ಸುಬ್ರಹ್ಮಣ್ಯ ರಾವ್ ಎರಡು ಕಡೆ ಸ್ಪರ್ಧೆ ಮಾಡಿರುವ ವಿಚಾರವಾಗಿ ಗ್ರಾಮದಲ್ಲಿ ಅಪಸ್ವರ ಕೇಳಿಬಂದಿದೆ. ಹೆಚ್ಚುವರಿಯಾಗಿ ಸ್ಪರ್ಧಿಸುವುದಕ್ಕಿಂತ ಇತರೆಯವರಿಗೆ ಅವಕಾಶ ಮಾಡಿಕೊಡಬಹುದಿತ್ತು. ಎರಡೂ ಕಡೆ ಗೆದ್ದು ಬಂದಲ್ಲಿ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮತ್ತೆ ಚುನಾವಣೆ ನಡೆದು ನೂತನ ಸದಸ್ಯರ ಆಯ್ಕೆಯಾಗಬೇಕು. ಇದರಿಂದ ಅನಗತ್ಯ ವೆಚ್ಚವಾಗಲಿದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.