<p><strong>ಇನಾಯತ್ ಉಲ್ಲಾ ಟಿ.</strong></p>.<p>ಹರಿಹರ: ಇಲ್ಲಿಗೆ ಸಮೀಪದ ಕೊಡಿಯಾಲ ಹೊಸಪೇಟೆ ನದಿ ದಡದಲ್ಲಿ ಚರಂಡಿಯಿಂದ ಹರಿಯುವ ತ್ಯಾಜ್ಯ ನೀರು ಶತಮಾನದ ಸೇತುವೆಯ ಭದ್ರತೆಗೆ ಅಪಾಯ ಉಂಟು ಮಾಡಿದೆ. ಅಪೂರ್ಣ ಕಾಮಗಾರಿಯಿಂದಾಗಿ ಈ ಸ್ಥಿತಿ ಎದುರಾಗಿದೆ. </p>.<p>ಹರಿಹರ ನಗರ ಹಾಗೂ ಕೊಡಿಯಾಲ ಹೊಸಪೇಟೆ ನಡುವೆ ತುಂಗಭದ್ರಾ ನದಿಗೆ ಅಡ್ಡಲಾಗಿ ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣವಾದ ಶತಮಾನದ ಸೇತುವೆ ಇದು. ಈ ಸೇತುವೆಯು ಆಗಿನ ಮೈಸೂರು ಸಂಸ್ಥಾನ ಮತ್ತು ಬಾಂಬೆ ರಾಜ್ಯದ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು.</p>.<p>ಈ ಸೇತುವೆ ಪಕ್ಕದಲ್ಲಿ ರಾಣೆಬೆನ್ನೂರು ಪಿಡಬ್ಲ್ಯೂಡಿ ಇಲಾಖೆಯಿಂದ ದೊಡ್ಡ ಗಾತ್ರದ ಚರಂಡಿಯನ್ನು ನಿರ್ಮಿಸಲಾಗಿದೆ. ಅಂದಾಜು ಒಂದೂವರೆ ಕಿ.ಮೀ. ಉದ್ದನೆಯ ಈ ಚರಂಡಿಯು ಕೊಡಿಯಾಲ ಹೊಸಪೇಟೆ ಗ್ರಾಮ ಹಾಗೂ ಸುತ್ತಲಿನ ವಸತಿ ಪ್ರದೇಶಗಳ ತ್ಯಾಜ್ಯ ನೀರು ಹಾಗೂ ಮಳೆ ನೀರನ್ನು ಹೊತ್ತು ತರುತ್ತದೆ.</p>.<p>ಅಪೂರ್ಣ ಕಾಮಗಾರಿ: ಚರಂಡಿ ನಿರ್ಮಿಸಿರುವುದು ಸರಿ, ಆದರೆ ಕಾಂಕ್ರೀಟ್ ಚರಂಡಿಯನ್ನು ನದಿ ಪಾತ್ರದವರೆಗೆ ನಿರ್ಮಿಸದೆ ಸೇತುವೆ ರಕ್ಷಣಾ ಗೋಡೆ ಬಳಿ ಕೊನೆಗೊಳಿಸಿದ್ದಾರೆ. ಇದು ಮಳೆಗಾಲವಾದ್ದರಿಂದ ಮಳೆ ನೀರು ಧಾರಾಕಾರವಾಗಿ ಚರಂಡಿಯಲ್ಲಿ ಹರಿದು ಬಂದು ಸೇತುವೆ ಪಕ್ಕದಲ್ಲಿ ದೊಡ್ಡ ಕಂದಕವನ್ನು ಸೃಷ್ಟಿಸಿದೆ.</p>.