<p><strong>ಶಿವಮೊಗ್ಗ</strong>: ಮೇ ತಿಂಗಳ ಮೂರನೇ ವಾರ ಪೂರ್ಣಗೊಳ್ಳುವ ಮುನ್ನವೇ ಮಲೆನಾಡಿನಲ್ಲಿ ವರುಣನಾರ್ಭಟ ಆರಂಭವಾಗಿದೆ. ಮೋಡ ಕವಿದ ವಾತಾವರಣ, ಬಿರುಸು ಮಳೆ, ಕೆಲ ಹೊತ್ತು ನೇಸರನ ಇಣುಕು ನೋಟ ಮುಂಗಾರು ಹೊತ್ತಿನ ಅನುಭವ ಆಗುತ್ತಿದೆ.</p>.<p>ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ಸೊರಬ ತಾಲ್ಲೂಕಿನಲ್ಲಿ ಹೆಚ್ಚು ಮಳೆಸುರಿದಿದೆ. ಹವಾಮಾನ ಇಲಾಖೆಯ ವರುಣ ಮಿತ್ರನ ಮಾಹಿತಿಯಂತೆ ಸೊರಬ ತಾಲ್ಲೂಕಿನ ದೊಡ್ಡಿಕೊಪ್ಪದಲ್ಲಿ ಹೆಚ್ಚು ಮಳೆ (6.85 ಸೆಂ.ಮೀ) ಬಿದ್ದಿದೆ.</p>.<p>ಸೊರಬ ತಾಲ್ಲೂಕಿನ ಗುಡವಿಯಲ್ಲಿ 6.15 ಸೆಂ.ಮೀ, ಅಗಸನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ 5.45 ಸೆಂ.ಮೀ ಹಾಗೂ ನ್ಯಾರ್ಸಿಯಲ್ಲಿ 4.8 ಸೆಂ.ಮೀ ಮಳೆ ಸುರಿದಿದೆ. ಹೊಸನಗರ ತಾಲ್ಲೂಕಿನ ಸುಳಗೋಡಿನಲ್ಲಿ 2.4 ಸೆಂ.ಮೀ ಹಾಗೂ ಭದ್ರಾವತಿ ತಾಲ್ಲೂಕಿನ ಡಿ.ಕಲ್ಲಹಳ್ಳಿಯಲ್ಲಿ 1.3 ಸೆಂ.ಮೀ ಮಳೆ ಬಿದ್ದಿದೆ.</p>.<p>ಬಿರುಸಿನ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಶಿವಮೊಗ್ಗ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಮಳೆ ಹಿನ್ನೆಲೆಯಲ್ಲಿ ಬುಧವಾರದಿಂದ (ಮೇ 21) ಆರಂಭವಾಗಬೇಕಿದ್ದ ಸಿಬಿಎಸ್ಇ ಪಠ್ಯಕ್ರಮದ ಶಾಲೆಗಳನ್ನು ಮೇ 23ಕ್ಕೆ ಮುಂದೂಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ಮೇ ತಿಂಗಳ ಮೂರನೇ ವಾರ ಪೂರ್ಣಗೊಳ್ಳುವ ಮುನ್ನವೇ ಮಲೆನಾಡಿನಲ್ಲಿ ವರುಣನಾರ್ಭಟ ಆರಂಭವಾಗಿದೆ. ಮೋಡ ಕವಿದ ವಾತಾವರಣ, ಬಿರುಸು ಮಳೆ, ಕೆಲ ಹೊತ್ತು ನೇಸರನ ಇಣುಕು ನೋಟ ಮುಂಗಾರು ಹೊತ್ತಿನ ಅನುಭವ ಆಗುತ್ತಿದೆ.</p>.<p>ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ಸೊರಬ ತಾಲ್ಲೂಕಿನಲ್ಲಿ ಹೆಚ್ಚು ಮಳೆಸುರಿದಿದೆ. ಹವಾಮಾನ ಇಲಾಖೆಯ ವರುಣ ಮಿತ್ರನ ಮಾಹಿತಿಯಂತೆ ಸೊರಬ ತಾಲ್ಲೂಕಿನ ದೊಡ್ಡಿಕೊಪ್ಪದಲ್ಲಿ ಹೆಚ್ಚು ಮಳೆ (6.85 ಸೆಂ.ಮೀ) ಬಿದ್ದಿದೆ.</p>.<p>ಸೊರಬ ತಾಲ್ಲೂಕಿನ ಗುಡವಿಯಲ್ಲಿ 6.15 ಸೆಂ.ಮೀ, ಅಗಸನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ 5.45 ಸೆಂ.ಮೀ ಹಾಗೂ ನ್ಯಾರ್ಸಿಯಲ್ಲಿ 4.8 ಸೆಂ.ಮೀ ಮಳೆ ಸುರಿದಿದೆ. ಹೊಸನಗರ ತಾಲ್ಲೂಕಿನ ಸುಳಗೋಡಿನಲ್ಲಿ 2.4 ಸೆಂ.ಮೀ ಹಾಗೂ ಭದ್ರಾವತಿ ತಾಲ್ಲೂಕಿನ ಡಿ.ಕಲ್ಲಹಳ್ಳಿಯಲ್ಲಿ 1.3 ಸೆಂ.ಮೀ ಮಳೆ ಬಿದ್ದಿದೆ.</p>.<p>ಬಿರುಸಿನ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಶಿವಮೊಗ್ಗ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಮಳೆ ಹಿನ್ನೆಲೆಯಲ್ಲಿ ಬುಧವಾರದಿಂದ (ಮೇ 21) ಆರಂಭವಾಗಬೇಕಿದ್ದ ಸಿಬಿಎಸ್ಇ ಪಠ್ಯಕ್ರಮದ ಶಾಲೆಗಳನ್ನು ಮೇ 23ಕ್ಕೆ ಮುಂದೂಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>