<p><strong>ತೀರ್ಥಹಳ್ಳಿ: </strong>‘ಬೇರೆ ಯಾರದ್ದೋ ಕೂಸಿಗೆ ಅಪ್ಪ ಆಗುವ ಭಂಡತನ ನನಗಿಲ್ಲ. ನನಗೆ ಶಕ್ತಿ, ಸರ್ಕಾರ ಎರಡೂ ಇದೆ. ಅಭಿವೃದ್ಧಿಗೆ ಹಣ ನೀಡಿ ರಸ್ತೆ, ಸೇತುವೆ, ಸಮುದಾಯ ಭವನ ನಿರ್ಮಿಸಿದ್ದೇನೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು ನೀಡಿದರು.</p>.<p>ಪಟ್ಟಣದ ಕೋಳಿಕಾಲು ಗುಡ್ಡದ ಆರ್ಯ ಈಡಿಗರ ಸಮುದಾಯ ಭವನದಲ್ಲಿ ಕೊಳಚೆ ನಿರ್ಮೂಲನ ಮಂಡಳಿಯಿಂದ 34 ಫಲಾನುಭವಿಗಳಿಗೆ ಆಶ್ರಯ ಹಕ್ಕುಪತ್ರ ವಿತರಣೆ ಹಾಗೂ ಕುರುವಳ್ಳಿ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.</p>.<p>‘ಕೆಲವರಿಗೆ ರಾಜಕಾರಣ ಎಂದರೆ ಕೇವಲ ಬುದ್ಧಿವಂತಿಕೆ. ಆಡಂಬರ ಮಾತ್ರ. ನನಗೆ ಅಭಿವೃದ್ಧಿ. ಟೀಕೆಗೆ ಅಭಿವೃದ್ಧಿಯಿಂದ ಉತ್ತರ ನೀಡಿದ್ದೇನೆ’ ಎಂದು ತಮ್ಮನ್ನು ಟೀಕಿಸುವವರ ವಿರುದ್ಧ ವಾಗ್ದಾಳಿ ನಡೆಸಿದರು.</p>.<p>‘ಹಿಂದಿನ 10 ವರ್ಷಗಳಲ್ಲಿ ಆಗದಿರುವ ಕೆಲಸಗಳನ್ನು ನಾಲ್ಕೂವರೆ ವರ್ಷಗಳಲ್ಲಿ ಮಾಡಿ ತೋರಿಸಿದ್ದೇನೆ. 500 ಜನ ನಿರಾಶ್ರಿತರು, ವಸತಿರಹಿತರಿಗಾಗಿ ಪಟ್ಟಣ ವ್ಯಾಪ್ತಿಯಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣವಾಗುತ್ತಿದೆ. ಕೆಲವರು ವಿಠಲನಗರ ಸಮೀಪ ನಿರ್ಮಾಣವಾಗುತ್ತಿದ್ದ ನಿವೇಶನಕ್ಕೆ ಅಡ್ಡಿ ಮಾಡಿದ್ದರು. ಬಡವರ ಬದುಕಿನಲ್ಲೂ ಸ್ವಾರ್ಥ ಬೆರೆಸಿದರು’ ಎಂದರು.</p>.<p>‘ಪಟ್ಟಣ ಪಂಚಾಯಿತಿಯ ಅಭಿವೃದ್ಧಿಗಾಗಿ ₹ 11.5 ಕೋಟಿ ವೆಚ್ಚದಲ್ಲಿ 53 ಕಾಮಗಾರಿಗಳಿಗೆ ಅನುದಾನ ನೀಡಿದ್ದೇನೆ. ವಿರೋಧ<br />ಪಕ್ಷದವರು ಫೆಬ್ರುವರಿಯಲ್ಲಿ ದಾಖಲೆ ಬಿಡುಗಡೆ ಮಾಡುತ್ತೇವೆ ಎನ್ನುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಹಿಂದಿನ ಅವಧಿಯಲ್ಲಿ 5 ಕೊಳಚೆ ಪ್ರದೇಶಗಳನ್ನು ಗುರುತಿಸಿದ್ದು, ಅವುಗಳ ಅಭಿವೃದ್ಧಿಗೆ ಹಣ ಮಂಜೂರು ಮಾಡಿಸಿದ್ದೇನೆ’ ಎಂದರು.</p>.<p>ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್, ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಸದಸ್ಯರಾದ ಸಂದೇಶ ಜವಳಿ, ಬಿ.