಭಾಗವಹಿಸುವರು. ವಾಸುಕಿ ವೈಭವ್ ಮತ್ತು ತಂಡದಿಂದ ಸಂಗೀತ ಸಂಜೆ ಹಾಗೂ ಸಿನಿಮಾ ಡ್ಯಾನ್ಸರ್ಗಳಿಂದ ನೃತ್ಯ ನಡೆಯಲಿದೆ’ ಎಂದು ಹೇಳಿದರು. </p>.<p>‘ನಾ ನಿನ್ನ ಬಿಡಲಾರೆ ಸಿನಿಮಾದ ಕಥೆ ಭಿನ್ನವಾಗಿದೆ. ಇದೊಂದು ಹಾರರ್ ಸಿನಿಮಾ ಆಗಿದ್ದು, ಚಿತ್ರದಲ್ಲಿ ದೊಡ್ಡ ಪ್ರಮಾಣದ ತಾರಾಗಣ ಇದೆ. ಶೀಘ್ರ ಹಲವು ಕಡೆಗಳನ್ನು ಸಿನಿಮಾ ಚಿತ್ರೀಕರಣ ಆರಂಭಿಸಲಾಗುವುದು’ ಎಂದು ತಿಳಿಸಿದರು. </p>.<p>‘ರಾಜ್ಯ ಸರ್ಕಾರ ಪೈರಸಿ ತಡೆಯಲು ಮುಂದಾಗಬೇಕಿದೆ. ಎಲ್ಲ ಗೊತ್ತಿದ್ದರೂ ಮೌನಕ್ಕೆ ಶರಣಾಗಿವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. </p>.<p>ವಕೀಲ ರೇವಣ ಸಿದ್ದಯ್ಯ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿವಮೊಗ್ಗ: ಅನ್ವಿತಾ ಆರ್ಟ್ಸ್ ಅರ್ಪಿಸುವ ‘ನಾ ನಿನ್ನ ಬಿಡಲಾರೆ’ ಚಿತ್ರ ತಂಡದಿಂದ ಸಿನಿ ಸಂಭ್ರಮ ಕಾರ್ಯಕ್ರಮ ಆ. 17ರಂದು ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ ಎಂದು ‘ನಾ ನಿನ್ನ ಬಿಡಲಾರೆ’ ಚಿತ್ರದ ನಿರ್ದೇಶಕ ಹೇಮಂತ್ ಹೆಗಡೆ ಹೇಳಿದರು. </p>.<p>ಸಿನಿ ಸಂಭ್ರಮ ಕಾರ್ಯಕ್ರಮದಲ್ಲಿ ನಟಿಯರಾದ ಭಾವನಾ, ಅಪೂರ್ವಾ, ನಟರಾದ ಕಿಶೋರ್, ಶರತ್ ಲೋಹಿತಾಶ್ವ ಭಾಗವಹಿಸಲಿದ್ದಾರೆ. ಅಂದಾಜು ₹ 30 ಕೋಟಿ ಬೆಲೆ ಬಾಳುವ ಶ್ವಾನ ಪ್ರದರ್ಶನ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು. </p>.<p>‘ಶ್ರೀಮತಿ ಶಿವಮೊಗ್ಗ’ ಸೌಂದರ್ಯ ಸ್ಪರ್ಧೆ, ಅಂತರ ಕಾಲೇಜು ಫ್ಯಾಶನ್ ಶೋ, ಡ್ರಾಮಾ ಜೂನಿಯರ್ಸ್ ಮತ್ತು ಸೀನಿಯರ್ಸ್ ಕಲಾವಿದರು ಭಾಗವಹಿಸುವರು. ವಾಸುಕಿ ವೈಭವ್ ಮತ್ತು ತಂಡದಿಂದ ಸಂಗೀತ ಸಂಜೆ ಹಾಗೂ ಸಿನಿಮಾ ಡ್ಯಾನ್ಸರ್ಗಳಿಂದ ನೃತ್ಯ ನಡೆಯಲಿದೆ’ ಎಂದು ಹೇಳಿದರು. </p>.<p>‘ನಾ ನಿನ್ನ ಬಿಡಲಾರೆ ಸಿನಿಮಾದ ಕಥೆ ಭಿನ್ನವಾಗಿದೆ. ಇದೊಂದು ಹಾರರ್ ಸಿನಿಮಾ ಆಗಿದ್ದು, ಚಿತ್ರದಲ್ಲಿ ದೊಡ್ಡ ಪ್ರಮಾಣದ ತಾರಾಗಣ ಇದೆ. ಶೀಘ್ರ ಹಲವು ಕಡೆಗಳನ್ನು ಸಿನಿಮಾ ಚಿತ್ರೀಕರಣ ಆರಂಭಿಸಲಾಗುವುದು’ ಎಂದು ತಿಳಿಸಿದರು. </p>.<p>‘ರಾಜ್ಯ ಸರ್ಕಾರ ಪೈರಸಿ ತಡೆಯಲು ಮುಂದಾಗಬೇಕಿದೆ. ಎಲ್ಲ ಗೊತ್ತಿದ್ದರೂ ಮೌನಕ್ಕೆ ಶರಣಾಗಿವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. </p>.<p>ವಕೀಲ ರೇವಣ ಸಿದ್ದಯ್ಯ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>