<p><strong>ಸಾಗರ</strong> (ಶಿವಮೊಗ್ಗ): ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ಪುರುಷರ ಬದಲು ಕುಟುಂಬದ ಮಹಿಳೆಯರೇ ನಡೆಸಿದ ಅಪರೂಪದ ಘಟನೆ ಸಾಗರ ನಗರದಲ್ಲಿ ಈಚೆಗೆ ಜರುಗಿದೆ.</p>.<p>ಇಲ್ಲಿನ ಸೊರಬ ರಸ್ತೆಯ ಸಿದ್ದೇಶ್ವರ ಶಾಲೆ ಹಿಂಭಾಗದ ನಿವಾಸಿ ಗೋಪಾಲ ರಾಮಚಂದ್ರ ಭಟ್ಟರು ಕ್ಯಾನ್ಸರ್ನಿಂದ ಮೃತಪಟ್ಟಿದ್ದರು. 78 ವರ್ಷದ ಅವರು ಈ ಹಿಂದೆ ಸೊರಬ ತಾಲ್ಲೂಕಿನ ಉಳವಿಯ ಮಹಾಗಣಪತಿ ದೇವಸ್ಥಾನದ ಅರ್ಚಕರಾಗಿದ್ದರು.</p>.<p>ಇರುವಷ್ಟು ಕಾಲ ಅವರನ್ನು ಆರೈಕೆ ಮಾಡಿದ್ದ ಕುಟುಂಬದ ಹೆಣ್ಣುಮಕ್ಕಳು ಅವರ ಅಂತ್ಯಸಂಸ್ಕಾರ ನಡೆಸಲೂ ನಿರ್ಧರಿಸಿದ್ದರು. ಚಟ್ಟಕ್ಕೆ ಹೆಗಲು ಕೊಡುವುದರಿಂದ ಹಿಡಿದು ಅಂತ್ಯಕ್ರಿಯೆ ನಡೆದ ಮಾರಿಕಾಂಬಾ ರುದ್ರಭೂಮಿಯಲ್ಲಿ ಶವ ಇಳಿಸುವ ಕೆಲಸವನ್ನೂ ಅವರೇ ನಡೆಸಿದ್ದಾರೆ.</p>.<p>‘ಶಾಸ್ತ್ರ, ಆಚರಣೆಗಳನ್ನು ಯಾರು ಮಾಡಬೇಕು ಎಂಬುದು ಮುಖ್ಯವಲ್ಲ. ಕೋವಿಡ್ ನಮಗೆ ಮರೆಯಲಾಗದ ಪಾಠ ಕಲಿಸಿದೆ. ಗಂಡು, ಹೆಣ್ಣು ಎಂಬುದಕ್ಕಿಂತಲೂ ಮುಖ್ಯವಾಗಿ ಸ್ಪಂದಿಸುವ ಗುಣ ಇರಬೇಕು’ ಎಂದು ಗೋಪಾಲ ಭಟ್ಟರ ಸಂಬಂಧಿ ರಾಜೇಶ್ವರಿ ಭಟ್ ತಿಳಿಸಿದರು. </p>.<p>ಗೂಳಿಕೈ ವಿಶ್ವನಾಥ ಭಟ್ಟರು ರಚಿಸಿರುವ ‘ಸದ್ಗತಿ’ ಕೃತಿಯಲ್ಲಿ ಹೆಣ್ಣುಮಕ್ಕಳಿಗೂ ತಮ್ಮ ತಂದೆ-ತಾಯಿಯ ಅಂತ್ಯಸಂಸ್ಕಾರ ನಡೆಸುವ ಹಕ್ಕಿದೆ ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ. ಅದೇ ಈ ಮಹಿಳೆಯರಿಗೆ ಪ್ರೇರಣೆ ನೀಡಿದೆ.</p>.<p>ಗೋಪಾಲ ರಾಮಚಂದ್ರ ಭಟ್ಟರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. </p>.<div><blockquote>ಪುರುಷರೇ ಅಂತ್ಯಸಂಸ್ಕಾರದ ವಿಧಿ–ವಿಧಾನ ನಡೆಸಬೇಕು ಎಂಬುದು ಈಗ ಪ್ರಸ್ತುತತೆ ಕಳೆದುಕೊಂಡಿದೆ. ಅವಿಭಕ್ತ ಕುಟುಂಬಗಳೇ ಇಲ್ಲದ ಈ ಕಾಲದಲ್ಲಿ ಹೆಣ್ಣು ಮಕ್ಕಳು ಹಿರಿಯರ ಅಂತ್ಯಸಂಸ್ಕಾರ ಮಾಡಲು ಮುಂದಾಗುತ್ತಿರುವುದು ಆರೋಗ್ಯಕರ ಬೆಳವಣಿಗೆ </blockquote><span class="attribution">ಮೈತ್ರಿ ಪಾಟೀಲ್ ಸಾಗರ ನಗರಸಭೆ ಅಧ್ಯಕ್ಷೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ</strong> (ಶಿವಮೊಗ್ಗ): ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ಪುರುಷರ ಬದಲು ಕುಟುಂಬದ ಮಹಿಳೆಯರೇ ನಡೆಸಿದ ಅಪರೂಪದ ಘಟನೆ ಸಾಗರ ನಗರದಲ್ಲಿ ಈಚೆಗೆ ಜರುಗಿದೆ.