ಕಪ್ಪು ಹಣವಿರುವ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು, ವ್ಯಾಪಾರಸ್ಥರು, ದೊಡ್ಡ ದೊಡ್ಡ ಉದ್ದಿಮೆದಾರರು ತಮಗೆ ಇಷ್ಟವಾಗುವಷ್ಟು ಭೂಮಿ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಕಪ್ಪು ಹಣ ಭೂಮಿಗೆ ಸುರಿಯಲು ಅವಕಾಶ ಮಾಡಿಕೊಡಲಾಗಿದೆ.ಬಂಡಾವಾಳ ಶಾಹಿಗಳು ಭೂಮಿ ಖರೀದಿಗೆ ಮುಂದಾಗುವ ಪರಿಣಾಮ ಭೂಮಿ ಬೆಲೆ ಹೆಚ್ಚಳವಾಗಲಿದೆ.ಶೇ 80ರಷ್ಟು ಭಾಗವಿರುವ ಸಣ್ಣ, ಅತಿಸಣ್ಣ ರೈತರುನಾಶವಾಗುವರು. ಖಾಸಗಿ, ಫೈನಾನ್ಸ್ ಮತ್ತು ಬ್ಯಾಂಕ್, ಸೊಸೈಟಿ ಸಾಲಗಾರರ ಕಿರುಕುಳಕ್ಕೆ ಹೆದರಿ ಈಗಾಗಲೇ ಒಂದಷ್ಟು ಭೂಮಿ ಮಾರಿಕೊಂಡಿದ್ದಾರೆ.ಈಗ ಸಂಪೂರ್ಣ ಬೀದಿಗೆ ಬೀಳುತ್ತಾರೆ ಎಂದು ಭವಿಷ್ಯ ನುಡಿದರು.