ದಾವಣಗೆರೆಯ ಕುಂದವಾಡ ಕೆರೆಯಲ್ಲಿ ಜಲ ಸಂಗ್ರಹ ಇಲ್ಲದೇ ಇರುವುದರಿಂದ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ಹೀಗಾಗಿ ನಾಲೆಗೆ ನೀರು ಹರಿಸಬೇಕು ಎಂದು ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಅವರು ಭದ್ರಾ ಕಾಡಾ ಮಂಡಳಿಯನ್ನು ಕೋರಿದ್ದರು. ಇದಕ್ಕೆ ಸ್ಪಂದಿಸಿರುವ ಕಾಡಾ ಮಂಡಳಿಯು, ಬಲದಂಡೆ ನಾಲೆಗೆ ಶನಿವಾರ ಮಧ್ಯರಾತ್ರಿಯಿಂದಲೇ 500 ಕ್ಯುಸೆಕ್ ನೀರು ಹಾಗೂ ಭಾನುವಾರ ರಾತ್ರಿಯಿಂದ 1,000 ಕ್ಯುಸೆಕ್ ನೀರು ಹರಿಸಲು ಸಮ್ಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.