<p><strong>ಸಾಗರ: </strong>ಶಾಂತವೇರಿ ಗೋಪಾಲಗೌಡರು ಹಾಗೂ ಇತರ ಸಮಾಜವಾದಿಗಳಿಂದ ತಾಲ್ಲೂಕಿನಲ್ಲಿ ನಡೆದ ಕಾಗೋಡು ಚಳವಳಿಗೆ ತಾತ್ವಿಕ ನೆಲೆಗಟ್ಟು ಒದಗಿತ್ತು ಎಂಬುದನ್ನು ಮರೆಯಲು ಸಾಧ್ಯವಿಲ್ಲ ಎಂದು ಹಿರಿಯ ಮುಖಂಡ ಬಿ.ಆರ್. ಜಯಂತ್ ಹೇಳಿದರು. </p>.<p>ತಾಲ್ಲೂಕಿನ ತುಮರಿ ಗ್ರಾಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಅಭಿವ್ಯಕ್ತಿ ಬಳಗ ಶನಿವಾರ ಏರ್ಪಡಿಸಿದ್ದ ಹ.ಮ. ಭಟ್ಟ ನೆನಪಿನ ಹಬ್ಬದಲ್ಲಿ ಶಾಂತವೇರಿ ಗೋಪಾಲಗೌಡರ ಶತಮಾನೋತ್ಸವ ವಿಚಾರಸಂಕಿರಣದಲ್ಲಿ ‘ಶಾಂತವೇರಿ ಗೋಪಾಲಗೌಡ: ಸಮಗ್ರ ವ್ಯಕ್ತಿಚಿತ್ರ’ ಕುರಿತು ಅವರು ಮಾತನಾಡಿದರು.</p>.<p>ಗೋಪಾಲಗೌಡರು ಹಾಗೂ ಇತರ ಸಮಾಜವಾದಿಗಳು ಕಾಗೋಡು ಸತ್ಯಾಗ್ರಹಕ್ಕೆ ಪ್ರವೇಶಿಸಿದ ಕಾರಣಕ್ಕೆ ಆ ಚಳವಳಿಗೆ ರಾಷ್ಟ್ರವ್ಯಾಪಿ ಮನ್ನಣೆ ದೊರೆಯಿತು. ಲೋಹಿಯಾರಂತಹ ಹಿರಿಯ ನಾಯಕರು ಇಲ್ಲಿಗೆ ಬಂದು ಚಳವಳಿಯಲ್ಲಿ ಭಾಗವಹಿಸಲು ಸಾಧ್ಯವಾಗಿದ್ದು ಕೂಡ ಗೋಪಾಲಗೌಡರಿಂದ ಎಂದರು. </p>.<p>ಗೋಪಾಲಗೌಡರಿಗೆ ಜನರ ಪ್ರೀತಿ, ಸಮಾನತೆಯ ಸಿದ್ಧಾಂತವೇ ರಾಜಕಾರಣದಲ್ಲಿ ‘ಬಂಡವಾಳ’ ಆಗಿತ್ತು. ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಜನರು ಹಣದ ಜೊತೆಗೆ ಮತವನ್ನು ನೀಡಿದ್ದರು. ಅಂತಹ ರಾಜಕಾರಣವನ್ನು ಇಂದಿನ ಸನ್ನಿವೇಶದಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.</p>.<p>ತಮ್ಮ ವೈಯುಕ್ತಿಕ ಬದುಕನ್ನು ಕಠಿಣ ಪರಿಸ್ಥಿತಿಗೆ ಒಡ್ಡಿಕೊಂಡು ಜನಪರವಾದ ರಾಜಕಾರಣ ಮಾಡಿದ ಹೆಗ್ಗಳಿಕೆ ಗೋಪಾಲಗೌಡರದ್ದು. ಸಾಹಿತ್ಯ, ಸಂಸ್ಕೃತಿ, ಕಲೆಗಳ ಒಡನಾಟ ಅವರಿಗಿದ್ದ ಕಾರಣ ಅಂತಃಕರಣದ ಸಂವೇದನೆ ಜಡ್ಡಾಗದ ಸೃಜನಶೀಲ ವ್ಯಕ್ತಿತ್ವವನ್ನು ಅವರು ರೂಪಿಸಿಕೊಂಡಿದ್ದರು ಎಂದು ವಿಶ್ಲೇಷಿಸಿದರು.