<p><strong>ಸೊರಬ</strong>: ತಾಲ್ಲೂಕಿನ ಚಂದ್ರಗುತ್ತಿ ಭಾಗದಲ್ಲಿ ಮಂಗಳವಾರ ದಿಢೀರ್ ಸುರಿದ ಮಳೆಗೆ ಜನ–ಜೀವನ ಅಸ್ತವ್ಯಸ್ತವಾಗಿದೆ.</p>.<p>ತಾಲ್ಲೂಕಿನ ಇತಿಹಾಸಿ ಪ್ರಸಿದ್ಧ ಚಂದ್ರಗುತ್ತಿ ಭಾಗದಾದ್ಯಂತ ಭಾರಿ ಮಳೆಯಾಗಿದ್ದು, ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ತುಂಬೆಲ್ಲಾ ನೀರು ಹರಿದು ಪಾದಾಚಾರಿಗಳು ಹಾಗೂ ವಾಹನ ಸವಾರರು ಸಂಚರಿಸಲು ಹರಸಾಹಸ ಪಟ್ಟರು. </p>.<p>ಒಂದು ವಾರ ಮಳೆ ಬಿಡುವು ನೀಡಿತ್ತು. ಈ ಮಧ್ಯೆ ದಿಢೀರ್ ಮಳೆಯಾಗಿದ್ದು, ಇದರಿಂದ ಸಂಜೆ ವೇಳೆ ವ್ಯಾಪಾರಸ್ತರಿಗೆ ತೊಂದರೆ ಉಂಟಾಗಿತ್ತು. ಶ್ರಾವಣ ಮಾಸದ ಮಂಗವಾಳರದಲ್ಲಿ ರೇಣುಕಾಂಬ ದೇವಾಲಯಕ್ಕೆ ಸಾವಿರಾರು ಸಂಖ್ಯೆಯ ಭಕ್ತಾರು ಆಗಮಿಸಿದ್ದು, ದೇವಾಲಯದಿಂದ ಬಸ್ ನಿಲ್ದಾಣಕ್ಕೆ ತೆರಳಲು ಪರದಾಡುವಂತಾಯಿತು.</p>.<p>‘ಭಕ್ತರು ನೂರಾರು ಕಿ.ಮೀ ದೂರದಿಂದ ಆಗಮಿಸುತ್ತಾರೆ. ಚರಂಡಿ ನೀರು ರಸ್ತೆಗೆ ಹರಿದು ಓಡುಡುವುದೇ ದುಸ್ಥರವಾಗಿದೆ. ಐತಿಹಾಸಿಕ ದೇವಾಲಯದ ಸ್ಥಳದಲ್ಲೇ ಈ ಅವ್ಯವಸ್ಥೆ ಇದ್ದು, ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡಿನ ವಿಷಯ’ ಎಂದು ಭಕ್ತರು ಕಿಡಿಕಾರಿದರು. </p>.<p>ಚಂದ್ರಗುತ್ತಿಯಲ್ಲಿ 1 ಗಂಟೆಗಳ ಕಾಲ ಸುರಿದ ಮಳೆಗೆ ಚರಂಡಿ ನೀರು ರಸ್ತೆ ಮೇಲೆ ಹರಿದಿದ್ದು, ರಸ್ತೆಗಳೆಲ್ಲ ಕೆರೆಯಂತಾಗಿ ವಾಹನ ಸವಾರರು ಪರದಾಡಿದರು. ಹಲವಡೆ ವಿದ್ಯುತ್ ವ್ಯತ್ಯಯವಾಗಿ ತೊಂದರೆ ಅನುಭವಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೊರಬ</strong>: ತಾಲ್ಲೂಕಿನ ಚಂದ್ರಗುತ್ತಿ ಭಾಗದಲ್ಲಿ ಮಂಗಳವಾರ ದಿಢೀರ್ ಸುರಿದ ಮಳೆಗೆ ಜನ–ಜೀವನ ಅಸ್ತವ್ಯಸ್ತವಾಗಿದೆ.</p>.<p>ತಾಲ್ಲೂಕಿನ ಇತಿಹಾಸಿ ಪ್ರಸಿದ್ಧ ಚಂದ್ರಗುತ್ತಿ ಭಾಗದಾದ್ಯಂತ ಭಾರಿ ಮಳೆಯಾಗಿದ್ದು, ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ತುಂಬೆಲ್ಲಾ ನೀರು ಹರಿದು ಪಾದಾಚಾರಿಗಳು ಹಾಗೂ ವಾಹನ ಸವಾರರು ಸಂಚರಿಸಲು ಹರಸಾಹಸ ಪಟ್ಟರು. </p>.<p>ಒಂದು ವಾರ ಮಳೆ ಬಿಡುವು ನೀಡಿತ್ತು. ಈ ಮಧ್ಯೆ ದಿಢೀರ್ ಮಳೆಯಾಗಿದ್ದು, ಇದರಿಂದ ಸಂಜೆ ವೇಳೆ ವ್ಯಾಪಾರಸ್ತರಿಗೆ ತೊಂದರೆ ಉಂಟಾಗಿತ್ತು. ಶ್ರಾವಣ ಮಾಸದ ಮಂಗವಾಳರದಲ್ಲಿ ರೇಣುಕಾಂಬ ದೇವಾಲಯಕ್ಕೆ ಸಾವಿರಾರು ಸಂಖ್ಯೆಯ ಭಕ್ತಾರು ಆಗಮಿಸಿದ್ದು, ದೇವಾಲಯದಿಂದ ಬಸ್ ನಿಲ್ದಾಣಕ್ಕೆ ತೆರಳಲು ಪರದಾಡುವಂತಾಯಿತು.</p>.<p>‘ಭಕ್ತರು ನೂರಾರು ಕಿ.ಮೀ ದೂರದಿಂದ ಆಗಮಿಸುತ್ತಾರೆ. ಚರಂಡಿ ನೀರು ರಸ್ತೆಗೆ ಹರಿದು ಓಡುಡುವುದೇ ದುಸ್ಥರವಾಗಿದೆ. ಐತಿಹಾಸಿಕ ದೇವಾಲಯದ ಸ್ಥಳದಲ್ಲೇ ಈ ಅವ್ಯವಸ್ಥೆ ಇದ್ದು, ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡಿನ ವಿಷಯ’ ಎಂದು ಭಕ್ತರು ಕಿಡಿಕಾರಿದರು. </p>.<p>ಚಂದ್ರಗುತ್ತಿಯಲ್ಲಿ 1 ಗಂಟೆಗಳ ಕಾಲ ಸುರಿದ ಮಳೆಗೆ ಚರಂಡಿ ನೀರು ರಸ್ತೆ ಮೇಲೆ ಹರಿದಿದ್ದು, ರಸ್ತೆಗಳೆಲ್ಲ ಕೆರೆಯಂತಾಗಿ ವಾಹನ ಸವಾರರು ಪರದಾಡಿದರು. ಹಲವಡೆ ವಿದ್ಯುತ್ ವ್ಯತ್ಯಯವಾಗಿ ತೊಂದರೆ ಅನುಭವಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>