ಬೀರೂರಿನ ಗಿರೀಶ್ ಅವರಿಗೆ ಮೂತ್ರಪಿಂಡ ಕಸಿ ಆಗಬೇಕಿತ್ತು. ಆದರೆ, ದಾನಿಗಳು ಸಿಕ್ಕಿರಲಿಲ್ಲ. ಅವರ ಪತ್ನಿಯೇ ಕಿಡ್ನಿ ದಾನ ಮಾಡಲು ಸಿದ್ಧರಾಗಿದ್ದರು. ರೋಗಿಯ ರಕ್ತ ‘ಬಿ’ ಪಾಸಿಟಿವ್ ಇತ್ತು. ಪತ್ನಿಯ ರಕ್ತದ ಗುಂಪು ‘ಎ’ ಪಾಸಿಟಿವ್ ಇತ್ತು. ಹಾಗಾಗಿ ಕಸಿ ಮಾಡುವುದು ಕಷ್ಟವಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಅವರು ದಾಖಲಾದಾಗ ಮೂತ್ರಪಿಂಡ ರಕ್ಷಿಸುವ ಔಷಧಗಳ ಮೂಲಕ (ಪ್ಲಾಸ್ಮಾಫೆರೆಸಿಸ್ ವಿಧಾನ) ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಅವರ ಪತ್ನಿ ಹರ್ಷಿತಾ ಕೂಡ ಕಿಡ್ನಿ ದಾನ ಮಾಡಿದ್ದರೂ ಆರೋಗ್ಯವಾಗಿದ್ದಾರೆ ಎಂದರು.