ಕರ್ನಾಟಕದ ಮಾಜಿ ನಕ್ಸಲರ ಪೈಕಿ ಕೆಲವರು ಸಂಘಟನೆಯನ್ನು ಕಟ್ಟಿಕೊಂಡಿದ್ದು, ಅವರಿಗೂ ಲಂಕೇಶ್ ಮೀಡಿಯಾಗಾಗಲೀ ಅಥವಾ ಗೌರಿಯವರಿಗಾಗಲೀ ಯಾವ ಹಕ್ಕುಬಾಧ್ಯತೆ ಸಂಬಂಧ ಇರುವುದಿಲ್ಲ. ಆದರೂ, ಗೌರಿ ಹತ್ಯೆಯ ಬಳಿಕ ಅವರ ಪತ್ರಿಕೋದ್ಯಮದ ವಾರಸುದಾರರು ಎಂಬಂತೆ ಸಾರ್ವಜನಿಕರನ್ನು ನಂಬಿಸುವ ಸಲುವಾಗಿ ‘ನ್ಯಾಯಪಥ’ ಎಂಬ ಪತ್ರಿಕೆಗೆ ಗೌರಿ ಲಂಕೇಶ್ ಫೋಟೊ ಹಾಕಿಕೊಂಡು ಪತ್ರಿಕಾ ನಿಯಮವನ್ನು ಹಾಗೂ ಘನತೆಯನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.