</p>.<p>‘ಗೋಪಾಲಗೌಡರು ಪ್ರತಿನಿಧಿಸುತ್ತಿದ್ದ ಮೌಲ್ಯಗಳಿಗೆ ತದ್ವಿರುದ್ದವಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಗಾಂಧಿವಾದದ ಸ್ಥಾನದಲ್ಲಿ ಕೋಮುವಾದ ರಾರಾಜಿಸುತ್ತಿದೆ. ಸಾಂವಿಧಾನಿಕ ಮೌಲ್ಯಗಳಿಗೆ ಅಪಚಾರ ಎಸಗುತ್ತ ವ್ಯಾಪಕ ಭ್ರಷ್ಟಾಚಾರ ಮಾಡುವ ರಾಜಕಾರಣವೇ ಮುನ್ನಲೆಗೆ ಬಂದಿದೆ. ಗೋಪಾಲಗೌಡರು ಪ್ರತಿಪಾದಿಸಿದ ವಿಚಾರದ ಕಿಡಿಯನ್ನು ಸಮಾಜದಲ್ಲಿ ಜಾಗೃತಗೊಳಿಸುವ ತುರ್ತು ಎದುರಾಗಿದೆ’ ಎಂದರು.</p>.<p>‘ನನ್ನ ಗ್ರಹಿಕೆಯಲ್ಲಿ ಗೋಪಾಲಗೌಡ’ ಕುರಿತು ಮಾತನಾಡಿದ ಮಾಜಿ ಶಾಸಕ ಮಹಿಮ ಪಟೇಲ್, ‘ಸಮಾನತೆಯೇ ಸಮಾಜವಾದದ ತಿರುಳು ಎಂಬುದರಲ್ಲಿ ಗೋಪಾಲಗೌಡರಿಗೆ ಗಾಢವಾದ ನಂಬಿಕೆ ಇತ್ತು. ಈ ಕಾರಣಕ್ಕಾಗಿಯೇ ಗೇಣಿದಾರರಿಗೆ ಭೂಮಿಯ ಹಕ್ಕು ದೊರಕಬೇಕು ಎಂದು ಅವರು ಬಲವಾಗಿ ಪ್ರತಿಪಾದಿಸಿದ್ದರು. 50-70ರ ದಶಕದ ಕರ್ನಾಟಕದ ಬಹುತೇಕ ರಾಜಕಾರಣಿಗಳ ವ್ಯಕ್ತಿತ್ವದ ಮೇಲೆ ಗೋಪಾಲಗೌಡರ ಪ್ರಭಾವ ಇತ್ತು’ ಎಂದು ಹೇಳಿದರು.</p>.<p>‘ಸಕ್ರಿಯ ರಾಜಕಾರಣದಲ್ಲಿದ್ದು ಗೋಪಾಲಗೌಡರು ಶಾಂತ ಮನಸ್ಥಿತಿಯನ್ನು ಹೊಂದಿದ್ದರು. ಆದರೆ ಇಂದಿನ ಬಹುತೇಕ ರಾಜಕಾರಣಿಗಳಿಗೆ ಅಂತಹ ಮನಸ್ಥಿತಿಯೇ ಇಲ್ಲವಾಗಿದೆ. ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ, ಆಡಳಿತ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತಂದಾಗ ಮಾತ್ರ ಗೋಪಾಲಗೌಡರ ಆಶಯಗಳನ್ನು ಸಾಕಾರಗೊಳಿಸಬಹುದು’ ಎಂದರು. </p>.