</p>.<p>ಇಲ್ಲಿನ ಸೊರಬ ರಸ್ತೆಯ ಸಿದ್ದೇಶ್ವರ ಶಾಲೆ ಹಿಂಭಾಗದ ನಿವಾಸಿ ಗೋಪಾಲ ರಾಮಚಂದ್ರ ಭಟ್ಟರು ಕ್ಯಾನ್ಸರ್ನಿಂದ ಮೃತಪಟ್ಟಿದ್ದರು. 78 ವರ್ಷದ ಅವರು ಈ ಹಿಂದೆ ಸೊರಬ ತಾಲ್ಲೂಕಿನ ಉಳವಿಯ ಮಹಾಗಣಪತಿ ದೇವಸ್ಥಾನದ ಅರ್ಚಕರಾಗಿದ್ದರು.</p>.<p>ಇರುವಷ್ಟು ಕಾಲ ಅವರನ್ನು ಆರೈಕೆ ಮಾಡಿದ್ದ ಕುಟುಂಬದ ಹೆಣ್ಣುಮಕ್ಕಳು ಅವರ ಅಂತ್ಯಸಂಸ್ಕಾರ ನಡೆಸಲೂ ನಿರ್ಧರಿಸಿದ್ದರು. ಚಟ್ಟಕ್ಕೆ ಹೆಗಲು ಕೊಡುವುದರಿಂದ ಹಿಡಿದು ಅಂತ್ಯಕ್ರಿಯೆ ನಡೆದ ಮಾರಿಕಾಂಬಾ ರುದ್ರಭೂಮಿಯಲ್ಲಿ ಶವ ಇಳಿಸುವ ಕೆಲಸವನ್ನೂ ಅವರೇ ನಡೆಸಿದ್ದಾರೆ.</p>.<p>‘ಶಾಸ್ತ್ರ, ಆಚರಣೆಗಳನ್ನು ಯಾರು ಮಾಡಬೇಕು ಎಂಬುದು ಮುಖ್ಯವಲ್ಲ. ಕೋವಿಡ್ ನಮಗೆ ಮರೆಯಲಾಗದ ಪಾಠ ಕಲಿಸಿದೆ. ಗಂಡು, ಹೆಣ್ಣು ಎಂಬುದಕ್ಕಿಂತಲೂ ಮುಖ್ಯವಾಗಿ ಸ್ಪಂದಿಸುವ ಗುಣ ಇರಬೇಕು’ ಎಂದು ಗೋಪಾಲ ಭಟ್ಟರ ಸಂಬಂಧಿ ರಾಜೇಶ್ವರಿ ಭಟ್ ತಿಳಿಸಿದರು. </p>.<p>ಗೂಳಿಕೈ ವಿಶ್ವನಾಥ ಭಟ್ಟರು ರಚಿಸಿರುವ ‘ಸದ್ಗತಿ’ ಕೃತಿಯಲ್ಲಿ ಹೆಣ್ಣುಮಕ್ಕಳಿಗೂ ತಮ್ಮ ತಂದೆ-ತಾಯಿಯ ಅಂತ್ಯಸಂಸ್ಕಾರ ನಡೆಸುವ ಹಕ್ಕಿದೆ ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ. ಅದೇ ಈ ಮಹಿಳೆಯರಿಗೆ ಪ್ರೇರಣೆ ನೀಡಿದೆ.</p>.<p>ಗೋಪಾಲ ರಾಮಚಂದ್ರ ಭಟ್ಟರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. </p>.<div><blockquote>ಪುರುಷರೇ ಅಂತ್ಯಸಂಸ್ಕಾರದ ವಿಧಿ–ವಿಧಾನ ನಡೆಸಬೇಕು ಎಂಬುದು ಈಗ ಪ್ರಸ್ತುತತೆ ಕಳೆದುಕೊಂಡಿದೆ. ಅವಿಭಕ್ತ ಕುಟುಂಬಗಳೇ ಇಲ್ಲದ ಈ ಕಾಲದಲ್ಲಿ ಹೆಣ್ಣು ಮಕ್ಕಳು ಹಿರಿಯರ ಅಂತ್ಯಸಂಸ್ಕಾರ ಮಾಡಲು ಮುಂದಾಗುತ್ತಿರುವುದು ಆರೋಗ್ಯಕರ ಬೆಳವಣಿಗೆ </blockquote><span class="attribution">ಮೈತ್ರಿ ಪಾಟೀಲ್ ಸಾಗರ ನಗರಸಭೆ ಅಧ್ಯಕ್ಷೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>