<p>ನೆಲದಲ್ಲಿ ಕಂದಕ ಸ್ರಷ್ಟಿಸುವ ಜೊತೆಗೆ ಸೇತುವೆಯ ರಕ್ಷಣೆಗಿರುವ ಗೋಡೆಯನ್ನು (ಪಿಚ್ಚಿಂಗ್) ದೊಡ್ಡ ಪ್ರಮಾಣದಲ್ಲಿ ಕೊರೆದಿದೆ. ಅಲ್ಲಿನ ಸೈಜು ಕಲ್ಲುಗಳು, ಮಣ್ಣು ನೀರಿನೊಂದಿಗೆ ಹರಿದು ಹೋಗಿವೆ. ಇದು ಹೀಗೇ ಮುಂದುವರೆದರೆ ಈ ಮಳೆಗಾಲದ ಅವಧಿಯಲ್ಲೇ ಸೇತುವೆಗೆ ದೊಡ್ಡ ಪ್ರಮಾಣದಲ್ಲಿ ಧಕ್ಕೆ ಒದಗಿಸುವ ಅಪಾಯವಿದೆ.</p>.<p>ಕೊಡಿಯಾಲ ಹೊಸಪೇಟೆಯ ಬಿರ್ಲಾ ಸರ್ಕಲ್ನಿಂದ ಈ ಸೇತುವೆವರೆಗೆ ಕಾಂಕ್ರೀಟ್ ರಸ್ತೆ ಹಾಗೂ ಕಾಂಕ್ರೀಟ್ ಚರಂಡಿ ನಿರ್ಮಾಣದ ₹10 ಕೋಟಿ ಮೊತ್ತದ ಗುತ್ತಿಗೆಯನ್ನು ದಾವಣಗೆರೆಯ ಎಸ್.ಆರ್.ಕನ್ಸ್ಟ್ರಕ್ಷನ್ ಸಂಸ್ಥೆ ಪಡೆದುಕೊಂಡಿದೆ.</p>.<p>ಆರಂಭದಿಂದಲೂ ಕುಂಟುತ್ತಾ ಸಾಗಿರುವ ರಸ್ತೆಯ ಕಾಮಗಾರಿಯಿಂದ ವಾಹನ ಸವಾರರು ತೊಂದರೆಗೀಡಾಗಿದ್ದರು. ಈಗ ಚರಂಡಿಯ ಅಪೂರ್ಣ ಕಾಮಗಾರಿಯಿಂದ ಸೇತುವೆ ಭದ್ರತೆಗೆ ಅಪಾಯ ಉಂಟು ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇನಾಯತ್ ಉಲ್ಲಾ ಟಿ.</strong></p>.<p>ಹರಿಹರ: ಇಲ್ಲಿಗೆ ಸಮೀಪದ ಕೊಡಿಯಾಲ ಹೊಸಪೇಟೆ ನದಿ ದಡದಲ್ಲಿ ಚರಂಡಿಯಿಂದ ಹರಿಯುವ ತ್ಯಾಜ್ಯ ನೀರು ಶತಮಾನದ ಸೇತುವೆಯ ಭದ್ರತೆಗೆ ಅಪಾಯ ಉಂಟು ಮಾಡಿದೆ. ಅಪೂರ್ಣ ಕಾಮಗಾರಿಯಿಂದಾಗಿ ಈ ಸ್ಥಿತಿ ಎದುರಾಗಿದೆ. </p>.<p>ಹರಿಹರ ನಗರ ಹಾಗೂ ಕೊಡಿಯಾಲ ಹೊಸಪೇಟೆ ನಡುವೆ ತುಂಗಭದ್ರಾ ನದಿಗೆ ಅಡ್ಡಲಾಗಿ ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣವಾದ ಶತಮಾನದ ಸೇತುವೆ ಇದು. ಈ ಸೇತುವೆಯು ಆಗಿನ ಮೈಸೂರು ಸಂಸ್ಥಾನ ಮತ್ತು ಬಾಂಬೆ ರಾಜ್ಯದ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು.</p>.<p>ಈ ಸೇತುವೆ ಪಕ್ಕದಲ್ಲಿ ರಾಣೆಬೆನ್ನೂರು ಪಿಡಬ್ಲ್ಯೂಡಿ ಇಲಾಖೆಯಿಂದ ದೊಡ್ಡ ಗಾತ್ರದ ಚರಂಡಿಯನ್ನು ನಿರ್ಮಿಸಲಾಗಿದೆ. ಅಂದಾಜು ಒಂದೂವರೆ ಕಿ.