<p>ಮಮತಾ ಅರಸಿಕೆರೆ ಗೋಷ್ಠಿಯನ್ನು ನಿರ್ವಹಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ: </strong>ಶಾಂತವೇರಿ ಗೋಪಾಲಗೌಡರು ಹಾಗೂ ಇತರ ಸಮಾಜವಾದಿಗಳಿಂದ ತಾಲ್ಲೂಕಿನಲ್ಲಿ ನಡೆದ ಕಾಗೋಡು ಚಳವಳಿಗೆ ತಾತ್ವಿಕ ನೆಲೆಗಟ್ಟು ಒದಗಿತ್ತು ಎಂಬುದನ್ನು ಮರೆಯಲು ಸಾಧ್ಯವಿಲ್ಲ ಎಂದು ಹಿರಿಯ ಮುಖಂಡ ಬಿ.ಆರ್. ಜಯಂತ್ ಹೇಳಿದರು. </p>.<p>ತಾಲ್ಲೂಕಿನ ತುಮರಿ ಗ್ರಾಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಅಭಿವ್ಯಕ್ತಿ ಬಳಗ ಶನಿವಾರ ಏರ್ಪಡಿಸಿದ್ದ ಹ.ಮ. ಭಟ್ಟ ನೆನಪಿನ ಹಬ್ಬದಲ್ಲಿ ಶಾಂತವೇರಿ ಗೋಪಾಲಗೌಡರ ಶತಮಾನೋತ್ಸವ ವಿಚಾರಸಂಕಿರಣದಲ್ಲಿ ‘ಶಾಂತವೇರಿ ಗೋಪಾಲಗೌಡ: ಸಮಗ್ರ ವ್ಯಕ್ತಿಚಿತ್ರ’ ಕುರಿತು ಅವರು ಮಾತನಾಡಿದರು.</p>.<p>ಗೋಪಾಲಗೌಡರು ಹಾಗೂ ಇತರ ಸಮಾಜವಾದಿಗಳು ಕಾಗೋಡು ಸತ್ಯಾಗ್ರಹಕ್ಕೆ ಪ್ರವೇಶಿಸಿದ ಕಾರಣಕ್ಕೆ ಆ ಚಳವಳಿಗೆ ರಾಷ್ಟ್ರವ್ಯಾಪಿ ಮನ್ನಣೆ ದೊರೆಯಿತು. ಲೋಹಿಯಾರಂತಹ ಹಿರಿಯ ನಾಯಕರು ಇಲ್ಲಿಗೆ ಬಂದು ಚಳವಳಿಯಲ್ಲಿ ಭಾಗವಹಿಸಲು ಸಾಧ್ಯವಾಗಿದ್ದು ಕೂಡ ಗೋಪಾಲಗೌಡರಿಂದ ಎಂದರು. </p>.<p>ಗೋಪಾಲಗೌಡರಿಗೆ ಜನರ ಪ್ರೀತಿ, ಸಮಾನತೆಯ ಸಿದ್ಧಾಂತವೇ ರಾಜಕಾರಣದಲ್ಲಿ ‘ಬಂಡವಾಳ’ ಆಗಿತ್ತು. ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಜನರು ಹಣದ ಜೊತೆಗೆ ಮತವನ್ನು ನೀಡಿದ್ದರು. ಅಂತಹ ರಾಜಕಾರಣವನ್ನು ಇಂದಿನ ಸನ್ನಿವೇಶದಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.</p>.<p>ತಮ್ಮ ವೈಯುಕ್ತಿಕ ಬದುಕನ್ನು ಕಠಿಣ ಪರಿಸ್ಥಿತಿಗೆ ಒಡ್ಡಿಕೊಂಡು ಜನಪರವಾದ ರಾಜಕಾರಣ ಮಾಡಿದ ಹೆಗ್ಗಳಿಕೆ ಗೋಪಾಲಗೌಡರದ್ದು. ಸಾಹಿತ್ಯ, ಸಂಸ್ಕೃತಿ, ಕಲೆಗಳ ಒಡನಾಟ ಅವರಿಗಿದ್ದ ಕಾರಣ ಅಂತಃಕರಣದ ಸಂವೇದನೆ ಜಡ್ಡಾಗದ ಸೃಜನಶೀಲ ವ್ಯಕ್ತಿತ್ವವನ್ನು ಅವರು ರೂಪಿಸಿಕೊಂಡಿದ್ದರು ಎಂದು ವಿಶ್ಲೇಷಿಸಿದರು.