ಅಂತರಗಂಗೆ ಸಮೀಪದ ಉಕ್ಕುಂದ ಗ್ರಾಮದ ಕೂಲಿ ಕೆಲಸ ಮಾಡುವ ಪ್ರದೀಪಕುಮಾರ್, ಸಿಂಧು ದಂಪತಿಯ ಮಗಳಾದ ಪ್ರತೀಕ್ಷಾ ಅರಳು ಹುರಿದಂತೆ ಪಟಪಟನೆ ಮಾತನಾಡುವ ಜೊತೆಗೆ ಸ್ಥಳೀಯ ಶಾಸಕರಿಂದ ಹಿಡಿದು ರಾಜ್ಯ, ರಾಷ್ಟ್ರ, ಧ್ವಜ, ವಾಹನ... ಹೀಗೆ ಹಲವು ವಿಷಯಗಳ ಕುರಿತು ಪ್ರಶ್ನಿಸುತ್ತ ಹೋದಂತೆ ಉತ್ತರದ ಸುರಿಮಳೆ ಸುರಿಸುತ್ತಾಳೆ. ಇವಳ ಮುಡಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಕಿರೀಟದ ಗರಿ ಸಿಕ್ಕಿದೆ.