ಶಿವಮೊಗ್ಗ: ಬುರ್ಖಾ ಧರಿಸಿ ಬಂದ ಮಹಿಳೆಗೆ ಅವಮಾನಿಸಿದ ಆರೋಪದ ಮೇಲೆ ಇಲ್ಲಿನ ಗೋಪಿ ವೃತ್ತದ ಬಳಿ ಇರುವ ಚಿನ್ನಾಭರಣ ಮಳಿಗೆ ವಿರುದ್ಧ ಗುರುವಾರ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಮಾರ್ನವಮಿ ಬೈಲ್ನ ಜಫ್ರುಲ್ಲಾ ಸತ್ತರ್ ಖಾನ್ ಅವರು ಪತ್ನಿ ಜತೆ ಮಳಿಗೆಗೆ ಚಿನ್ನಾಭರಣ ಖರೀದಿಸಲು ಹೋಗಿದ್ದಾರೆ. ಆಗ ಅಲ್ಲಿನ ವ್ಯವಸ್ಥಾಪಕ, ಕಾವಲುಗಾರರು ಬುರ್ಖಾ ತೆಗೆದು, ಮಾಸ್ಕ್ ಧರಿಸಿ ಬರುವಂತೆ, ಇಲ್ಲವೇ ಹೊರಗೆ ಹೋಗುವಂತೆ ಜನರ ಎದುರೇ ಅವಮಾನಿಸಿದ್ದಾರೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ದೂರು ನೀಡುವ ಉದ್ದೇಶ ಇರಲಿಲ್ಲ. ಭವಿಷ್ಯದಲ್ಲಿ ನಮ್ಮಂತೆ ಸಮಾಜದ ಇತರೆ ಮಹಿಳೆಯರಿಗೂ ಅವಮಾನವಾಗಬಾರದು ಎನ್ನುವ ಕಾರಣಕ್ಕೆ ದೂರು ನೀಡಿರುವುದಾಗಿ ಜಫ್ರುಲ್ಲಾ ಅವರು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.