ಗಣಪತಿ, ನವೀನ್, ಮಂಜುಳಾ, ಜ್ಯೋತಿ, ನಮ್ರತ್, ರವೀಶ್, ದಯಾನಂದ, ಪ್ರಶಾಂತ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೀರ್ಥಹಳ್ಳಿ: </strong>‘ಬೇರೆ ಯಾರದ್ದೋ ಕೂಸಿಗೆ ಅಪ್ಪ ಆಗುವ ಭಂಡತನ ನನಗಿಲ್ಲ. ನನಗೆ ಶಕ್ತಿ, ಸರ್ಕಾರ ಎರಡೂ ಇದೆ. ಅಭಿವೃದ್ಧಿಗೆ ಹಣ ನೀಡಿ ರಸ್ತೆ, ಸೇತುವೆ, ಸಮುದಾಯ ಭವನ ನಿರ್ಮಿಸಿದ್ದೇನೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು ನೀಡಿದರು.</p>.<p>ಪಟ್ಟಣದ ಕೋಳಿಕಾಲು ಗುಡ್ಡದ ಆರ್ಯ ಈಡಿಗರ ಸಮುದಾಯ ಭವನದಲ್ಲಿ ಕೊಳಚೆ ನಿರ್ಮೂಲನ ಮಂಡಳಿಯಿಂದ 34 ಫಲಾನುಭವಿಗಳಿಗೆ ಆಶ್ರಯ ಹಕ್ಕುಪತ್ರ ವಿತರಣೆ ಹಾಗೂ ಕುರುವಳ್ಳಿ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.</p>.<p>‘ಕೆಲವರಿಗೆ ರಾಜಕಾರಣ ಎಂದರೆ ಕೇವಲ ಬುದ್ಧಿವಂತಿಕೆ. ಆಡಂಬರ ಮಾತ್ರ. ನನಗೆ ಅಭಿವೃದ್ಧಿ. ಟೀಕೆಗೆ ಅಭಿವೃದ್ಧಿಯಿಂದ ಉತ್ತರ ನೀಡಿದ್ದೇನೆ’ ಎಂದು ತಮ್ಮನ್ನು ಟೀಕಿಸುವವರ ವಿರುದ್ಧ ವಾಗ್ದಾಳಿ ನಡೆಸಿದರು.</p>.<p>‘ಹಿಂದಿನ 10 ವರ್ಷಗಳಲ್ಲಿ ಆಗದಿರುವ ಕೆಲಸಗಳನ್ನು ನಾಲ್ಕೂವರೆ ವರ್ಷಗಳಲ್ಲಿ ಮಾಡಿ ತೋರಿಸಿದ್ದೇನೆ. 500 ಜನ ನಿರಾಶ್ರಿತರು, ವಸತಿರಹಿತರಿಗಾಗಿ ಪಟ್ಟಣ ವ್ಯಾಪ್ತಿಯಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣವಾಗುತ್ತಿದೆ. ಕೆಲವರು ವಿಠಲನಗರ ಸಮೀಪ ನಿರ್ಮಾಣವಾಗುತ್ತಿದ್ದ ನಿವೇಶನಕ್ಕೆ ಅಡ್ಡಿ ಮಾಡಿದ್ದರು. ಬಡವರ ಬದುಕಿನಲ್ಲೂ ಸ್ವಾರ್ಥ ಬೆರೆಸಿದರು’ ಎಂದರು.</p>.<p>‘ಪಟ್ಟಣ ಪಂಚಾಯಿತಿಯ ಅಭಿವೃದ್ಧಿಗಾಗಿ ₹ 11.5 ಕೋಟಿ ವೆಚ್ಚದಲ್ಲಿ 53 ಕಾಮಗಾರಿಗಳಿಗೆ ಅನುದಾನ ನೀಡಿದ್ದೇನೆ. ವಿರೋಧ<br />ಪಕ್ಷದವರು ಫೆಬ್ರುವರಿಯಲ್ಲಿ ದಾಖಲೆ ಬಿಡುಗಡೆ ಮಾಡುತ್ತೇವೆ ಎನ್ನುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಹಿಂದಿನ ಅವಧಿಯಲ್ಲಿ 5 ಕೊಳಚೆ ಪ್ರದೇಶಗಳನ್ನು ಗುರುತಿಸಿದ್ದು, ಅವುಗಳ ಅಭಿವೃದ್ಧಿಗೆ ಹಣ ಮಂಜೂರು ಮಾಡಿಸಿದ್ದೇನೆ’ ಎಂದರು.</p>.<p>ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್, ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಸದಸ್ಯರಾದ ಸಂದೇಶ ಜವಳಿ, ಬಿ.ಗಣಪತಿ, ನವೀನ್, ಮಂಜುಳಾ, ಜ್ಯೋತಿ, ನಮ್ರತ್, ರವೀಶ್, ದಯಾನಂದ, ಪ್ರಶಾಂತ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>