ಆರ್ಎಸ್ಎಸ್ ಟೀಕೆ ಮಾಡುವ ಜೆಡಿಎಸ್ ಎಲ್ಲಿದೆ ಎಂದು ಹುಡುಕಬೇಕು. ಕುಂಟನೊಬ್ಬ ಕಟ್ಟಿ ಪೈಲ್ವಾನನೊಂದಿಗೆ ಹೋರಾಟ ಮಾಡಿದಂತೆ ಇದೆ ಜೆಡಿಎಸ್ ಕತೆ. ಆರ್ಎಸ್ಎಸ್ ತೆಗಳಿದರೆ ಮತ ಸಿಗುತ್ತದೆ ಎಂಬ ಭ್ರಮೆಯಲ್ಲಿ ಕುಮಾರಸ್ವಾಮಿ ಇದ್ದಾರೆ. ದೇವೇಗೌಡರು ಪ್ರಾದೇಶಿಕ ಪಕ್ಷ ಬೆಂಬಲಿಸಿ ಎಂದು ಹೇಳಿದ್ದಾರೆ. ಆದರೆ, ರಾಷ್ಟ್ರೀಯ ಪಕ್ಷ ಕಾಂಗ್ರೆಸ್ಗೇ ಪ್ರಾದೇಶಿಕ ಪಕ್ಷದ ಸ್ಥಿತಿ ಬಂದಿದೆ ಎಂದು ಛೇಡಿಸಿದರು.