</p>.<p>‘ಗೋಪಾಲಗೌಡರು ಪ್ರತಿನಿಧಿಸುತ್ತಿದ್ದ ಮೌಲ್ಯಗಳಿಗೆ ತದ್ವಿರುದ್ದವಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಗಾಂಧಿವಾದದ ಸ್ಥಾನದಲ್ಲಿ ಕೋಮುವಾದ ರಾರಾಜಿಸುತ್ತಿದೆ. ಸಾಂವಿಧಾನಿಕ ಮೌಲ್ಯಗಳಿಗೆ ಅಪಚಾರ ಎಸಗುತ್ತ ವ್ಯಾಪಕ ಭ್ರಷ್ಟಾಚಾರ ಮಾಡುವ ರಾಜಕಾರಣವೇ ಮುನ್ನಲೆಗೆ ಬಂದಿದೆ. ಗೋಪಾಲಗೌಡರು ಪ್ರತಿಪಾದಿಸಿದ ವಿಚಾರದ ಕಿಡಿಯನ್ನು ಸಮಾಜದಲ್ಲಿ ಜಾಗೃತಗೊಳಿಸುವ ತುರ್ತು ಎದುರಾಗಿದೆ’ ಎಂದರು.</p>.<p>‘ನನ್ನ ಗ್ರಹಿಕೆಯಲ್ಲಿ ಗೋಪಾಲಗೌಡ’ ಕುರಿತು ಮಾತನಾಡಿದ ಮಾಜಿ ಶಾಸಕ ಮಹಿಮ ಪಟೇಲ್, ‘ಸಮಾನತೆಯೇ ಸಮಾಜವಾದದ ತಿರುಳು ಎಂಬುದರಲ್ಲಿ ಗೋಪಾಲಗೌಡರಿಗೆ ಗಾಢವಾದ ನಂಬಿಕೆ ಇತ್ತು. ಈ ಕಾರಣಕ್ಕಾಗಿಯೇ ಗೇಣಿದಾರರಿಗೆ ಭೂಮಿಯ ಹಕ್ಕು ದೊರಕಬೇಕು ಎಂದು ಅವರು ಬಲವಾಗಿ ಪ್ರತಿಪಾದಿಸಿದ್ದರು. 50-70ರ ದಶಕದ ಕರ್ನಾಟಕದ ಬಹುತೇಕ ರಾಜಕಾರಣಿಗಳ ವ್ಯಕ್ತಿತ್ವದ ಮೇಲೆ ಗೋಪಾಲಗೌಡರ ಪ್ರಭಾವ ಇತ್ತು’ ಎಂದು ಹೇಳಿದರು.</p>.<p>‘ಸಕ್ರಿಯ ರಾಜಕಾರಣದಲ್ಲಿದ್ದು ಗೋಪಾಲಗೌಡರು ಶಾಂತ ಮನಸ್ಥಿತಿಯನ್ನು ಹೊಂದಿದ್ದರು. ಆದರೆ ಇಂದಿನ ಬಹುತೇಕ ರಾಜಕಾರಣಿಗಳಿಗೆ ಅಂತಹ ಮನಸ್ಥಿತಿಯೇ ಇಲ್ಲವಾಗಿದೆ. ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ, ಆಡಳಿತ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತಂದಾಗ ಮಾತ್ರ ಗೋಪಾಲಗೌಡರ ಆಶಯಗಳನ್ನು ಸಾಕಾರಗೊಳಿಸಬಹುದು’ ಎಂದರು. </p>.<p>ಮಮತಾ ಅರಸಿಕೆರೆ ಗೋಷ್ಠಿಯನ್ನು ನಿರ್ವಹಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>