<p>ಹೊಸನಗರ: ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಗೆ ಬೇಸತ್ತು ಹೆದ್ದಾರಿಯ ಹೊಂಡ ಗುಂಡಿಗೆ ಅಡಿಕೆ ಗಿಡ ನೆಟ್ಟು ವ್ಯಕ್ತಿಯೋರ್ವ ಏಕಾಂಗಿಯಾಗಿ ಶನಿವಾರ ಪ್ರತಿಭಟನೆ ನಡೆಸಿದರು.</p><p><br> ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿ (766ಸಿ) ಹೊಸನಗರದಿಂದ ನಗರದವರೆಗೆ ಸಂಪೂರ್ಣ ಹದಗೆಟ್ಟು ಹೋಗಿದೆ. ರಸ್ತೆ ತುಂಬಾ ಹೊಂಡ ಗುಂಡಿಗಳಿಂದ ತುಂಬಿ ಹೋಗಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಮತ್ತಿಮನೆ ನಿವಾಸಿ ಶ್ರೀಕಾಂತ್ ಒ.ಆರ್ ವಿನೂತನ ಪ್ರತಿಭಟನೆ ನಡೆಸಿದರು.</p><p><br> ನಗರ ದಿಂದ ಹಿಲ್ಕುಂಜಿವರೆಗೆ ಸುಮಾರು ಏಳೆಂಟು ಕಿಮೀ ವರೆಗಿನ ರಸ್ತೆಯ ಗುಂಡಿಗಳಲ್ಲಿ 50 ಕ್ಕು ಹೆಚ್ಚು ಅಡಿಕೆ ಗಿಡ ನೆಟ್ಟು ಆಕ್ರೋಶ ಹೊರಹಾಕಿದ್ದಾರೆ.<br> ಬಳಿಕ ಮಾತನಾಡಿದ ಅವರು, ಹೊಸನಗರ ದಿಂದ ನಗರದ ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟು ವರ್ಷಗಳೇ ಕಳೆದರೂ ಯಾವುದೇ ದುರಸ್ಥಿಯಾಗಲಿ, ಡಾಂಬರೀಕರಣವಾಗಲೀ ಮಾಡಿಲ್ಲ. ಇಲ್ಲಿ ವಾಹನದಲ್ಲಿ ಸಂಚಾರ ಮಾಡೋದಕ್ಕಿಂತ ನಡೆದು ಹೋಗೋದೇ ಉತ್ತಮ ಎಂಬಂತಾಗಿದೆ.</p><p> ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಕೊಳ್ಳಲಿ ಎಂದು ಈ ರೀತಿ ಪ್ರತಿಭಟನೆ ನಡೆಸಿದ್ದೇನೆ. ಇದು ಸಾಂಕೇತಿಕ ಪ್ರತಿಭಟನೆ ಆಗಿದೆ. 15 ದಿನದೊಳಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡದಿದ್ದಲ್ಲಿ. ಮತ್ತೆ ಖುದ್ದಾಗಿ ಟ್ರಾಕ್ಟರ್ನಲ್ಲಿ ಮಣ್ಣು ತಂದು ರಸ್ತೆ ಗುಂಡಿ ಮುಚ್ಚುವುದಾಗಿ ಹೇಳಿದ್ದಾರೆ. ಈ ಕಾರ್ಯದಲ್ಲಿ ಆಸಕ್ತರು ಭಾಗವಹಿಸಬಹುದು ಎಂದು ಮನವಿ ಮಾಡಿದ್ದಾರೆ.