ಶಿವಮೊಗ್ಗ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗೆ (ಡಿಸಿಸಿ ಬ್ಯಾಂಕ್) ಸೋಮವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರು ಗೆಲುವು ಸಾಧಿಸಿದ್ದು, ಅವರ ಬಣ ಬಹುಮತ ಪಡೆದಿದೆ.
ಒಟ್ಟು 13 ನಿರ್ದೇಶಕ ಸ್ಥಾನಗಳಲ್ಲಿ 9 ಸ್ಥಾನ ಮಂಜುನಾಥ ಗೌಡರ ಬಣ (ಕಾಂಗ್ರೆಸ್, ಜೆಡಿಎಸ್ ಬೆಂಬಲಿತ), 4 ಸ್ಥಾನಗಳಲ್ಲಿ ಸಹಕಾರ ಭಾರತಿ (ಬಿಜೆಪಿ ಬೆಂಬಲಿತ) ಬಣದ ಸದಸ್ಯರು ಗೆಲುವು ಸಾಧಿಸಿದ್ದಾರೆ.
22 ವರ್ಷಗಳಿಂದ ಬ್ಯಾಂಕ್ ಅಡಳಿತದ ಚುಕ್ಕಾಣಿ ಹಿಡಿದಿರುವ ಅವರನ್ನು ಮಣಿಸಲು ಈ ಬಾರಿ ಸಹಕಾರ ಭಾರತಿ ಅಭ್ಯರ್ಥಿಗಳು ಸಾಕಷ್ಟು ಪೈಪೋಟಿ ನಡೆಸಿದ್ದರು. ಆದರೆ, ಅವರ ನಿರೀಕ್ಷೆ ವಿಫಲವಾಗಿದೆ. ಬ್ಯಾಂಕ್ನಲ್ಲಿ ಮತ್ತೆ ಮಂಜುನಾಥ ಗೌಡರ ಬಣದ ಆದಿಪತ್ಯ ಮುಂದುವರಿದಿದೆ.
ಆಯ್ಕೆಯಾದವರು:
ಭದ್ರಾವತಿ ತಾಲ್ಲೂಕು: ಎಲ್.ಷಡಾಕ್ಷರಿ, ಪಡೆದ ಮತಗಳು 79, (ಪ್ರತಿಸ್ಪರ್ಧಿ: ಎನ್.ಜಿ.ಮಹೇಂದ್ರ ಗೌಡ–6).
ತೀರ್ಥಹಳ್ಳಿ ತಾಲ್ಲೂಕು: ಬಸವಾನಿ ಜಯದೇವ್, ಪಡೆದ ಮತಗಳು 13, (ಪ್ರತಿಸ್ಪರ್ಧಿ ಎಚ್.ಆರ್.ನವೀನ್–9).
ಸೊರಬ ತಾಲ್ಲೂಕು: ಎನ್.ಎಚ್.ಶ್ರೀಪಾದ ರಾವ್ ನಿಸರಾಣಿ, ಪಡೆದ ಮತಗಳು 9, (ಪ್ರತಿಸ್ಪರ್ಧಿ: ಎಂ.ಆರ್.ಅಶೋಕ್–7).
ಸಾಗರ ತಾಲ್ಲೂಕು: ಎಚ್.ಕೆ.ವೆಂಕಟೇಶ್, ಪಡೆದ ಮತಗಳು 16, (ಪ್ರತಿಸ್ಪರ್ಧಿ: ಕೆ.ಕೆ.ರಾಜೇಶ್–3).
ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ, ಶಿವಮೊಗ್ಗ ಉಪ ವಿಭಾಗ: ಆರ್.ಎಂ.ಮಂಜುನಾಥ ಗೌಡ, ಪಡೆದ ಮತಗಳು 13, (ಪ್ರತಿಸ್ಪರ್ಧಿ: ಜಿ.ವಿರೂಪಾಕ್ಷಪ್ಪ–4).
ಸಾಗರ ಉಪ ವಿಭಾಗ: ಜಿ.ಎನ್.ಸುಧೀರ್, ಪಡೆದ ಮತಗಳು 14, (ಪ್ರತಿಸ್ಪರ್ಧಿ: ಕೆ.ಕೀರ್ತಿರಾಜ್–13).
ಪಟ್ಟಣ ಸಹಕಾರ ಬ್ಯಾಂಕ್ಗಳು, ಪತ್ತಿನ ಸಹಕಾರ ಸಂಘಗಳು:
ಸಾಗರ ಉಪ ವಿಭಾಗ: ಎಂ.ಬಿ.ಚನ್ನವೀರಪ್ಪ, ಪಡೆದ ಮತಗಳು 24, (ಪ್ರತಿಸ್ಪರ್ಧಿ: ಎಚ್.ಎಸ್.ರವೀಂದ್ರ–18).
ಇತರೆ ಸಹಕಾರ ಸಂಘಗಳು:
ಶಿವಮೊಗ್ಗ ಉಪ ವಿಭಾಗ: ಜಿ.ಪಿ.ಯೋಗೀಶ್, ಪಡೆದ ಮತಗಳು 32, (ಸಮೀಪದ ಸ್ಪರ್ಧಿ: ಕೆ.ಬಿ.ರವಿಶಂಕರ್–23).
ಸಾಗರ ಉಪ ವಿಭಾಗ: ಬಿ.ಡಿ.ಭೂಕಾಂತ್, ಪಡೆದ ಮತಗಳು 48, (ಪ್ರತಿಸ್ಪರ್ಧಿ: ಬಿ.ಎಂ.ಫಾಲಾಕ್ಷಪ್ಪ–36).
ಅವಿರೋಧ ಆಯ್ಕೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕೆ.ದುಗ್ಗಪ್ಪಗೌಡ (ಶಿವಮೊಗ್ಗ ತಾ), ಎಂ.ಎಂ.ಪರಮೇಶ್ (ಹೊಸನಗರ ತಾ), ಅಗಡಿ ಅಶೋಕ್ (ಶಿಕಾರಿಪುರ ತಾ), ಎಸ್.ಪಿ.ದಿನೇಶ್ (ಶಿವಮೊಗ್ಗ ಉಪ ವಿಭಾಗ).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.