ಮೀ. ಉದ್ದನೆಯ ಈ ಚರಂಡಿಯು ಕೊಡಿಯಾಲ ಹೊಸಪೇಟೆ ಗ್ರಾಮ ಹಾಗೂ ಸುತ್ತಲಿನ ವಸತಿ ಪ್ರದೇಶಗಳ ತ್ಯಾಜ್ಯ ನೀರು ಹಾಗೂ ಮಳೆ ನೀರನ್ನು ಹೊತ್ತು ತರುತ್ತದೆ.</p>.<p>ಅಪೂರ್ಣ ಕಾಮಗಾರಿ: ಚರಂಡಿ ನಿರ್ಮಿಸಿರುವುದು ಸರಿ, ಆದರೆ ಕಾಂಕ್ರೀಟ್ ಚರಂಡಿಯನ್ನು ನದಿ ಪಾತ್ರದವರೆಗೆ ನಿರ್ಮಿಸದೆ ಸೇತುವೆ ರಕ್ಷಣಾ ಗೋಡೆ ಬಳಿ ಕೊನೆಗೊಳಿಸಿದ್ದಾರೆ. ಇದು ಮಳೆಗಾಲವಾದ್ದರಿಂದ ಮಳೆ ನೀರು ಧಾರಾಕಾರವಾಗಿ ಚರಂಡಿಯಲ್ಲಿ ಹರಿದು ಬಂದು ಸೇತುವೆ ಪಕ್ಕದಲ್ಲಿ ದೊಡ್ಡ ಕಂದಕವನ್ನು ಸೃಷ್ಟಿಸಿದೆ.</p>.<p>ನೆಲದಲ್ಲಿ ಕಂದಕ ಸ್ರಷ್ಟಿಸುವ ಜೊತೆಗೆ ಸೇತುವೆಯ ರಕ್ಷಣೆಗಿರುವ ಗೋಡೆಯನ್ನು (ಪಿಚ್ಚಿಂಗ್) ದೊಡ್ಡ ಪ್ರಮಾಣದಲ್ಲಿ ಕೊರೆದಿದೆ. ಅಲ್ಲಿನ ಸೈಜು ಕಲ್ಲುಗಳು, ಮಣ್ಣು ನೀರಿನೊಂದಿಗೆ ಹರಿದು ಹೋಗಿವೆ. ಇದು ಹೀಗೇ ಮುಂದುವರೆದರೆ ಈ ಮಳೆಗಾಲದ ಅವಧಿಯಲ್ಲೇ ಸೇತುವೆಗೆ ದೊಡ್ಡ ಪ್ರಮಾಣದಲ್ಲಿ ಧಕ್ಕೆ ಒದಗಿಸುವ ಅಪಾಯವಿದೆ.</p>.<p>ಕೊಡಿಯಾಲ ಹೊಸಪೇಟೆಯ ಬಿರ್ಲಾ ಸರ್ಕಲ್ನಿಂದ ಈ ಸೇತುವೆವರೆಗೆ ಕಾಂಕ್ರೀಟ್ ರಸ್ತೆ ಹಾಗೂ ಕಾಂಕ್ರೀಟ್ ಚರಂಡಿ ನಿರ್ಮಾಣದ ₹10 ಕೋಟಿ ಮೊತ್ತದ ಗುತ್ತಿಗೆಯನ್ನು ದಾವಣಗೆರೆಯ ಎಸ್.ಆರ್.ಕನ್ಸ್ಟ್ರಕ್ಷನ್ ಸಂಸ್ಥೆ ಪಡೆದುಕೊಂಡಿದೆ.</p>.<p>ಆರಂಭದಿಂದಲೂ ಕುಂಟುತ್ತಾ ಸಾಗಿರುವ ರಸ್ತೆಯ ಕಾಮಗಾರಿಯಿಂದ ವಾಹನ ಸವಾರರು ತೊಂದರೆಗೀಡಾಗಿದ್ದರು. ಈಗ ಚರಂಡಿಯ ಅಪೂರ್ಣ ಕಾಮಗಾರಿಯಿಂದ ಸೇತುವೆ ಭದ್ರತೆಗೆ ಅಪಾಯ ಉಂಟು ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>