<br> ಚಿತ್ರ: ಹೊಸನಗರ - ನಗರ ರಾಷ್ಟ್ರೀಯ ಹೆದ್ದಾರಿ ಗುಂಡಿಯಲ್ಲಿ ಅಡಿಕೆ ಗಿಡ ನೆಡುತ್ತಿರುವ ಸಾಮಾಜಿಕ ಹೋರಾಟಗಾರ ಶ್ರೀಕಾಂತ ಮತ್ತಿಮನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸನಗರ: ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಗೆ ಬೇಸತ್ತು ಹೆದ್ದಾರಿಯ ಹೊಂಡ ಗುಂಡಿಗೆ ಅಡಿಕೆ ಗಿಡ ನೆಟ್ಟು ವ್ಯಕ್ತಿಯೋರ್ವ ಏಕಾಂಗಿಯಾಗಿ ಶನಿವಾರ ಪ್ರತಿಭಟನೆ ನಡೆಸಿದರು.</p><p><br> ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿ (766ಸಿ) ಹೊಸನಗರದಿಂದ ನಗರದವರೆಗೆ ಸಂಪೂರ್ಣ ಹದಗೆಟ್ಟು ಹೋಗಿದೆ. ರಸ್ತೆ ತುಂಬಾ ಹೊಂಡ ಗುಂಡಿಗಳಿಂದ ತುಂಬಿ ಹೋಗಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಮತ್ತಿಮನೆ ನಿವಾಸಿ ಶ್ರೀಕಾಂತ್ ಒ.ಆರ್ ವಿನೂತನ ಪ್ರತಿಭಟನೆ ನಡೆಸಿದರು.</p><p><br> ನಗರ ದಿಂದ ಹಿಲ್ಕುಂಜಿವರೆಗೆ ಸುಮಾರು ಏಳೆಂಟು ಕಿಮೀ ವರೆಗಿನ ರಸ್ತೆಯ ಗುಂಡಿಗಳಲ್ಲಿ 50 ಕ್ಕು ಹೆಚ್ಚು ಅಡಿಕೆ ಗಿಡ ನೆಟ್ಟು ಆಕ್ರೋಶ ಹೊರಹಾಕಿದ್ದಾರೆ.<br> ಬಳಿಕ ಮಾತನಾಡಿದ ಅವರು, ಹೊಸನಗರ ದಿಂದ ನಗರದ ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟು ವರ್ಷಗಳೇ ಕಳೆದರೂ ಯಾವುದೇ ದುರಸ್ಥಿಯಾಗಲಿ, ಡಾಂಬರೀಕರಣವಾಗಲೀ ಮಾಡಿಲ್ಲ. ಇಲ್ಲಿ ವಾಹನದಲ್ಲಿ ಸಂಚಾರ ಮಾಡೋದಕ್ಕಿಂತ ನಡೆದು ಹೋಗೋದೇ ಉತ್ತಮ ಎಂಬಂತಾಗಿದೆ.</p><p> ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಕೊಳ್ಳಲಿ ಎಂದು ಈ ರೀತಿ ಪ್ರತಿಭಟನೆ ನಡೆಸಿದ್ದೇನೆ. ಇದು ಸಾಂಕೇತಿಕ ಪ್ರತಿಭಟನೆ ಆಗಿದೆ. 15 ದಿನದೊಳಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡದಿದ್ದಲ್ಲಿ. ಮತ್ತೆ ಖುದ್ದಾಗಿ ಟ್ರಾಕ್ಟರ್ನಲ್ಲಿ ಮಣ್ಣು ತಂದು ರಸ್ತೆ ಗುಂಡಿ ಮುಚ್ಚುವುದಾಗಿ ಹೇಳಿದ್ದಾರೆ. ಈ ಕಾರ್ಯದಲ್ಲಿ ಆಸಕ್ತರು ಭಾಗವಹಿಸಬಹುದು ಎಂದು ಮನವಿ ಮಾಡಿದ್ದಾರೆ.<br> ಚಿತ್ರ: ಹೊಸನಗರ - ನಗರ ರಾಷ್ಟ್ರೀಯ ಹೆದ್ದಾರಿ ಗುಂಡಿಯಲ್ಲಿ ಅಡಿಕೆ ಗಿಡ ನೆಡುತ್ತಿರುವ ಸಾಮಾಜಿಕ ಹೋರಾಟಗಾರ ಶ್ರೀಕಾಂತ ಮತ್ತಿಮನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>